ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿದ ಲಾರಿ!/ ಒಳಗೆ ಬನ್ನಿ ಎಂದಿದ್ದಕ್ಕೆ , ಕುಡಿದು ಹೊರಗೆ ಬೋರ್ಡ್​ ಒಡೆದರು/ ಬಸ್​ ನಲ್ಲಿ ಗೋಮಾಂಸ ಸಾಗಿಸ್ತಿದ್ದವ ಅರೆಸ್ಟ್​

This Article Written by / Malenadu Today / ಸೆಪ್ಟೆಂಬರ್ 17, 2023

KARNATAKA NEWS/ ONLINE / Malenadu today/ Sep 17, 2023 SHIVAMOGGA NEWS

ಗೋಮಾಂಸ ಸಾಗಿಸ್ತಿದ್ದವ ಅರೆಸ್ಟ್ 

ಶಿವಮೊಗ್ಗ ಜಿಲ್ಲೆಯಲ್ಲಿ ಶಿರಾಳಕೊಪ್ಪದಿಂದ ಸಾಗರಕ್ಕೆ ಖಾಸಗಿ ಬಸ್​ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ರಾಣೇಬೆನ್ನೂರು ಮೂಲದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ. ಇಮ್ತಿಯಾಜ್ ಬಂಧಿತ ಆರೋಪಿ. ಸಾಗರ ಪೊಲೀಸರು ನಡೆಸಿದ ದಾಳಿ ಒಂದು ಬೈಕ್​ನ್ನ ವಶಕ್ಕೆ ಪಡೆಯಲಾಗಿದೆ. ಖಾಸಗಿ ಬಸ್​ನಲ್ಲಿ ದನದ ಮಾಂಸ ತಂದು ಸಾಗರದಲ್ಲಿ ಮಾರುತ್ತಿದ್ದ ಆರೋಪಿ ಇವರ ಮೇಲೆ ಕೇಳಿಬಂದಿದ್ದು,  ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಒಳಗಡೆ ಕುಡಿಯಿರಿ ಎಂದಿದ್ದಕ್ಕೆ ಬೋರ್ಡ್​ ಒಡೆದರು

ಹೊರಗಡೆ ಕುಡಿಯಬೇಡಿ, ಒಳಗೆ ಹೋಗಿ ಕುಡಿಯಿರಿ ಎಂದಿದ್ದಕ್ಕೆ ಗಲಾಟೆ ಮಾಡಿ ಹಲ್ಲೆಗೆ ಮುಂದಾದ ಆರೋಪವೊಂದು ಸಾಗರ ತಾಲ್ಲೂಕಿನಲ್ಲಿ ಕೇಳಿಬಂದಿದೆ. ವರದಹಳ್ಳಿ ಸರ್ಕಲ್​ ಬಳಿಯಲ್ಲಿರುವ ಸೌಪರ್ಣಿಕಾ  ಹೋಟೆಲ್​ನಲ್ಲಿ ನಡೆದ ಘಟನೆ ಇದಾಗಿದೆ. ಘಟನೆಯಲ್ಲಿ ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷರೊಬ್ಬರು ಸೇರಿ ಹಲವರ ವಿರುದ್ಧ ಕೇಸ್ ದಾಖಲಾಗಿದೆ.  ಒಳಗೆಡೆ ಹೋಗಿ ಕುಡಿಯಿರಿ ಎಂದಿದ್ದಕ್ಕೆ ಹೋಟೆಲ್ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿ, ಹೋಟೆಲ್ನ ಬೋರ್ಡ್​ ಒಡೆದು ಸಾಮಾಗ್ರಿಗಳನ್ನು ಧ್ವಂಸ ಮಾಡಿರುವ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  

10 ಚಕ್ರದ ಲಾರಿ ಪಲ್ಟಿ! 

ಚಿಕ್ಕಮಗಳೂರು ಜಿಲ್ಲೆ   ಮೂಡಿಗೆರೆ ತಾಲೂಕಿನ ಬಣಕಲ್ ಬಳಿಯಲ್ಲಿ ಟೆನ್ ವೀಲ್ಹ್​ ಲಾರಿಯಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ನಡುರಸ್ತೆಯಲ್ಲಿ ಲಾರಿ ಉರುಳಿ ಬಿದ್ದಿದ್ದು ಸಂಚಾರಕ್ಕೆ ಕೆಲವೊತ್ತು ಅಡೆತಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಲಾರಿಯಲ್ಲಿದ್ದ ಪ್ಲೇವುಡ್ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಾರಿ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಲಾರಿಯಲ್ಲಿಯೇ ಸಿಲುಕಿದದ್ದ ಚಾಲಕ ಹಾಗೂ ಕ್ಲೀನರ್​​ನ್ನ ಸ್ಥಳೀಯರು ಬಚಾವ್ ಮಾಡಿದ್ದಾರೆ.  


ಇನ್ನಷ್ಟು ಸುದ್ದಿಗಳು 

 


 

#ShimogaNews,#ShivamoggaNews,HosanagarA Today News,Male Nadu Today News. Com,Malnad Live,Malnad News Today,Malnad Report,Malnad Stories,News Sagar,Sagar Today News,Shikaripura Today News,Shimoga District Report,Shimoga Local News,Shimoga Times Today,Shimoga Today Details,shimoga today news,Shimoga Today Report,SHIVAMOGGA,shivamogga live,Shivamogga Today Live News,Shivamogga Today Video,Soraba Today News,Thirthahalli Today News

ಮುಂದಿನ ಸುದ್ದಿ ಒದಿ

Leave a Comment