ಒಂದೇ ದಿನ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್/ ಇಬ್ಬರು ಯುವಕರ ಸಾವು/ ಘಟನೆ ನಡೆದಿದ್ದು ಹೇಗೆ ಎಂಬ ವಿವರ ಇಲ್ಲಿದೆ

This Article Written by / Malenadu Today / ಡಿಸೆಂಬರ್ 23, 2022

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಎರಡು ಆಕ್ಸಿಡೆಂಟ್​ಗಳು ಸಂಭವಿಸಿದೆ. ನಿನ್ನೆ ರಾತ್ರಿ ಒಂದು ಆಕ್ಸಿಡೆಂಟ್ ಆನಂದಪುರದ ಸಮೀಪ ಸಂಭವಿಸಿದೆ. ಇವತ್ತು ತ್ಯಾಗರ್ತಿ ಬಳಿಯಲ್ಲಿ ಇನ್ನೊಂದು ಆಕ್ಸಿಡೆಂಟ್​ ಸಂಭವಿಸಿದೆ. ಎರಡು ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. 

ತ್ಯಾಗರ್ತಿ ಬಳಿಯಲ್ಲಿ ಭೀಕರ ಅಪಘಾತ

ಸಾಗರ ತಾಲ್ಲುಕಿನ ತ್ಯಾಗರ್ತಿ ಬಳಿಯಲ್ಲಿ ಬರುವ ಹೊಸಂತೆ ಎಂಬಲ್ಲಿ ಇವತ್ತು ಮಧ್ಯಾಹ್ನ ಬೈಕ್​ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಪರಿಣಾಮ ಚನ್ನಾಪುರದ ಪ್ರಮೋದ್​ ಎಂಬ 25 ವರ್ಷದ ಯುವಕ ಸಾವನ್ನಪ್ಪಿದ್ಧಾರೆ. ತಮ್ಮ ಅಜ್ಜಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದ ಪ್ರಮೋದ್​ ಗೌತಮಪುರದಿಂದ ತ್ಯಾಗರ್ತಿ ಕಡೆಗೆ ಬರುತ್ತಿದ್ದರು. ಈ ವೇಳೆ ಗೌತಮಪುರದ ಕಡೆಗೆ ಹೋಗುತ್ತಿದ್ದ ಇನ್ನೊಂದು ಬೈಕ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್ ಸಾವನ್ನಪ್ಪಿದ್ದಾರೆ. 

ಆನಂದಪುರದ  ಸಮೀಪ ನಿನ್ನೆ ರಾತ್ರಿ ಆಕ್ಸಿಡೆಂಟ್​

ಇನ್ನೂ ನಿನ್ನೆ ರಾತ್ರಿ ಆನಂದಪುರದ ಸಮೀಪ  ಸಂಭವಿಸಿದ ಅಪಘಾತದಲ್ಲಿ ಸಾಗರ ತಾಲ್ಲೂಕಿನ ಕಾಲೇಜೊಂದರ ವಿದ್ಯಾರ್ಥಿ ಸಾವನ್ನಪ್ಪಿದ್ದು, ಘಟನೆಯಲ್ಲಿ ಬೈಕ್​ನಿಂದ ನಿಯಂತ್ರಣ ತಪ್ಪಿ ಬೈಕ್​ ಸವಾರ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂಬಂಧ ಮಲೆನಾಡು ಟುಡೆ ಮಾಡಿದ್ದ ವರದಿಯು ಇಲ್ಲಿದೆ ಒದಿ: ಶಿವಮೊಗ್ಗ ಜಿಲ್ಲೆಯ ಆನಂದಪುರ ಬಳಿ ಭೀಕರ ಅಪಘಾತ/ ಸಾಗರ ತಾಲ್ಲೂಕಿನ ವಿದ್ಯಾರ್ಥಿ ಸಾವು

#ShimogaNews,#ShivamoggaNews,HosanagarA Today News,kA,Male Nadu Today News. Com,Malnad Live,Malnad News Today,Malnad Report,Malnad Stories,News Sagar,Sagar Today News,Shikaripura Today News,Shimoga District Report,Shimoga Local News,Shimoga Times Today,Shimoga Today Details,shimoga today news,Shimoga Today Report,SHIVAMOGGA,shivamogga latest news,shivamogga live,Shivamogga Today Live News,shivamogga today news,Shivamogga Today Video,Soraba Today News,Thirthahalli Today News

ಮುಂದಿನ ಸುದ್ದಿ ಒದಿ

Leave a Comment