ಒಂದೇ ದಿನ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್/ ಇಬ್ಬರು ಯುವಕರ ಸಾವು/ ಘಟನೆ ನಡೆದಿದ್ದು ಹೇಗೆ ಎಂಬ ವಿವರ ಇಲ್ಲಿದೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್​ಗಳು ಸಂಭವಿಸಿದೆ. ನಿನ್ನೆ ರಾತ್ರಿ ಒಂದು ಆಕ್ಸಿಡೆಂಟ್ ಆನಂದಪುರದ ಸಮೀಪ ಸಂಭವಿಸಿದೆ. ಇವತ್ತು ತ್ಯಾಗರ್ತಿ ಬಳಿಯಲ್ಲಿ ಇನ್ನೊಂದು ಆಕ್ಸಿಡೆಂಟ್​ ಸಂಭವಿಸಿದೆ. ಎರಡು ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. 

ತ್ಯಾಗರ್ತಿ ಬಳಿಯಲ್ಲಿ ಭೀಕರ ಅಪಘಾತ

ಸಾಗರ ತಾಲ್ಲುಕಿನ ತ್ಯಾಗರ್ತಿ ಬಳಿಯಲ್ಲಿ ಬರುವ ಹೊಸಂತೆ ಎಂಬಲ್ಲಿ ಇವತ್ತು ಮಧ್ಯಾಹ್ನ ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಚನ್ನಾಪುರದ ಪ್ರಮೋದ್​ ಎಂಬ 25 ವರ್ಷದ ಯುವಕ ಸಾವನ್ನಪ್ಪಿದ್ಧಾರೆ. ತಮ್ಮ ಅಜ್ಜಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ಪ್ರಮೋದ್​ ಗೌತಮಪುರದಿಂದ ತ್ಯಾಗರ್ತಿ ಕಡೆಗೆ ಬರುತ್ತಿದ್ದರು. ಈ ವೇಳೆ ಗೌತಮಪುರದ ಕಡೆಗೆ ಹೋಗುತ್ತಿದ್ದ ಇನ್ನೊಂದು ಬೈಕ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್ ಸಾವನ್ನಪ್ಪಿದ್ದಾರೆ. 

ಆನಂದಪುರದ  ಸಮೀಪ ನಿನ್ನೆ ರಾತ್ರಿ ಆಕ್ಸಿಡೆಂಟ್​

ಇನ್ನೂ ನಿನ್ನೆ ರಾತ್ರಿ ಆನಂದಪುರದ ಸಮೀಪ  ಸಂಭವಿಸಿದ ಅಪಘಾತದಲ್ಲಿ ಸಾಗರ ತಾಲ್ಲೂಕಿನ ಕಾಲೇಜೊಂದರ ವಿದ್ಯಾರ್ಥಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಬೈಕ್​ನಿಂದ ನಿಯಂತ್ರಣ ತಪ್ಪಿ ಬೈಕ್​ ಸವಾರ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂಬಂಧ ಮಲೆನಾಡು ಟುಡೆ ಮಾಡಿದ್ದ ವರದಿಯು ಇಲ್ಲಿದೆ ಒದಿ: ಶಿವಮೊಗ್ಗ ಜಿಲ್ಲೆಯ ಆನಂದಪುರ ಬಳಿ ಭೀಕರ ಅಪಘಾತ/ ಸಾಗರ ತಾಲ್ಲೂಕಿನ ವಿದ್ಯಾರ್ಥಿ ಸಾವು

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು