ಹೆಲ್ಮೆಟ್ ಜಾಗ್ರತೆ! ಶಿವಮೊಗ್ಗದಲ್ಲಿ ಮುಂದುವರಿದ ಅಭಿಯಾನ! ಪೊಲೀಸರಿಗೆ ಡಬ್ಬಲ್​ ದಂಡ!?

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಶಿವಮೊಗ್ಗ ಪೊಲೀಸರು ಹಾಫ್ ಹೆಲ್ಮೆಟ್ ( Half Helmet ) ವಿರುದ್ಧ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.  ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ  ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರರನ್ನು ನಿಲ್ಲಿಸಿ, ಹಾಫ್​ ಹೆಲ್ಮೆಟ್ ನಿಂದ ಆಗುಬಹುದಾದ ಅಪಾಯದ ಬಗ್ಗೆ ವಿವರಿಸಿದ್ಧಾರೆ. ಹೆಲ್ಮೆಟ್​ಗಳನ್ನು ವಶಕ್ಕೆ ಪಡೆದಿದ್ದಾರೆ.  

ವಾಹನ ಸವಾರರು  ತಮ್ಮ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಗಳನ್ನೇ ಧರಿಸುವಂತೆ ತಿಳುವಳಿಕೆ ನೀಡತ್ತಿದ್ದಾರೆ. ಐಎಸ್ಐ ಪ್ರಮಾಣಿತವಲ್ಲದ Half Helmet ಧರಿಸುವದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಐಎಸ್ಐ ಪ್ರಮಾಣಿತ ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಹೆಲ್ಮೆಟ್ ಗಳನ್ನು ಧರಿಸುವುದರಿಂದಾಗುವ ಉಪಯೋಗಗಳ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ. 

ಪೊಲೀಸರಿಗೆ ಡಬ್ಬಲ್ ದಂಡ

ಪೊಲೀಸ್ ಇಲಾಖೆಯ ಅಭಿಯಾನದ ನಡುವೆ ಪೊಲೀಸರು ಸಹ ಹಾಫ್ ಹೆಲ್ಮೆಟ್ ಧರಿಸುತ್ತಾರೆ ಎಂದು ಸಾರ್ವಜನಿಕರು ದೂರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ‘ದ್ವಿಚಕ್ರ ವಾಹನ ಚಲಾಯಿಸುವ ಪೊಲೀಸ್‌ ಸಿಬ್ಬಂದಿ ಹಾಫ್‌ ಹೆಲ್ಮೆಟ್‌ (Half Helmet) ಧರಿಸುವಂತಿಲ್ಲ. ಹಾಗೊಂದು ವೇಳೆ ಧರಿಸಿದರೆ, ದುಪ್ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಎಸ್​ಪಿ ಮಿಥುನ್ ಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.  


ಆರು ಚಿನ್ನದ ಪದಕದ ಜೊತೆಗೆ ರಾಜ್ಯದಲ್ಲಿಯೇ ಫಸ್ಟ್ RANK ಪಡೆದ ಶಿವಮೊಗ್ಗ ಯುವತಿ!

ಶಿವಮೊಗ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020 – 23ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ್ಯಾಂಕ್​ ಪಡೆದಿದ್ಧಾರೆ. ಅಲ್ಲದೆ ಆರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಇದೇ ವೇಳೆ ಎಲೆಕ್ಟ್ರಾನಿಕ್ಸ್‌ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ ಕೆ. ವಂತಕರ್‌ ರಾಜ್ಯಕ್ಕೆ 9ನೇ ರಾಂಕ್‌ ಪಡೆದಿದ್ದಾರೆ.


VIRAL TODAY / ಶಾಸಕರ ಬಾಯಿ ರುಚಿ ಮತ್ತು ಬೃಂದಾವನ್​ ಕ್ಯಾಂಟಿನ್​ ಮೆಣಸಿನ ಕಾಯಿ ಬೋಂಡಾ! ವೈರಲ್​ ಆಯ್ತು ಬೇಳೂರು ಹೇಳಿದ ಬಜ್ಜಿ ರೆಸಿಪಿ!

 

ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು (MLA Gopalakrishna Belur ) ರಿಪ್ಪನ್‌ ಪೇಟೆಗೆ ಬಂದಿದ್ದ ವೇಳೆ ಬೋಂಡಾ ಹೇಗೆ ಮಾಡಿದರೆ ರುಚಿ ಜಾಸ್ತಿ ಎಂಬುದನ್ನ ವಿವರಿಸಿದ ವಿಡಿಯೋವೊಂದು ವೈರಲ್​ ಆಗಿದೆ. 

ನಡೆದಿದ್ದೇನು?

ರಿಪ್ಪನ್​ ಪೇಟೆ ಪ್ರವಾಸದಲ್ಲಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ, ಮಳೆಯ ನಡುವೆ, ಅವರ ಅಭಿಮಾನಿಗಳ ಜೊತೆ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ಬೃಂದಾವನ ಕ್ಯಾಂಟೀನ್‌ ಗೆ ತೆರಳಿದ್ದರು. ಅದೇ ಹೊತ್ತಿಗೆ ಕ್ಯಾಂಟೀನ್​  ಮಾಲೀಕ ಸ್ವಾಮಿ ಬೋಂಡಾ ಮಾಡುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಈ ಮಳೆಗಾಲದಲ್ಲಿ ಇಂತಹ ಚುರುಮುರಿ ತಿಂಡಿ ಇದ್ದರೆ ಅದರ ಗಮತ್ತೆ ಬೇರೆ ಎಂದರು. ಅಲ್ಲದೆ ಮೆಣಸಿನಕಾಯಿ ದಪ್ಪ ಇರಬೇಕು, ಅದನ್ನು ಕತ್ತರಿಸಿ ಉಪ್ಪಿನಲ್ಲಿಟ್ಟು, ನಂತರ ಕಡ್ಲೆಹಿಟ್ಟಿನೊಂದಿಗೆ ಬೆರೆಸಿ, ಎಣ್ಣೆ ಬಾಣಲಿಗೆ ಹಾಕಿ ಕರಿಯಬೇಕು. ಹೀಗೆ ಬೋಂಡಾ ಕರಿದರೆ ಅದರ ರುಚಿಯ ಮಜವೇ ಬೇರೆ ಎಂದು ಹೋಟೆಲ್ ಮಾಲೀಕರಿಗೆ ಹೇಳಿದ್ರು. ಸದ್ಯ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು, ಶಾಸಕರ ಬಾಯಿರುಚಿ ಬಗ್ಗೆ ಜನರು ಮಾತನಾಡಿಕೊಳ್ತಿದ್ದಾರೆ.  

 


SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ

Malenadu Today

 ​ 

 

 

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು