ಕುಖ್ಯಾತವಾಗ್ತಿದೆಯಾ ಶಿವಮೊಗ್ಗ KSRTC ​ ನಿಲ್ದಾಣ? ಮಹಿಳೆಯರೆ ಹುಷಾರ್! ಭದ್ರಾವತಿ ಬಸ್​ನಲ್ಲಿ ನಡೀತು ಈ ಘಟನೆ

A case has been registered at Doddapet police station in connection with the theft of gold ornaments of a woman who boarded a Bhadravathi bus at KSRTC bus stand in Shivamogga

ಕುಖ್ಯಾತವಾಗ್ತಿದೆಯಾ  ಶಿವಮೊಗ್ಗ KSRTC ​ ನಿಲ್ದಾಣ? ಮಹಿಳೆಯರೆ ಹುಷಾರ್!  ಭದ್ರಾವತಿ ಬಸ್​ನಲ್ಲಿ ನಡೀತು ಈ ಘಟನೆ

SHIVAMOGGA NEWS / Malenadu today/ Nov 26, 2023 | Malenadutoday.com  

SHIVAMOGGA |  ಶಿವಮೊಗ್ಗ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಹೊಸದೊಂದು ದಾಖಲೆಯನ್ನ ಬರೆಯುತ್ತಿದೆ. ನಿರಂತರ ಕಳ್ಳತನವಾಗುತ್ತಿದ್ದರೂ ಬಸ್​ ನಿಲ್ದಾಣದ ಬಗ್ಗೆ ಪೊಲೀಸ್ ವ್ಯವಸ್ಥೆ ಹಾಗೂ ಕೆಎಸ್​​ಆರ್​ಟಿಸಿ ಘಟಕ ಕ್ರಮ ಕೈಗೊಳ್ತಿಲ್ಲ. 

ಇದರ ಪರಿಣಾಮವಾಗಿ ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದ್ದು, ಬರೋಬ್ಬರಿ 1.80 ಲಕ್ಷ ಮೌಲ್ಯದ ಚಿನ್ನಾಭರಣ ವನ್ನು ಕಳವು ಮಾಡಲಾಗಿದೆ 

READ : Powercut| ನವೆಂಬರ್​ 27 ರಂದು ಶಿವಮೊಗ್ಗ ಸಿಟಿಯ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!

ಕಳೆದ 22-11-2023 ರಂದು ಈ ಘಟನೆ ನಡೆದಿದೆ. ಭದ್ರಾವತಿಯ ನಿವಾಸಿ ಮಹಿಳೆಯೊಬ್ಬರು ಶಿವಮೊಗ್ಗದ ಕೀರ್ತಿನಗರ ದಲ್ಲಿರುವ ಸಂಬಂಧಿಕರ ಮನೆಗೆ ನಾಮಕರಣ ಕಾರ್ಯಕ್ರಮಕ್ಕೆ ಬಂದಿದ್ದಾರೆ. ವಾಪಸ್​ ಭದ್ರಾವತಿಗೆ ಹೋಗಲು ಶಿವಮೊಗ್ಗ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಸಂಜೆ 05-45 ರ ಹೊತ್ತಿಗೆ ಬಂದಿದ್ದಾರೆ. 

ಈ ಮಧ್ಯೆ  ಶಿವಮೊಗ್ಗ-ಭದ್ರಾವತಿ ಬಸ್ಸುಗಳು ನಿಲುವ ಸ್ಟ್ಯಾಂಡ್ ನಲ್ಲಿ. ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ  ತಮ್ಮ ಬ್ಯಾಗ್​ ತೆಗೆದು ಪರ್ಸ್ ಭದ್ರವಾಗಿದೆಯಾ ಎಂದು ನೋಡಿದ್ದಾರೆ. ಅಲ್ಲಿಯವರೆಗೂ ಇದ್ದ ಬಸ್​ ಭದ್ರಾವತಿ ಬಸ್ ಹತ್ತಿ, ಭದ್ರಾವತಿಯಲ್ಲಿ ಇಳಿಯುವ ಹೊತ್ತಿಗೆ ನಾಪತ್ತೆಯಾಗಿತ್ತು. 

READ : ಮಹಿಳೆಗೆ ಹೆದರಿಸಿ ಬೆದರಿಸಿದರಾ ಶಿವಮೊಗ್ಗದ ಆ ಪೊಲೀಸರು? ಸ್ಟೇಷನ್​ನಲ್ಲಿ ಹೀಗೂ ನಡೆಯುತ್ತಾ??

ಬಸ್​ನಿಂದ ಇಳಿದು ಆಟೋ ಚಾಲಕನಿಗೆ ಬಾಡಿಗೆ ಕೊಡಲು ಬ್ಯಾಗ್​ ಓಪನ್ ಮಾಡಿದಾಗ ಪರ್ಸ್ ಕಳುವಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ