SHIVAMOGGA| Dec 17, 2023 | ಶಿವಮೊಗ್ಗದಲ್ಲಿ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮತ್ತೊಂದು ಸೇತುವೆ ಉದ್ಘಾಟನೆಗೊಂಡಿದೆ. ಇವತ್ತು 20.38ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಎನ್ಟಿ ರಸ್ತೆಯನ್ನ ಸಂಪರ್ಕಿಸುವ ಸೇತುವೆಯನ್ನ ಸಂಸದ ಬಿ.ವೈ.ರಾಘವೇಂದ್ರ ರವರು ಉದ್ಘಾಟನೆಗೊಳಿಸಿದ್ರು.
ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಂತೆ ತುಂಗಾ ನದಿಗೆ ಎರಡು ಸೇತುವೆಗಳಿದ್ದವು. ಹೊಳೆಬಸ್ಸ್ಟಾಪ್ನ ಮೂಲಕ ವಿದ್ಯಾನಗರ ಸಂಪರ್ಕಿಸುವ ಹಳೆ ಸೇತುವೆ ಒಂದಾದರೆ ಇನ್ನೊಂದು ಕಡೆ ಎನ್ಟಿ ರಸ್ತೆಗೆ ಹೊಂದಿಕೊಂಡ ಬೈಪಾಸ್ ‘ರಸ್ತೆ ಮೂಲಕ ಎಂಆರ್ಎಸ್ ಸರ್ಕಲ್ ಕಡೆಗೆ ಹೋಗುವ ರಸ್ತೆಯನ್ನು ಸಂರ್ಪಕಿಸುವ ಸೇತುವೆ ಇನ್ನೊಂದು ಕಡೆಯಾಗಿತ್ತು. ಇದನ್ನ ಹೊಸ ಸೇತುವೆ ಎಂದೇ ಕರೆಯುತ್ತಿದ್ರು.
READ : ಭದ್ರಾವತಿ ಹೆಚ್.ಕೆ.ಜಂಕ್ಷನ್ ಬಳಿ ಮರಕ್ಕೆ ಕಾರು ಡಿಕ್ಕಿ ! ಚಿಕ್ಕಮಗಳೂರು ನಿವಾಸಿ ಸಾವು!
ಈ ನಡುವೆ ಹೊಳೆ ಬಸ್ ನಿಲ್ದಾಣದ ಕಡೆಯಿಂದ ಮತ್ತೊಂದು ಹೊಸಸೇತುವೆ ನಿರ್ಮಾಣವಾಗಿತ್ತು. ಹಾಗಾಗಿ ಹಳೆ ಸೇತುವೆ ಹೊಸ ಸೇತುವೆ ಹೆಸರುಗಳು ಮರೆಯಾದವು. ಇದೀಗ ಎನ್ ಟಿ ರೋಡ್ನ ಬೈಪಾಸ್ ರೋಡ್ನಿಂದ ಮತ್ತೊಂದು ಸೇತುವೆಯನ್ನ ನಿರ್ಮಿಸಲಾಗಿದೆ. ಈ ಸೇತುವೆಯ ಉದ್ಘಾಟನೆಯನ್ನ ಸಂಸದ ಬಿ.ವೈ.ರಾಘವೇಂದ್ರರವರು ನೆರವೇರಿಸಿದ್ದಾರೆ. ಈ ವೇಳೇ ಸ್ಥಳೀಯ ಶಾಸಕ ಎಸ್ಎನ್ ಚನ್ನಬಸಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಸ್ಥಳದಲ್ಲಿದ್ದರು.