ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ 112ಗೆ ಕೆಲವೊಮ್ಮೆ ಕರುಳ ಸಂಕಟ ಬರುವಂತಹ ಕೇಸ್ಗಳು ಬರುತ್ತವೆ. ಆದರೂ ಅವರುಗಳ ತಾಳ್ಮೆ ಮೆಚ್ಚಬೇಕು! ಏತಕ್ಕಾದ್ರೂ ಫೋನ್ ಮಾಡಿದ್ರು ಸಹ ನಾವು ಪೊಲೀಸನವ್ರು! ಏನ್ ಸಮಸ್ಯೆ ಕಾಲ್ ಮಾಡಿದ್ರಲ್ಲಾ ಅಂತಾ ತಾಳ್ಮೆಯಿಂದಲೇ ಕೇಳುತ್ತಾರೆ. ಸ್ಥಳಕ್ಕೆ ಬರುತ್ತಾರೆ. ತೋಚಿದ್ರರಲ್ಲಿ ಒಂದಿಷ್ಟು ಇತ್ಯರ್ಥ ಮಾಡಿ ಎಲ್ಲರನ್ನ ಸಮಾಧಾನ ಮಾಡುತ್ತಾರೆ.
ಪೊಲೀಸರ ಈ ತಾಳ್ಮೆಗೆ ಸವಾಲಾಗುವಂತಹ ಕೇಸ್ವೊಂದರ ಬಗ್ಗೆ ಹೇಳವುದಕ್ಕಾಗಿಯೇ ಈ ಪೀಠಿಕೆ. ಅಂದಹಾಗೆ ಈ ಪ್ರಸಂಗ ನಡೆದಿರೋದು ಭದ್ರಾವತಿ ತಾಲ್ಲೂಕು ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ .
112 ಗೆ ಶಿಫ್ಟ್ ಆದ ಬೌ..ಬೌ ಕೇಸ್!
ಇಲ್ಲಿನ ವಸತಿ ಪ್ರದೇಶವೊಂದರಲ್ಲಿ ಒಂದೆ ಮನೆಯಲ್ಲಿ ನಿವಾಸಿಯೊಬ್ಬರು 10 ರಿಂದ 15 ನಾಯಿಗಳನ್ನು ಸಾಕಿದ್ದಾರೆ. ನಾಯಿಗಳು ಅಂದ್ಮೇಲೆ ಬೊಗೋಳೋದನ್ನ ನಿಲ್ಲಿಸ್ತಾವಾ? ಖಂಡಿತ ಇಲ್ಲ. ಆದರೆ, ಈ ನಾಯಿಗಳ ಬೌಬೌ ಗಲಾಟೆಗೆ ಅಕ್ಕಪಕ್ಕದವರು ಸುಸ್ತು ಹೊಡೆದಿದ್ದಾರೆ. ಅಲ್ಲದೆ ಇನ್ನಾಗಲ್ಲ ಎಂದುಕೊಂಡು ‘112’ ಗೆ ಕರೆ ಮಾಡಿದ್ದಾರೆ.
ಕರೆ ಬಂದಮೇಲೆ ಕೇಸ್ ಅಟೆಂಡ್ ಮಾಡಿದ 112 ಸಿಬ್ಬಂದಿ ಸ್ಥಳಿಯರ ಅಹವಾಲು ಕೇಳಿದ್ದಾರೆ. ಬಳಿಕ ನಾಯಿಗಳ ಮಾಲೀಕರಿಗೆ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯ ಕುರಿತು ಮನವರಿಕೆ ಮಾಡಿದ್ದಾರೆ. ವಸತಿ ಪ್ರದೇಶದಲ್ಲಿ ಇಷ್ಟೊಂದು ನಾಯಿಗಳನ್ನು ಒಟ್ಟಿಗೆ ಇರಿಸಿಕೊಳ್ಳುವುದರಿಂದ ಆಗುವ ಸಮಸ್ಯೆಗಳನ್ನು ವಿವರಿಸಿದ ಸಿಬ್ಬಂದಿ, ಕೂಡಲೇ ಆ ಎಲ್ಲಾ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಎಚ್ಚರಿಕೆ ಕೊಟ್ಟು ಕೇಸ್ ಕ್ಲೋಸ್ ಮಾಡಿದ್ರು.
ಪೊಲೀಸರ ರಂಗಪ್ರವೇಶದಿಂದಾಗಿ ಅಂತಿಮವಾಗಿ ನಾಯಿಗಳ ಬೌಬೌ ಕೇಸ್ಗೆ ತಾರ್ಕಿಕ ಅಂತ್ಯ ಸಿಕ್ಕಂತಾಯ್ತು! ಆದರೆ ಕೊಲೆ,ಸುಲಿಗೆಯಂತಹ ಅಪರಾಧ ಪ್ರಕರಣಗಳ ಜೊತೆ ಜೊತೆಯಲ್ಲಿ ಪೊಲೀಸರು ಇಂತಹ ಬೀದಿ ಜಗಳ, ಕೇರಿ ಸಮಸ್ಯೆ, ಓಣಿ ವ್ಯಾಜ್ಯಗಳನ್ನ ಪರಿಹರಿಸುತ್ತಿರುವುದರಿಂದಲೇ ಕ್ರೈಂ ರೇಟು ಹೆಚ್ಚಾಗುತ್ತಿಲ್ಲ ಎಂಬುದು ವಾಸ್ತವ.
