SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 19, 2024
ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ಮತ್ತೆ ಬಿಜೆಪಿ ಭಿನ್ನಮತದ ಹೊಸ ಸ್ಫೋಟ ಸಂಭವಿಸಿದೆ. ತಾಲ್ಲೂಕುನಲ್ಲಿ ಕುಮಾರ ಬಂಗಾರಪ್ಪನವರ ವಿರುದ್ಧ ಧ್ವನಿ ಎತ್ತುತ್ತಿರುವ ನಮೋ ವೇದಿಕೆಗೆ ಬಿಜೆಪಿ ಸಂಸದರ ಬೆಂಬಲ ಹಾಗೂ ಕುಮ್ಮಕ್ಕು ಇದೆ ಎಂದು ಬಿಜೆಪಿ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಎಂಡಿ ಉಮೇಶ್ ಆರೋಪಿಸಿದ್ದಾರೆ.
ಸೊರಬ ಬಿಜೆಪಿ
ತಾಲೂಕು ಬಿಜೆಪಿಯಲ್ಲಿ ಬಣ ರಾಜಕೀಯದಿಂದ ಹಿನ್ನೆಡೆಯಾಗಿದೆ. ಈ ಹಿನ್ನೆಡೆ ಕಾರಣವಾಗಿರುವ ನಮೋ ವೇದಿಕೆ ಮುಖಂಡರಿಗೆ ಸಂಸದ ಬಿ.ವೈ.ರಾಘವೇಂದ್ರ ಕುಮ್ಮಕ್ಕು ನೀಡುತ್ತಿದ್ದಾರೆ. ತಾಲೂಕು ಬಿಜೆಪಿ ಕಚೇರಿಯಲ್ಲಿಯೇ ಸುದ್ದಿಗೋಷ್ಟಿ ನಡೆಸಿ ಈ ಆರೋಪ ಮಾಡಿರುವ ಎಂಡಿ ಉಮೇಶ್
ನಮೋ ವೇದಿಕೆ
ಕಳೆದ ಐದು ವರ್ಷಗಳಿಂದ ನಮೋ ವೇದಿಕೆ ಜೀವಂತವಾಗಿದೆ. ಹೀಗೆ ಜೀವಂತವಾಗಿರಲು ಸಂಸದರು ಅದಕ್ಕೆ ಆಕ್ಸಿಜನ್ ನೀಡುತ್ತಿದ್ದಾರೆ. ಮಾಜಿ ಶಾಸಕರ ವಿರುದ್ಧ ಮಾತನಾಡುತ್ತಿರುವ ನಮೋ ವೇದಿಕೆಯ ಮುಖಂಡರನ್ನ ಸಂಸದರು ಕರೆದು ಬುದ್ದಿವಾದ ಹೇಳಬೇಕಿತ್ತು. ಆದರೆ ನಮೋ ವೇದಿಕೆಯ ಮುಖಂಡರಿಗೆ ರಾಘವೇಂದ್ರರವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಹಿಂದೆ ಹರತಾಳು ಹಾಲಪ್ಪರವರ ವಿರುದ್ಧ ದೂರಿದವರು ಆ ಬಳಿಕ ನಮೋ ವೇದಿಕೆಯ ಮೂಲಕ ಕುಮಾರ ಬಂಗಾರಪ್ಪರವರ ವಿರುದ್ಧ ದೂರುತ್ತಿದ್ದಾರೆ. ಆದದರೆ ಸಂಸದರು ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪನವರ ಸಹಾಯ ಬಳಸಿಕೊಂಡಿದ್ದರು. ಇದೀಗ ಅವರ ವಿರೋಧಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ