BREAKING NEWS - ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್​ ಆಫೀಸ್​)​ ಕಚೇರಿಯಲ್ಲಿ ED ಅಧಿಕಾರಿಗಳ ಪರಿಶೀಲನೆ! ಕಾರಣವೇನು

BREAKING NEWS - Inspection of ED officials at Kimmane Ratnakar (Congress Office) office in Thirthahalli! What is the reason?

BREAKING NEWS - ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್​ ಆಫೀಸ್​)​ ಕಚೇರಿಯಲ್ಲಿ ED ಅಧಿಕಾರಿಗಳ ಪರಿಶೀಲನೆ! ಕಾರಣವೇನು
BREAKING NEWS - ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ (ಕಾಂಗ್ರೆಸ್​ ಆಫೀಸ್​)​ ಕಚೇರಿಯಲ್ಲಿ ED ಅಧಿಕಾರಿಗಳ ಪರಿಶೀಲನೆ! ಕಾರಣವೇನು
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇಡಿ ಅಧಿಕಾರಿಗಳು ಭೇಟಿಕೊಟ್ಟು ಆಯ್ದ ಸ್ಥಳಗಳಲ್ಲಿ ಪರಿಶೀಲನೆ ನಡೆಸ್ತಿದ್ಧಾರೆ. 

ಎಲ್ಲೆಲ್ಲಿ ಪರಿಶೀಲನೆ

  • ಪಟ್ಟಣದ ಸೊಪ್ಪುಗುಡ್ಡೆಯ ಶಾರಿಕ್ ಅಜ್ಜಿಯ ಮನೆಗೆ  ಈಡಿ ಅಧಿಕಾರಿಗಳ ತಂಡ ಭೇಟಿಕೊಟ್ಟಿದೆ.
  • ಇನ್ನೊಂದೆಡೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಕಾಂಗ್ರೆಸ್​ ಕಚೇರಿಗೆ ಈಡಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ. 

ಕಿಮ್ಮನೆ ಕಚೇರಿಗೆ ಭೇಟಿಕೊಡಲು ಕಾರಣವೇನು? 

ಶಾರೀಖ್​ನ ಅಜ್ಜನಿಗೆ ಸೇರಿದ ಕಟ್ಟಡದಲ್ಲಿ ಕಾಂಗ್ರೆಸ್​ ಕಚೇರಿಯನ್ನ ತೆರೆಯಲಾಗಿತ್ತು. ಈ ಸಂಬಂಧ ಅಗ್ರಿಮೆಂಟ್​ ಮಾಡಿಕೊಳ್ಳಲಾಗಿತ್ತು. ಈ ಅಗ್ರಿಮೆಂಟ್​ ಮಾಜಿ ಸಚಿವ ಕಿಮ್ಮನೆ ರತ್ನಾಕರ್​ರವರ ಸಂಬಂಧಿ ಹೆಸರಲ್ಲಿ ಮಾಡಿಕೊಳ್ಳಲಾಗಿತ್ತು. ಸದ್ಯ ಶಾರೀಖ್​ಗೆ ಸೇರಿದ ಹಣಮೂಲ ಮತ್ತು ಆಸ್ತಿ ಮೂಲದ ವಿಚಾರವಾಗಿ ತೀರ್ಥಹಳ್ಳಿಗೆ ಭೇಟಿಕೊಟ್ಟಿರುವ ಇಡಿ ಅಧಿಕಾರಿಗಳು, ಕಾಂಗ್ರೆಸ್​ ಕಚೇರಿಯಲ್ಲಿಯು ದಾಖಲಾತಿಯ ಪರಿಶೀಲನೆ ನಡೆಸಿದ್ದಾರೆ. 

ಇದೇ ವಿಚಾರವಾಗಿ ಶಾರೀಖ್​ನ ಅಜ್ಜಿಯನ್ನು ಸಹ ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ತತ್ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ್ದು, ಕಾನೂನು ಬದ್ಧವಾಗಿರುವ ರೆಕಾರ್ಡ್​ಗಳನ್ನು ಪರಿಶೀಲಿಸಿದ್ದಾರೆ.