ಗಣಪತಿ ಕೂರಿಸಿದ್ದ ಮನೆಗೆ ಹೋಗಿ ಅರಶಿನ ಕುಂಕಮ ತೆಗೆದುಕೊಂಡು ಬರುವಾಗ ಮಹಿಳೆಗೆ ಶಾಕ್! ದುರ್ಗಿಗುಡಿಯಲ್ಲಿ ನಡೀತು ಈ ಘಟನೆ

KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ 

ಹಬ್ಬಗಳ ಬಂದೋಬಸ್ತ್​ ಶಿವಮೊಗ್ಗ ನಗರದಲ್ಲಿ ಟೈಟಾಗಿದೆ. ಎಲ್ಲೆಡೆ ಪೊಲೀಸರು ಡ್ಯೂಟಿ ಮಾಡುತ್ತಿದ್ದಾರೆ. ಇದರ ನಡುವೆ ಕಳ್ಳರು ಕೈಚಳಕ ತೋರುತ್ತಿದ್ದಾರೆ. ಪೂರಕವೆಂಬಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಸ್ಟಷನ್​ (Doddapete Police Station) ವ್ಯಾಪ್ತಿಯಲ್ಲಿ ಸರಗಳ್ಳನ ನಡೆದಿದೆ. 

ಕಳೆದ 18 ನೇ ತಾರೀಖು ನಡೆದ ಘಟನೆ ಬಗ್ಗೆ ತಡವಾಗಿ ದೂರು ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಘಟನೆ ನಡೆದ ದಿನ ನಗರದ ದುರ್ಗಿಗುಡಿಯಲ್ಲಿ ಮಹಿಳೆಯೊಬ್ಬರು ಗಣೇಶ ಹಬ್ಬದ ಗಡಿಬಿಡಿಯಲ್ಲಿದ್ದರು. ಹಬ್ಬದ ದಿನ ಗಣೇಶನನ್ನ ಪ್ರತಿಷ್ಟಾಪನೆ ಮಾಡಿದ್ದ  ಪರಿಚಯಸ್ಥರ ಮನೆಯೊಂದಕ್ಕೆ ಅರಶಿನ ಕುಂಕುಮಕ್ಕಾಗಿ ಹೋಗಿ ವಾಪಸ್ ಮನೆಗೆ ಬರುತ್ತಿದ್ದರು. ಈ ವೇಳೆ  ಎದುರುಬದಿಯಿಂದ ನಡೆದುಕೊಂಡ ಬಂದ ವ್ಯಕ್ತಿಯೊಬ್ಬ ಕುತ್ತಿಗೆಗೆ ಕೈಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಅಲ್ಲಿಯೇ ಇದ್ದ ಕನ್ಸರ್​ ವೆನ್ಸಿಯಿಂದ ಓಡಿ ಪರಾರಿಯಾಗಿದ್ದಾನೆ. 

ಈ ಘಟನೆಯಲ್ಲಿ ಮಹಿಳೆಯ  ಒಂದು ಲಕ್ಷದ 20 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ. ಬೈಕ್​​ನಲ್ಲಿ ಬಂದು ಸರಗಳ್ಳತನ ಮಾಡುತ್ತಿದ್ದವರ ನಡುವೆ , ನಡೆದುಕೊಂಡು ಬಂದು ಸರಕದ್ದು ವ್ಯಕ್ತಿಯೊಬ್ಬ ಪರಾರಿಯಾಗಿರುವುದು ಪ್ರಕರಣ ವಿಭಿನ್ನವಾಗಿ ಕಾಣುವಂತೆ ಮಾಡಿದೆ.  


ಇನ್ನಷ್ಟು ಸುದ್ದಿಗಳು 

 


 

Leave a Comment