ಫ್ರೀಡಂಪಾರ್ಕ್​ ಬಳಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಅಪ್ರಾಪ್ತೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗದ ಪ್ರೀಡಂ ಪಾರ್ಕ್​ ಬಳಿಯಲ್ಲಿ ಆತ್ಮಹತ್ಯೆಗೆ ಯತ್ನಿಸ್ತಿದ್ದ ಯುವತಿಯ ಜೀವವನ್ನು ಇಬ್ಬರು ಪೊಲೀಸ್ ಸಿಬ್ಬಂದಿ ಉಳಿಸಿದ್ದಾರೆ. 

ನಡೆದಿದ್ದೇನು?

ಇವತ್ತ ಅಂದರೆ,  ದಿನಾಂಕಃ 28-08-2023 ರಂದು ಮಧ್ಯಾಹ್ನ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ERSS ವಾಹನದ ಸಿಬ್ಬಂಧಿಗಳಾದ ರಾಘವೇಂದ್ರ, ಚನ್ನಕೇಶವ ERV ವಾಹನದಲ್ಲಿ ಪ್ರೀಡಂಪಾರ್ಕ್​ ಬಳಿಯಲ್ಲಿ ಗಸ್ತು ನಡೆಸ್ತಿದ್ರು. ಈ ವೇಳೇ ಅಲ್ಲಿ ಅಪ್ರಾಪ್ತೆಯೊಬ್ಬಳು ಗಾಜಿನಿಂದ ಕೈಯನ್ನು ಕೊಯ್ದುಕೊಳ್ಳುವುದನ್ನ ಕಂಡಿದ್ದಾರೆ. ತಕ್ಷಣವೇ ಆಕೆಯನ್ನು ತಡೆದು ರಕ್ಷಿಸಿದ ಸಿಬ್ಬಂದಿ ತಮ್ಮ ಇಆರ್​ವಿ ವಾಹನದಲ್ಲಿಯೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆ ಕೊಡಿಸಿದ್ಧಾರೆ. 

ಅಪ್ರಾಪ್ತೆಯು ಯಾವುದೋ ಒಂದು ಕಾರಣಕ್ಕೆ ಒಡೆದ ಗಾಜಿನ ಚೂರಿನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಅದೇ ಸಮಯಕ್ಕೆ ಅಲ್ಲಿದ್ದ ಸಿಬ್ಬಂದಿ ಆಕೆಯ ಜೀವ ಉಳಿಸಿದ್ಧಾರೆ.  ERSS ಸಿಬ್ಬಂಧಿಗಳ ಈ  ಮಾನವೀಯ ಕೆಲಸಕ್ಕೆ ಎಸ್​ಪಿ  ಮಿಥುನ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿ ಇಬ್ಬರು ಸಿಬ್ಬಂದಿಯನ್ನು ಅಭಿನಂದಿಸಿದ್ಧಾರೆ. 


ಇನ್ನಷ್ಟು ಸುದ್ದಿಗಳು 


 

 

Leave a Comment