ಶಿವಮೊಗ್ಗ / ನಗರದಲ್ಲಿ ವಿನಾಕಾರಣದ ಕಿರಿಕ್ಗಳು ಹೆಚ್ಚುತ್ತಿವೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ತಾಲ್ಲೂಕಿನ ಲಕ್ಕವಳ್ಳಿ ರಸ್ತೆಯಲ್ಲಿರುವ ಲಕ್ಕಿನಕೊಪ್ಪ ಸರ್ಕಲ್ ಬಳಿ ಹೋಟೆಲ್ನಲ್ಲಿ ಊಟ ನೀಡಲು ತಡವಾಗಿದ್ದಕ್ಕೆ ಹೋಟೆಲ್ ಮಾಲೀಕರು ಹಾಗೂ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ.

ಲಕ್ಕವಳ್ಳಿಯಲ್ಲಿ ಕರಡಿ ಓಡಾಟದ ಸುದ್ದಿ ಓದಿ : ಶಿವಮೊಗ್ಗ ವಿಮಾನ ನಿಲ್ದಾಣದೊಳಗೆ ಕರಡಿ ಪ್ರತ್ಯಕ್ಷ, ವಿಡಿಯೋ ನೋಡಿ
ಸಂತ್ರಸ್ತ ಕಿರಣ್ ನಾಯ್ಕ್ ಎಂಬವರು ತಮ್ಮ ದೂರಿನಲ್ಲಿ ಉಲ್ಲೇಳಿಸಿದ್ದಂತೆ ಶ್ರೀ ಲಕ್ಷ್ಮಿ ಬಾರ್ ಅಂಡ್ ರೆಸ್ಟೋರೆಂಟ್ ಮಾರ್ಜ್ ಮೂವತ್ತನೇ ತಾರೀಖು ಈ ರಾತ್ರಿ 9:30ಕ್ಕೆ ಈ ಘಟನೆ ನಡೆದಿದೆ. ಲಕ್ಕಿನಕೊಪ್ಪ ಸರ್ಕಲ್ ಬಳಿ ಇರುವ ಹೋಟೆಲ್ಗೆ ಬಂದ ಅಲ್ಲಿನ ಇಬ್ಬರು ಊಟಕ್ಕೆ ಆರ್ಡರ್ ಮಾಡಿದ್ದರು.ಊಟ ರೆಡಿಮಾಡಿಕೊಡುವುದು ತಡವಾಗಿದ್ದಕ್ಕೆ ಸಿಟ್ಟಾದ ಆರೋಪಿಗಳು ಕಿರಣ್ ಅವರ ತಾಯಿಗೆ ಏಕವಚನದಲ್ಲಿ ನಿಂದಿಸಿದ್ಧಾರೆ. ಅಲ್ಲದೆ ಕೇಳಿದ್ದಕ್ಕೆ ಕಿರಣ್ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆ ಬಿಡಿಸಲು ಬಂದ ಕಿರಣ್ ಅವರ ತಾಯಿಗೂ ಹಲ್ಲೆಯಾಗಿದೆ. ಕಿರಣ್ ಅವರ ತಂದೆಯನ್ನು ಎಳೆದಾಡಿದ್ದಾರೆ. ಬಳಿಕ ಬಾರ್ನಲ್ಲಿದ್ದ ಸಿಬ್ಬಂದಿ ಬಂದು ಗಲಾಟೆ ಬಿಡಿಸಿದ್ದಾರೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ನಡೆಸ್ತಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
