KARNATAKA NEWS/ ONLINE / Malenadu today/ Aug 2, 2023 SHIVAMOGGA NEWS
ಜಿಲ್ಲಾ ಪಂಚಾಯತ್ ಸಭಾಂಗಣದೊಳಗೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಕೇಸ್ ಹಾಕಿರುವುದನ್ನ ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಹಾಗೂ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ರವರಿಗೂ ಮನವಿ ಸಲ್ಲಿಸಿದೆ. ಈ ವೇಳೆ ಶಿವಮೊಗ್ಗ ನಗರ ಶಾಸಕರಿಗೆ ಪ್ರತಿಭಟನೆ ನಡೆದ ದಿನ ಪೊಲೀಸರು ಸಮರ್ಪಕವಾಗಿ ನಡೆಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡರು ಗಂಭೀರವಾಗಿ ಆರೋಪಿಸಿದ್ದು, ಜಿಲ್ಲಾಧಿಕಾರಿಗೆ ಈ ಬಗ್ಗೆ ದೂರು ಹೇಳಿಕೊಂಡಿದ್ದಾರೆ.
ಶಾಸಕರನ್ನು ಹೊರಗಿರಿ ಎಂದು ಪೊಲೀಸರು ಹೇಳಿದರೇ?
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಜಿಲ್ಲಾ ಪಂಚಾಯತ್ ಸಭಾಂಗಣದಿಂದ ಜಯನಗರ ಸ್ಟೇಷನ್ಗೆ ಕರೆದುಕೊಂಡು ಬಂದ ಪೊಲೀಸರು ಅವರನ್ನ ಅಲ್ಲಿಯೇ ಕೂರಿಸಿಕೊಂಡಿದ್ದರು. ಮಧ್ಯಾಹ್ನ ಮೂರು ಗಂಟೆಯಾದರೂ ಅವರನ್ನ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಜಯನಗರ ಪೊಲೀಸ್ ಸ್ಟೇಷನ್ಗೆ ತೆರಳಿದ್ದರು. ಈ ವೇಳೆ ಅವರು ಸ್ಟೇಷನ್ ಒಳಗೆ ಹೋದಾಗ, ಹೊರಗಡೆ ಇರಿ ಸರ್, ಅವರನ್ನು ಕಳುಹಿಸಿಕೊಡುತ್ತೇವೆ ಎಂದಿದ್ದಾರೆ ಎಂದು ಪೊಲೀಸರು ಹೇಳಿದ್ಧಾರೆ ಎಂಬುದು ಬಿಜೆಪಿ ಮುಖಂಡರ ಆರೋಪ. ಇನ್ನೂ ಇದೇ ವಿಚಾರವಾಗಿ ಜಿಲ್ಲಾಧಿಕಾರಿಯವರ ಬಳಿಯಲ್ಲಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಭಾನುಪ್ರಕಾಶ್ರವರು ಇನ್ನೂ ಶಾಸಕರು ಜಯನಗರ ಪೊಲೀಸ್ ಸ್ಟೇಷನ್ಗೆ ಬಂದಾಗ ಅವರಿಗೆ ಒಂದು ಕುರ್ಚಿಯನ್ನು ಸಹ ನೀಡದೇ ಅಗೌರವ ತೋರಲಾಗಿದೆ. ಅವರೊಬ್ಬ ಶಾಸಕರು ಅವರು ತಪ್ಪು ಮಾಡಿಯೇ ಬಂದಿದ್ದರು ಸಹ ಅವರಿಗೆ ಕುರ್ಚಿಕೊಟ್ಟು ಗೌರವ ಸಲ್ಲಿಸಬೇಕಾಗಿತ್ತು. ಆದರೆ ಪೊಲೀಸರ ನಡೆ ಸೌಜನ್ಯರಹಿತವಾಗಿತ್ತು ಎಂದು ದೂರಿದರು. ಪೊಲೀಸ್ ಸ್ಟೇಷನ್ನಲ್ಲಿ ಶಾಸಕರನ್ನ ಒಳಗೆ ಕರೆಯಲಾಗದಷ್ಟು ಬದಲಾವಣೆಯಾಗಿದೆಯಾ ಎಂದು ಭಾನುಪ್ರಕಾಶ್ ಜಿಲ್ಲಾಧಿಕಾರಿಯವರನ್ನ ಪ್ರಶ್ನಿಸಿದ್ರು. ಅಲ್ಲದೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕಲ್ಲವೇ ಎಂದರು.
ದೂರು ಕೊಡಿ ಪರಿಶೀಲಿಸುತ್ತೇನೆ
ಇನ್ನೂ ಬಿಜೆಪಿ ಮುಖಂಡರ ಆರೋಪಕ್ಕೆ ಉತ್ತರಿಸಿದ ಡಿಸಿ ಸೆಲ್ವಮಣಿಯವರು, ಈ ಸಂಬಂಧ ಲಿಖಿತ ದೂರನ್ನ ನೀಡಿದರೆ, ಆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಒಟ್ಟಾರೆ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಯವರ ಬಳಿ, ಶಾಸಕರಿಗೆ ಅಗೌರವ ತೋರಿದ್ದು ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದೆ.
ಶಿವಮೊಗ್ಗ ನಗರ ಶಾಸಕರಿಗೆ ಪೊಲೀಸ್ ಸ್ಟೇಷನ್ ಎದುರು ಪೊಲೀಸರು ಗೌರವ ನೀಡಲಿಲ್ಲ ಎಂದು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಆರ್.ಸೆಲ್ವಮಣಿಯವರ ಬಳಿಯಲ್ಲಿ ಆರೋಪಿಸಿದ್ದಾರೆ. #shivamogga pic.twitter.com/aCLheKOjHj
— malenadutoday.com (@CMalenadutoday) August 2, 2023
ಇನ್ನಷ್ಟು ಸುದ್ದಿಗಳು