SHIVAMOGGA | MALENADUTODAY NEWS | Sep 2, 2024 ಮಲೆನಾಡು ಟುಡೆ
ಸರ್ಕಾರಿ ನೌಕರನಿಗೆ ನಿವೃತ್ತಿಯ ದಿನ ತನ್ನ ಮೇಲಾಧಿಕಾರಿ ನೀಡುವ ಗೌರವ ಸತ್ಕಾರದ ಬಗ್ಗೆ ಒಂದಿಷ್ಟು ಕುತೂಹಲ ಇರುತ್ತದೆ. ನಿವೃತ್ತಿಯ ಜೀವನದ ಪ್ರಧಾನ ನೆನಪನ್ನಾಗಿ ಅದನ್ನು ಆತ ಸ್ವೀಕರಿಸುತ್ತಾನೆ. ಆ ಕಾರಣಕ್ಕೆ ಸರ್ಕಾರಿ ಕಚೇರಿಗಳಲ್ಲಿ ಬಿಳ್ಕೊಡುಗೆ ಕಾರ್ಯಕ್ರಮವೂ ವಿಶೇಷವಾಗಿ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತಹ ಬಿಳ್ಗೊಡುಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ಇಲಾಖೆಯ ನೌಕರರನ್ನ ತಹಶೀಲ್ದಾರ್ ಖುದ್ದು ಡ್ರೈವ್ ಮಾಡಿಕೊಂಡು ಅವರ ಮನೆಗೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸರ್ಕಾರಿ ಸೇವೆ ಸಲ್ಲಿಸಿದ ವ್ಯಕ್ತಿ ವಿಶೇಷ ಗೌರವವನ್ನ ಸಲ್ಲಿಸಿದ್ದಾರೆ.
ಹೊಸನಗರ ಕಂದಾಯ ಇಲಾಖೆ ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ತಮ್ಮ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಯೊಬ್ಬರು ನಿವೃತ್ತಿಯಾದ ಹಿನ್ನೆಲೆ ಅವರನ್ನು ತಮ್ಮ ವಾಹನದಲ್ಲಿ ಅವರ ಮನೆಗೆ ಡ್ರಾಪ್ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದ್ದಾರೆ.
ಸದಾಶಿವಪ್ಪ ಎಸ್ ವಿ ಕಳೆದ ಶನಿವಾರ ನಿವೃತ್ತರಾಗಿದ್ದರು. ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಬಳಿಕ ಅವರನ್ನ ರಶ್ಮಿ ಹಾಲೇಶ್ ತಮ್ಮ ವಾಹನದಲ್ಲಿ ಕೂರಿಸಿಕೊಂಡು ಖುದ್ದು ಡ್ರೈವ್ ಮಾಡಿಕೊಂಡು ನೌಕರರನ್ನ ಅವರ ಮನೆಗೆ ತಲುಪಿಸಿದರು. ಆ ಬಳಿಕ ನಿವೃತ್ತಿ ಜೀವನ ಶುಭಕರವಾಗಿರಲಿ ಎಂದು ಹಾರೈಸಿದರು.

ಜೂನ್, ಜುಲೈ, ಆಗಸ್ಟ್ | ಮೂರು ತಿಂಗಳಿನಲ್ಲಿ ರಾಜ್ಯದಲ್ಲಿ ಎಷ್ಟು ಮಳೆಯಾಗಿದೆ? | ಗುಡ್ ನ್ಯೂಸ್ ಇಲ್ಲಿದೆ
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?