arecanut poisson : ಮಲೆನಾಡು ಭಾಗದಲ್ಲಿ ಈಗಾಗಲೇ ಅಡಿಕೆ ತೊಟಗಳಿಗೆ ಔಷಧಿ ಸಿಂಪಡನೆ ಮಾಡುವ ಕಾರ್ಯ ಭರದಿಂದ ಸಾಗುತ್ತಿದೆ. ಹಿಂಗಾರ ಒಡೆದು ಅಡಿಕೆ ನಿಲ್ಲುವ ಸಂದರ್ಭ, ಈ ಸಮಯದಲ್ಲಿ ಔಷಧಿ ಸಿಂಪಡನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತರ ನಂಬಿಕೆ. ಇದರ ನಡುವೆ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ಕೆಲಸಗಾರರಿಗೆ ಇದೊಂದು ಹೆಚ್ಚು ಲಾಭ ಗಳಿಸುವಂತಹ ಸೀಜನ್ ಎಂದು ಹೇಳಬಹುದು.

ಆದ್ದರಿಂದ ಕೊನೆಗಾರರು ಒಂದು ಡ್ರಂ ಔಷಧಿಗೆ ಪಡೆಯುವ ಹಣವೆಷ್ಟು, ಔಷಧಿ ಸಿಂಪಡನೆಯಿಂದ ಅವರ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಹಾಗೆಯೇ ಈ ಸಂದರ್ಭದಲ್ಲಿ ತೋಟಕ್ಕೆ ಔಷಧಿ ಸಿಂಪಡನೆ ಎಷ್ಟು ಪರಿಣಾಮಕಾರಿ ಎಂಬ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,.
arecanut poisson :ಅಡಿಕೆಗೆ ಔಷಧಿ ಸಿಂಪಡನೆ
ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ಕೆಲಸಗಾರರಿಗೆ ಇನ್ನೊಂದು ಮೂರು ತಿಂಗಳು ಉತ್ತಮ ಲಾಭ ಗಳಿಸುವ ಸಮಯ. ಸಾಮಾನ್ಯವಾಗಿ ಕೊನೆ ತೆಗೆಯುವ ಕೊನೆಗಾರರೇ ಹೆಚ್ಚಾಗಿ ಔಷಧಿ ಸಿಂಪಡಿಸುವ ಕೆಲಸವನ್ನು ಮಾಡುತ್ತಾರೆ. ಒಂದು ಎಕರೆ ತೊಟಕ್ಕೆ ಸರಿಸುಮಾರು 2 ಡ್ರಂ ಗಳವರೆಗೆ ಔಷಧಿಯನ್ನು ಸಿಂಪಡಿಸುವ ಅವರು ದಿನಕ್ಕೆ 5ರಿಂದ6 ಹೆಚ್ಚೇಂದರೆ 08 ಡ್ರಂಗಳ ವರೆಗೂ ಔಷಧಿಯನ್ನು ಸಿಂಪಡಿಸುತ್ತಾರೆ. ಇವರಿಗೆ ಸಂಬಳವನ್ನು ಡ್ರಂ ಲೆಕ್ಕದಲ್ಲಿ ನೀಡಲಾಗುತ್ತಿದ್ದು, ಪ್ರತಿ ಡ್ರಂ ಗೆ 1000 ರೂಪಾಯಿಗಳನ್ನು ತೆಗೆದುಕೊಳ್ಳುತ್ತಾರೆ. (ಪ್ರದೇಶಕ್ಕೆ ತಕ್ಕಂತೆ ದರ ಬದಲಾಗಬಹುದು ) ಅಡಿಕೆಗೆ ಔಷಧಿ ಸಿಂಪಡಿಸುವ ಮಿಷನ್ನನ್ನು ಅಡಿಕೆ ಸಿಂಪಡಿಸುವ ಕೆಲಸಗಾರರೇ ತಂದರೆ ಅದಕ್ಕೆ ತೊಟದ ಮಾಲೀಕರು ಗಂಟೆಗೆ ಇಂತಿಷ್ಟೆಂದು ಹೆಚ್ಚುವರಿ ಬಾಡಿಗೆಯನ್ನು ನೀಡಬೇಕಾಗುತ್ತದೆ. ಹೀಗೆ ಅವರು ದಿನದಲ್ಲಿ 8ರಿಂದ10 ಸಾವಿರದ ವರೆಗೂ ಸಂಪಾದನೆ ಮಾಡುತ್ತಾರೆ. ಇದು ಅವರಿಗೆ ಅತಿಹೆಚ್ಚು ಲಾಭಗಳಿಸುವ ಸಮಯ ಎಂದು ಹೇಳಬಹುದು.

arecanut poisson : ಔಷಧಿ ಸಿಂಪಡನೆ ಅಷ್ಟು ಸುಲಭದ ಕೆಲಸವಲ್ಲ !
ಹೇಳಲು ಅತಿ ಹೆಚ್ಚು ಲಾಭಗಳಿಸುವ ಕೆಲಸ ದುಡ್ಡೋ ದುಡ್ಡು ಎಂಬ ಭಾವನೆ ಎಲ್ಲರಲ್ಲಿದೆ. ಆದರೆ ಆ ಕೆಲಸವನ್ನು ಮಾಡುವಾಗ ಕೊನೆಗಾರರಿಗೆ ಏಕಪ್ಪಾ ನಾನು ಈ ಕೆಲಸ ಕಲಿತೆ ಎಂಬುವಷ್ಟು ಜಿಗುಪ್ಸೆ ಬಂದು ಬಿಟ್ಟಿರುತ್ತದೆ. ಹೌದು ಮೇಲೆ ನೋಡಿ ಔಷಧಿ ಸಿಂಪಡಿಸುತ್ತಿರುವಾಗ ಆ ವಿಷರಹಿತ ಔಷಧಿಯ ಹನಿಗಳು ಕಣ್ಣು ಸೇರಿದಂತೆ ಬಾಯಿಗೆ ಬೀಳುತ್ತದೆ. ಇದರಿಂದ ಅವರ ಕಣ್ಣಿಗೆ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಹಾಗೆಯೇ ಔಷಧಿಗಳು ಬಾಯಿಯ ಮೂಲಕ ಹೊಟ್ಟೆಗೂ ಸಹ ಹೋಗುತ್ತದೆ.
ಆ ಅಡಿಕೆಯ ಎಲೆಗಳ ನಡುವಲ್ಲಿ ಸುಮಾರು 70 ಅಡಿ ಉದ್ದದ ದೋಟಿಯನ್ನು ಎಳೆದುಕೊಂಡು ಹೋಗುವಾಗ ಮೈ ಕೈ ಸೊಂಟ ನೋವು ಬಾರದೇ ಇರದು. ಈ ನಡುವೆ ನಮ್ಮೆಲ್ಲರಲ್ಲೂ ಈ ಹಿಂದೆಲ್ಲಾ ಮರ ಹತ್ತಿ ಔಷದಿ ಸಿಂಪಡಿಸುತ್ತಿದ್ದರು, ಈಗ ಆಧುನೀಕರಣದಿಂದ ಅಡ್ಜಸ್ಟೇಬಲ್ ದೋಟಿ ಬಂದಿದೆ ಇದರಿಂದ ಕೆಲಸ ಕಮ್ಮಿ ಎಂಬ ಆಲೋಚನೆ ಬಂದಿರುತ್ತದೆ. ಈಗಿನ ಯುವಕರಿಗೆ ಅಡಿಕೆ ಮರ ಹತ್ತಿ ಔಷಧಿ ಹೊಡೆಯುವ ಕೌಶಲ್ಯತೆ ಕಡಿಮೆ ಇರುವುದರಿಂದ ದೋಟಿಗೆ ಮೊರೆ ಹೋಗಿದ್ದಾರೆ. ಆದರೆ ಎಷ್ಟೇ ಅಧುನೀಕರಣ ವಸ್ತುಗಳು ಬಂದರೂ ಸಹ ಪ್ರತಿ ಮರದೆಡೆಗೆ ಆ ಉದ್ದ ದೋಟಿಯನ್ನು ಎಳೆದುಕೊಂಡು ಹೋಗಿ ಔಷಧಿ ಸಿಂಪಡಿಸುವುದು ಸುಲಭದ ಕೆಲಸವಲ್ಲ ಅದು ಅನುಭವಿಸಿದವರಿಗೆ ಮಾತ್ರ ಗೊತ್ತು.
arecanut poisson : ತೋಟಗಳಿಗೆ ಔಷಧಿ ಸಿಂಪಡನೆ ಎಷ್ಟು ಪರಿಣಾಮಕಾರಿ
ಹಿಂಗಾರ ಒಡೆದ ನಂತರ ಅನೇಕ ಕೀಟಗಳು ಹಿಂಗಾರದಲ್ಲಿರುವ ಸಣ್ಣ ಅಡಿಕೆಗಳನ್ನು (arecanut poisson) ಹಾಳು ಮಾಡುತ್ತವೆ. ಫಂಗಸ್ ಭಾದೆಯಿಂದ ಹಿಂಗಾರ ಒಣಗಿ ಅಡಿಕೆಗಳು ಕಪ್ಪಾಗಿ ಮರದಲ್ಲೇ ಹಿಂಗಾರ ಜೋತಿ ಬೀಳುತ್ತದೆ. ಅಡಿಕೆ ಹರಳು ಸಹ ಉದರಿಹೋಗುತ್ತದೆ. ಈ ಹಿನ್ನಲೆ ಹೆಚ್ಚಿನ ಜನ ಹಿಂಗಾರಕ್ಕೆ ಔಷಧಿಯನ್ನು ಸಿಂಪಡಿಸುತ್ತಾರೆ. ಇದರಿಂದ ಇತರೆ ಕೀಟಗಳು ನಾಶವಾಗುತ್ತವೆ. ಔಷಧಿ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದು ಎಂಬುದು ರೈತರ ಅಭಿಪ್ರಾಯ .ಆದರೆ ಇದರ ನಡುವೆ ಕೆಲ ರೈತರು ಔಷಧಿ ಸಿಂಪಡನೆಯನ್ನು ಮಾಡುವುದಿಲ್ಲ. ಏಕೆಂದರೆ ಈ ಔಷಧಿ ಸಿಂಪಡನೆಯಿಂದ ಹಿಂಗಾರ ಹೂವಿಗೆ ಪರಾಗ ಮಾಡಲು ಬರುವ ಕೀಟಗಳು ಸಾಯುತ್ತವೆ. ಹೀಗಾಗಿ ಹಿಂಗಾರ ಹೆಚ್ಚಾಗಿ ಕಾಯಿಬಿಡುವುದಿಲ್ಲ ಎಂಬ ಕಾರಣದಿಂದ ಔಷಧಿಯನ್ನು ಹೊಡೆಸಲು ಹಿಂದೇಟು ಹಾಕುತ್ತಾರೆ.ಸಾವಿರಾರು ರೂಪಾಯಿ ಖರ್ಚು ಮಾಡಿ ಔಷಧಿ ಹೊಡೆದರೂ ಅದರಿಂದ ರೈತರಿಗೆ ಸಿಗುವ ಪರಿಣಾಮದಬಗ್ಗೆ ಸರಿಯಾದ ಮಾಹಿತಿ ಇನ್ನೂ ಬೆಳೆಗಾರರಿಗೆ ಸಿಕ್ಕಿಲ್ಲ. ಹೀಗಾಗಿ ರೈತರು ಔಷಧಿ ಹೊಡೆಯಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ