ಶಿವಮೊಗ್ಗ ಮೂಲದ ಶುಭಾ ಉಡುಪಿಯಿಂದ ನಾಪತ್ತೆ! ಬೆಂಗಳೂರಿಗೆ ಹೋಗುತ್ತೇನೆ ಎಂದು ಹೊರಟವರು ಕಾಣೆ!

Shimoga native Shubha goes missing from Udupi who left to go to Bangalore are missing/ ಮೂಲತಃ ಶಿವಮೊಗ್ಗದ ಶುಭ ಉಡುಪಿಯಲ್ಲಿರುವ ಗಂಡನೆ ಮನೆಗೆ ಹೋಗಿದ್ದರು ಬಹರೈನ್​ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೊರಟ ನಂತರ ನಾಪತ್ತೆಯಾಗಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Shimoga native Shubha goes missing from Udupi who left to go to Bangalore are missing/ ಮೂಲತಃ ಶಿವಮೊಗ್ಗದ ಶುಭ ಉಡುಪಿಯಲ್ಲಿರುವ ಗಂಡನೆ ಮನೆಗೆ ಹೋಗಿದ್ದರು ಬಹರೈನ್​ನಲ್ಲಿ ಕೆಲಸ ಮಾಡುತ್ತಿದ್ದ ಅವರು, ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೊರಟ ನಂತರ ನಾಪತ್ತೆಯಾಗಿದ್ದಾರೆ.

KARNATAKA NEWS/ ONLINE / Malenadu today/ May 27, 2023 SHIVAMOGGA NEWS

ಉಡುಪಿ/  ಶಿವಮೊಗ್ಗ ಮೂಲದ ಕೆ.ಶುಭಾ ಎಂಬವರು, ಉಡುಪಿಯಿಂದ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.  ಈಕೆ ಬಹರೈನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಂದ ತಮ್ಮ ಗಂಡನ ಮನೆ ಇರುವ ಉಡುಪಿ ಗೋಪಾಲಪುರಕ್ಕೆ ಬಂದಿದ್ದರು. ಆನಂತರ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದಾರೆ. ಬಳಿಕ ನಾಪತ್ತೆಯಾಗಿದ್ದಾರೆ. 

ಇವರ ಗುರುತು 5 ಅಡಿ ಎತ್ತರ, ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು ಕನ್ನಡ, ಮರಾಠಿ, ಇಂಗ್ಲಿಷ್ ಹಾಗೂ ಹಿಂದಿ ಭಾಷೆ ಮಾತ ನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಸಂಪರ್ಕಿಸಲು ಸೂಚಿಸಲಾಗಿದೆ. ಅಲ್ಲದೆ ಕಾಣೆಯಾದವರ ಬಗ್ಗೆ ಪ್ರಕಟಣೆ ಯನ್ನ ( missing announcement) ಹೊರಡಿಸಲಾಗಿದೆ. 

ತಗ್ಗಿದ ಶರಾವತಿ ಹಿನ್ನೀರು ! ಸಿಗಂದೂರು ಸಂಪರ್ಕ ಕಲ್ಪಿಸುವ ಮುಪ್ಪಾನೆ ಲಾಂಚ್​ ಸ್ಥಗಿತ !

ಸಾಗರ/ ಜೋಗ , ಕಾರ್ಗಲ್, ಸಿಗಂದೂರು, ತುಮರಿ ಸಂಪರ್ಕದ ಹಲ್ಕೆ-ಮುಪ್ಪಾನೆ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸ ಲಾಗಿದೆ. ಇದಕ್ಕೆ ಕಾರಣ ಶರಾವತಿ ಹಿನ್ನೀರಿನಲ್ಲಿ ನೀರು ಕಡಿಮೆಯಾಗಿರುವುದು. ಹಿನ್ನೀರಿನಲ್ಲಿ ವಾಡಿಕೆಗಿಂತಲೂ ಹೆಚ್ಚು ನೀರು ಇಳಿದಿದ್ದು, ಈ ಹಿನ್ನೆಲೆಯಲ್ಲಿ ಲಾಂಚ್​ ಸಂಚಾರಕ್ಕೆ ಬೃಹತ್  ಕಲ್ಲುಗಳು, ಮರದ ದಿಮ್ಮಿಗಳು , ಮರಳಿನ ದಿಬ್ಬ ಅಡ್ಡಿ ಮಾಡುತ್ತಿದೆ. ಇದರಿಂದಾಗಿ ಲಾಂಚ್​ ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ. ಈ ಕಾರಣಕ್ಕೆ  ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾರ್ಗಲ್, ಜೋಗದ ಮೂಲಕ ಸಿಗಂದೂರಿಗೆ ಬರುವ ಭಕ್ತರಿಗೆ ಈ ಮಾರ್ಗವು ಸುಮಾರು 60 ಕಿ.ಮೀ. ದೂರವನ್ನು ಕಡಿಮೆಗೊಳಿಸುತ್ತಿತ್ತು. ನೀರಿನ ಮಟ್ಟ ಹೆಚ್ಚಾದ ನಂತರ ಪುನಃ ಸಂಚಾರವನ್ನು ಸಂಚಾರವನ್ನು ಪುನ‌ ಆರಂಭಿಸಲಾಗುವುದು ಎಂದು ಸಾಗರ ಉಪ ವಲಯದ ಅಧಿಕಾರಿಗಳು ತಿಳಿಸಿದ್ದಾರೆ. 

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor