ಸೊರಬ: ಅಕಾಲಿಕ ಗಾಳಿ ಮಳೆಗೆ ಬಾಳೆ ತೋಟ ನೆಲಸಮ, ಲಕ್ಷಾಂತರ ರೂಪಾಯಿ ನಷ್ಟ

ಸೊರಬ: ಸೊರಬ ತಾಲೂಕಿನಾದ್ಯಂತ ನಿನ್ನೆ ರಾತ್ರಿ ಅಬ್ಬರಿಸಿದ ಅಕಾಲಿಕ ಗಾಳಿ ಮಳೆಗೆ ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ಕಟಾವಿಗೆ ಸಿದ್ಧವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆಯು ಮಣ್ಣು ಪಾಲಾಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಏರ್​ಪೋರ್ಟ್​ ವಿಶ್ವೇಶ್ವರ್​ ಭಟ್​ Facebook post ,ಷೇರ್ ಮಾಡಿ ರಿಪ್ಲೆ ನೀಡಿದ ಸಂಸದ

ಘಟನೆಯ ವಿವರ

ಉಳವಿ ಹೋಬಳಿಯ ಎನ್. ಹೊಳೆಕಟ್ಟೆ ಗ್ರಾಮದದಲ್ಲಿ ಗಾಳಿ ಮಳೆಯ ಆರ್ಭಟದಿಂದಾಗಿ ರೈತ ಕೃಷ್ಣ ಮೂರ್ತಿ ಎಂಬುವವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಬೆಳೆಸಿದ್ದ ಬಾಳೆ ತೋಟವು ಸಂಪೂರ್ಣವಾಗಿ ಧರೆಗುರುಳಿದೆ. 

ಸುಮಾರು 2000 ಪಚ್ಚಾ ಬಾಳೆಗಿಡಗಳು ಕಟಾವಿನ ಹಂತಕ್ಕೆ ತಲುಪಿದ್ದವು. ಇನ್ನೇನು ಫಸಲು ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿ ಗಾಳಿಯ ವೇಗಕ್ಕೆ ಸಿಲುಕಿ ಗಿಡಗಳು ಮರಿದು ಬಿದ್ದಿವೆ. ಇದರಿಂದ ಕೃಷ್ಣ ಮೂರ್ತಿ ಅವರಿಗೆ ಲಕ್ಷಾಂತರ ರೂಪಾಯಿಗಳ ಆರ್ಥಿಕ ನಷ್ಟ ಸಂಭವಿಸಿದೆ

Heavy Rain and Wind Destroy Banana Plantation in Soraba 

Heavy Rain and Wind Destroy Banana Plantation in Soraba 
Heavy Rain and Wind Destroy Banana Plantation in Soraba 
shivamogga car decor sun control house
shivamogga car decor sun control house