ಬಸ್​ ಹಾಗೂ ಬೈಕ್​​ ನಡುವೆ ಡಿಕ್ಕಿ, ಸವಾರ ಸಾವು

ಹಂಚಿಕೊಳ್ಳಿ
WhatsApp Facebook X Telegram
Tragic Accident Bike Rider Killed near Holalur

ಶಿವಮೊಗ್ಗ : ಕೆ ಎಸ್​ ಆರ್​ ಟಿ ಸಿ ಬಸ್​ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ  ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಶಿವಮೊಗ್ಗ ತಾಲೂಕಿನ ಹೊಳಲೂರು ಬಳಿ ನಡೆದಿದೆ. ಕೀರ್ತಿ ನಾಯ್ಕ್​​ (46) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ.

ಶಿವಮೊಗ್ಗ: ನಿಂತಿದ್ದ ಕಾರ್​ನ ಗ್ಲಾಸ್​​ ಪುಡಿಮಾಡಿದ ಕಿಡಿಗೇಡಿಗಳು

ನಿನ್ನೆ ರಾತ್ರಿ ಸುಮಾರು 9:30ರ ಸಮಯದಲ್ಲಿ ಶಿವಮೊಗ್ಗದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಹೊಳಲೂರು ಮತ್ತು ಸೂಗೂರು ಮಧ್ಯೆ ಎದುರಿನಿಂದ ಬಂದ ಟಿವಿಎಸ್ ವಿಕ್ಟರ್ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tragic Accident Bike Rider Killed near Holalur

Tragic Accident Bike Rider Killed near Holalur
Tragic Accident Bike Rider Killed near Holalur
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor