Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ATM ನಲ್ಲಿ ಮಹಿಳೆಗೆ ಶಾಕ್‌ | ಜಿಂಕೆ ಮಟನ್‌ ಬೇಯುಸ್ತಿದ್ದ ಮನೆ ಮೇಲೆ ರೇಡ್‌ | ನೀರು ಕೇಳಿ ಚಿನ್ನ ಕದ್ರು ಅಪ್ರಾಪ್ತರು |

13
Last updated: November 21, 2024 9:46 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ‌

- Advertisement -

ಎಟಿಎಂನಲ್ಲಿ ಹಣ ಬಿಡಿಸಲು ಹೋದ ಮಹಿಳೆಗೆ ಶಾಕ್

ATM ನಲ್ಲಿ ಮಹಿಳೆಯೊಬ್ಬರಿಗೆ ಹಣ ಬಿಡಿಸಲು ಸಹಾಯ ಮಾಡುವ ನೆಪದಲ್ಲಿ ಬಂದ ಅಪರಿಚಿತರು ಕಾರ್ಡ್‌ ಬದಲಾಯಿಸಿಕೊಂಡು ಮಹಿಳೆಯ ಅಕೌಂಟ್‌ನಿಂದ 44 ಸಾವಿರ ರೂಪಾಯಿ ಎಗಿಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ನೆಹರು ರಸ್ತೆಯಲ್ಲಿರುವ ATM ಗೆ ಮಹಿಳೆಯೊಬ್ಬರು ಹಣ ಬಿಡಿಸಲು ಬಂದಿದ್ದಾರೆ. ಅವರು ಮಷಿನ್‌ಗೆ ಕಾರ್ಡ್‌ ಹಾಕಿದಾಗ ಆ ಕಾರ್ಡ್‌ ವರ್ಕ್‌ ಆಗಿರಲಿಲ್ಲ. ಈ ವೇಳೆ ಅಲ್ಲಿದ್ದ ಅಪರಿಚಿತರು ಅವರಿಗೆ ಸಹಾಯಕ್ಕೆ ಬಂದಿದ್ದಾರೆ. ಆಗಲು ಅಮೌಂಟ್‌ ತೆಗೆಯಲಾಗಲಿಲ್ಲ. ಹೀಗಾಗಿ ಮಹಿಳೆ ಮನೆಗೆ ವಾಪಸ್‌ ಆಗಿದ್ದಾರೆ. ಬಳಿಕ ಪತಿಯ ಎಟಿಎಂ ಕಾರ್ಡ್‌ನಿಂದ ಹಣ ಬಿಡಿಸಿದ್ದಾರೆ. ಈ ನಡುವೆ ಪತ್ನಿಯ ಅಕೌಂಟ್‌ನಿಂದ  44 ಸಾವಿರ ರೂಪಾಯಿ ವಿತ್‌ ಡ್ರಾ ಆಗಿರುವುದು ಪತಿಯ ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ, ಎಟಿಎಂ ಕಾರ್ಡ್‌ ಎಕ್ಸೇಚೆಂಜ್‌ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಂಚು ತೆಗೆದು ಕಳ್ತನ ಮಾಡಿದ್ದ ಆರೋಪಿ ಅರೆಸ್ಟ್‌ 

ಸೊರಬ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಒಂದು ಲಕ್ಷ ರೂಪಾಯಿ ವ್ಯಾಲ್ಯು ಇರುವ ಚಿನ್ನ ಹಾಗೂ ನಗದನ್ನ ಜಪ್ತಿ ಮಾಡಿದ್ದಾರೆ. ಇಲ್ಲಿನ ಕಾನುಕೇರಿ ಬಡಾವಣೆಯಲ್ಲಿ ನಾಗರಾಜ್‌ ಎಂಬವರ ಮನೆಯ ಹೆಂಚು ತೆಗೆದು ಕಳ್ಳತನವೆಸಗಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಸೊರಬ ಪೊಲೀಸರು ಗೋಪಿ ದೇವೇಂದ್ರಪ್ಪ ಎಂಬಾತನನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕಳ್ಳತನ ಪ್ರಕರಣ  ಬಯಲಿಗೆ ಬಂದಿದೆ. 

ನೀರು ಕೇಳಿ ದರೋಡೆ, 24 ಗಂಟೆಯಲ್ಲಿ ಸಿಕ್ಕಿಬಿದ್ದ ಅಪ್ರಾಪ್ತರು

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಮನೆಯೊಂದರ ಬಳಿಗೆ ಬಂದ ಅಪ್ರಾಪ್ತ ಬಾಲಕರು ಕುಡಿಯಲು ನೀರು ಕೇಳಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣವನ್ನು 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದಾರೆ. ಅಪ್ರಾಪ್ತರು ವೃದ್ಧೆಯೊಬ್ಬರ ಮನೆಗೆ ಹೋಗಿ ನೀರು ಕೇಳಿದ್ದಾರೆ. ಆ ಬಳಿಕ ಅವರು ನೀರಲು ಒಳಗೆ ಹೋದ ಬೆನ್ನಲ್ಲೆ ಮನೆಯೊಳಗೆ ನುಗ್ಗಿ ಅವರ ಬಾಯಿಕಟ್ಟಿ ಚಿನ್ನ ಸರ ಕಿತ್ತುಕೊಂಡು ಹೋಗಿದ್ದರು. ಆ ಬಳಿಕ ಕೇಸ್‌ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 24 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಜಿಂಕೆ ಮಟನ್‌ ಬೇಯುತ್ತಿದ್ದಾಗಲೇ ಅರಣ್ಯ ಇಲಾಖೆ ದಾಳಿ

ಸಾಗರ ತಾಲ್ಲೂಕು ಸೂರನಗದ್ದೆಯಲ್ಲಿ ಜಿಂಕೆ ಶಿಕಾರಿ ಮಾಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಜಿಂಕೆಯನ್ನ ಬೇಟೆ ಮಾಡಿ ಅದರ ಮಾಂಸ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾದ ಬೆನ್ನಲ್ಲೆ ಅರಣ್ಯ ಇಲಾಖೆ ಅಧಿಕಾರಿಗಳು ರೇಡ್‌ ನಡೆಸಿದ್ದಾರೆ. ಮನೆಯೊಂದರ ಮೇಲೆ ರೇಡ್‌ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಂಸವನ್ನ ಜಪ್ತು ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದರು. 

‌

car decor

SUMMARY|  Shivamogga crime news,  sagara taluku news ,  soraba news today ,  kannada news online 

KEY WORDS | Shivamogga crime news,  sagara taluku news ,  soraba news today ,  kannada news online 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಾಗರದಲ್ಲಿ ಡಿಸೆಂಬರ್‌ 6 ಕ್ಕೆ ಅಡಕೆ ಬೆಳಗಾರರ ಶಕ್ತಿಪ್ರದರ್ಶನ ! ವಿವರ ಹೀಗಿದೆ
Next Article ಪ್ರವಾಸಿಗರಿಗೆ ಗುಡ್‌ ನ್ಯೂಸ್‌ | ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಈ ಪ್ರಾಣಿ ಪಕ್ಷಿಗಳ ಆಗಮನ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಡಿಸಿಸಿ ಬ್ಯಾಂಕ್‌ನ ಮಾಜಿ ಕಾರು ಚಾಲಕ ಹಾಗೂ ಮ್ಯಾನೇಜರ್‌ ಮನೆ ಮೇಲೆ ಇಡಿ ದಾಳಿ

By 131
india Book of Records
SHIVAMOGGA NEWS TODAY

india Book of Records :  ಇಂಡಿಯಾ ಬುಕ್​ ಆಫ್​ ರೆಕಾರ್ಡ್​ಗೆ ಶಿವಮೊಗ್ಗದ 2 ವರ್ಷದ ಮಗು ಸೇರ್ಪಡೆ | ಈ ಮಗುವಿನ ಸಾಧನೆ ಏನು ಗೊತ್ತಾ 

By Prathapa thirthahalli
SHIVAMOGGA NEWS TODAY

ಶಿವಮೊಗ್ಗದಲ್ಲಿ ಏನೇನು? | ಇವತ್ತಿನ ಟಾಪ್‌ 5 ಚಟ್‌ ಪಟ್‌ ಸುದ್ದಿಗಳು

By 131
SHIVAMOGGA NEWS TODAY

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ | ಡಿ.ಸಿ ಕಚೇರಿ ಬಾಗಿಲಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆ 

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up