SHIVAMOGGA | MALENADUTODAY NEWS | ಮಲೆನಾಡು ಟುಡೆ Feb 24, 2025

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ನಿನ್ನೆ ದಿನ ಎರಡು ಅಪಘಾತಗಳು ಸಂಭವಿಸಿದೆ. ಒಂದು ಘಟನೆಯ ಕುರುವಳ್ಳಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಕುಡುಮಲ್ಲಿಗೆ ಬಳಿ ಲಾರಿಯಡಿ ಸಿಲುಕಿದ ಬೈಕ್ & ಸವಾರರು | ಬಾಗಲಕೋಟೆಯ ಓರ್ವ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ
ಇನ್ನೊಂದು ಘಟನೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಡಿಕ್ಕಿಯಾದ ಘಟನೆ 15 ಮೈಲಿಕಲ್ಲು ಬಳಿ ಸಂಭವಿಸಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯಲ್ಲಿ ಇಬ್ಬರು ಯುವಕರಿಗೆ ಗಂಭೀರ ಗಾಯವಾಗಿದೆ. ಅದರಲ್ಲಿ ಓರ್ವನ ಕಾಲಿಗೆ ಬಾರಿ ಪೆಟ್ಟಾಗಿದೆ. ಇವರಿಬ್ಬರು ಯುವಕರು ಸುಬ್ಬಯ್ಯ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎನ್ನಲಾಗಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | Bike car accident near the 15th milestone of Thirthahalli

KEY WORDS |Bike car accident ,15th milestone , Thirthahalli