Skip to content

Malenadu Today Shivamogga

  • SHIVAMOGGA NEWS TODAY
  • MALNAD SUDDI
  • BANGALORE NEWS TODAY
  • INFORMATION NEWS
ಮುಖ್ಯ ವಿಷಯಕ್ಕೆ ಹೋಗಿ
ಶಿವಮೊಗ್ಗ ಆವೃತ್ತಿ12 ಆಗಷ್ಟ್ 2026, ಬುಧವಾರ
ePaper
Malenadu Today Shivamogga
  • SHIVAMOGGA NEWS TODAY
  • MALNAD SUDDI
  • BANGALORE NEWS TODAY
  • INFORMATION NEWS
ಮುಖಪುಟ›CRIME INVESTIGATION›ಸುದ್ದಿ

ಡಿ.ಸಿ ಹೆಸರಲ್ಲಿ ನಕಲಿ ಸಂದೇಶ: ಡಿ.ಡಿ.ಗೆ ₹50 ಸಾವಿರ ವಂಚನೆ! ಕೇಸ್​ ಆಯ್ತು

ajjimane ganesh
ವರದಿ: ajjimane ganesh 12 ಆಗಷ್ಟ್ 2026, 11:49 ಫೂರ್ವಾಹ್ನ · 3 ನಿಮಿಷ ಓದು
ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

Fake WhatsApp Account / ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಇತ್ತೀಚೆಗೆ ಅಧಿಕಾರಿಗಳ ಹೆಸರಲ್ಲಿ ನಕಲಿ ಐಡಿ ಕ್ರಿಯೆಟ್ ಮಾಡಿ ಮೋಸ ಮಾಡುವ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಇದಕ್ಕೆ ಹೊಸದೊಂದು ಉದಾಹರಣೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಇಲ್ಲಿನ ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸ್ ಆ್ಯಪ್‌ನಲ್ಲಿ ಚಾಟ್ ಮಾಡಿದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಎಂದು ನಂಬಿದ ಆಹಾರ ಇಲಾಖೆ ಉಪನಿರ್ದೇಶಕ (ಡಿ.ಡಿ.) ಯೋಗಾನಂದ ಅವರಿಗೆ ಮೋಸವಾಗಿದೆ. ಅಷ್ಟೆ ಅಲ್ಲದೆ ವಂಚಿಸಿದ ವ್ಯಕ್ತಿಯ ಮಾತು ನಂಬಿದ ಡಿಡಿ, ಆತ ಹೇಳಿದ ಬ್ಯಾಂಕ್ ಖಾತೆಯೊಂದಕ್ಕೆ 50 ಸಾವಿರ ಪಾವತಿಸಿದ್ದಾರೆ.

ಬಳಿಕ ತಾವು ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಹೀಗಾಗಿ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಅ.8ರಂದು ಈ ಘಟನೆ ನಡೆದಿದೆ. ಅಂದು ಯೋಗಾನಂದ ಅವರ ಮೊಬೈಲ್ಗೆ ವಾಟ್ಸ್ ಆ್ಯಪ್ ಮೆಸೇಜ್ ಬಂದಿದೆ. ಅದರ ಡಿಪಿಯಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಹೆಸರು ಮತ್ತು ಫೋಟೋ ಇತ್ತು. ಅವರ ಮೆಸೆಜ್​ನಲ್ಲಿ ‘ಹಲೊ ಯೋಗಾನಂದ್ ಹೌಆರ್ ಯು’ ಎಂಬ ಸಂದೇಶವನ್ನ ಯೋಗಾನಂದ್ ಗಮನಿಸಿದ್ದಾರೆ. ಆ ಬಳಿಕ ಚಾಟ್ ಮುಂದುವರಿದಿದೆ. ನನ್ನ ಬ್ಯಾಂಕಿನ ಆನ್‌ಲೈನ್ ಪೇಮೆಂಟ್​ ಟೆಕ್ನಿಕಲ್​ ಸಮಸ್ಯೆಯಾಗಿದ್ದು, ನಾನು ಕಳುಹಿಸುವ ಆಕೌಂಟ್ ನಂಬರ್ಗೆಗೆ ₹50 ಸಾವಿರ ಕಳುಹಿಸಿ ಎಂಬ ಸಂದೇಶ ಬಂದಿದೆ. ಅಲ್ಲದೆ ನಿಮಗೆ ತದನಂತರ ನೀಡುವುದಾಗಿ ಮೆಸೇಜ್ ರವಾನೆ ಯಾಗಿದೆ.

ಇದನ್ನ ನಂಬಿದ ಡಿಡಿ ಹೇಮಣ್ಣಗೌಡ ಗುಡ್ಡಣ್ಣಗೌಡ ಪಾಟೀಲ ಎಂಬ ಹೆಸರಿನ ಖಾತೆಗೆ 50 ಸಾವಿರ ಡಿಪಾಸಿಟ್ ಮಾಡಿದ್ದಾರೆ. ಬಳಿಕ ಅವರಿಗೆ ಈ ಬಗ್ಗೆ ಡೌಟ್ ಬಂದು ಜಿಲ್ಲಾಧಿಕಾರಿ ಅವರ ಅಪ್ತ ಸಹಾಯಕರಿಗೆ ಕರೆ ಮಾಡಿ ಕೇಳಿದ್ದಾರೆ. ಇದಕ್ಕೆ ಪ್ರತಿಕಿಯಿಸಿದ ಅವರು ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ಈ ರೀತಿ ಹಲವರಿಗೆ ಮೆಸೇಜ್ ಬಂದಿವೆ. ಪ್ರತಿಕ್ರಿಯೆ ನೀಡುವುದು ಬೇಡ’ಎಂದು ಅವರು ತಿಳಿಸಿದ್ದಾರೆ. ನಕಲಿ ಖಾತೆ ಎಂಬುದು ಗೊತ್ತಾದ ಬಳಿಕ ಯೋಗಾನಂದ ಸೈಬರ್ ಸ್ಟೇಷನ್​ಗೆ ಕಂಪ್ಲೆಂಟ್​ ಮಾಡಿದ್ದಾರೆ.

Advertisement
ಸಂಬಂಧಿತ ಸುದ್ದಿಬೆಂಗಳೂರಿನಿಂದ ಬಂದ ಕರೆ ಮೇಲಿತ್ತು ಸಂಶಯ! ಆಂಧ್ರದ ವ್ಯಕ್ತಿ ಶಿವಮೊಗ್ಗದಲ್ಲಿ ಬಂಧನ

ಇನ್ನಷ್ಟು ಓದಿ:

  • ಬೆಂಗಳೂರಿನಿಂದ ಬಂದ ಕರೆ ಮೇಲಿತ್ತು ಸಂಶಯ! ಆಂಧ್ರದ ವ್ಯಕ್ತಿ ಶಿವಮೊಗ್ಗದಲ್ಲಿ ಬಂಧನ
  • ಕುಂಸಿ ಪ್ರವೀಣ್​ ಕೊ@ಲೆ ಕೇಸ್! 2 ಕಾರಣ?ಎಸ್​ಪಿ ನಿಖಿಲ್ ಬಿ ಸ್ಟೇಟ್ಮೆಂಟ್​ !
  • ಶಿವಮೊಗ್ಗದ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಹೊರಜಿಲ್ಲೆಗಳಲ್ಲಿ ಪ್ರತ್ಯೇಕ ಎಫ್‌ಐಆರ್
ವಿಷಯಗಳು: Fake WhatsApp Account
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor

ಹಿಂದಿನ ಸುದ್ದಿಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಂಟೇನರ್ ಲಾರಿ
ಮುಂದಿನ ಸುದ್ದಿಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆ ಸಂಭ್ರಮ: ಬಿಡಾರ ಓಪನಿಂಗ್​​ ಬಗ್ಗೆ ಅಧಿಕಾರಿಗಳು ಹೇಳಿದ್ದೇನು

ಈಗ ಗಮನಿಸಬೇಕಾದವು

  1. 8 ವರ್ಷಗಳ ಹಿಂದೆ ಶಂಕರಘಟ್ಟದಿಂದ ಕಾಣೆಯಾಗಿದ್ದ ವ್ಯಕ್ತಿ ಹೊಸಪೇಟೆಯಲ್ಲಿ ಪತ್ತೆ: ಏನಿದು ಸುದ್ದಿ?
  2. ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ವಿಶ್ವ ಆನೆ ದಿನಾಚರಣೆ ಸಂಭ್ರಮ: ಬಿಡಾರ ಓಪನಿಂಗ್​​ ಬಗ್ಗೆ ಅಧಿಕಾರಿಗಳು ಹೇಳಿದ್ದೇನು
  3. ಶಿವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದ ಕಂಟೇನರ್ ಲಾರಿ
  4. ಶಿವಮೊಗ್ಗ – ಬೆಂಗಳೂರು ಸ್ಟಾರ್​ ಏರ್​ ವಿಮಾನ! ಸಂಸದ ಬಿ.ವೈ.ರಾಘವೇಂದ್ರ ಮಹತ್ವದ ಹೇಳಿಕೆ
  5. ಅಮೆಜಾನ್ ಫ್ರೀಡಂ ಸೇಲ್: ಇವಿ ಹಾಗೂ ಪೆಟ್ರೋಲ್ ಬೈಕ್​ಗಳ ಮೇಲೆ ಭಾರಿ ರಿಯಾಯಿತಿ

Malenadu Today Shivamogga

Just shivamogga news

ಸುದ್ದಿ ವಿಭಾಗಗಳು

ಮಲೆನಾಡುಕರ್ನಾಟಕದೇಶವಿಶ್ವಉಪಯುಕ್ತ ಮಾಹಿತಿ

ಓದುಗರ ಸೇವೆಗಳು ಮತ್ತು ನೀತಿಗಳು

ePaperಸಂಪರ್ಕಸಂಪಾದಕೀಯ ನೀತಿ
© 2026 Malenadu Today Shivamogga. All rights reserved.ಜವಾಬ್ದಾರಿಯುತ • ಸ್ವತಂತ್ರ • ನೆಲದ ಸುದ್ದಿ
ಮುಖಪುಟ ಮಲೆನಾಡು ePaper
About Us | Contact Us | Privacy Policy | Terms & Conditions | Disclaimer | Editorial Policy | Editorial Team
© 2026 Shivamogga Malenadu Today