SHIVAMOGGA | MALENADUTODAY NEWS | ಮಲೆನಾಡು ಟುಡೆ Feb 6, 2025

ಶಿವಮೊಗ್ಗದಲ್ಲಿ ನಡೆದ ಹಾಗೂ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಮಲೆನಾಡು ಟುಡೆಯ ಶಿವಮೊಗ್ಗದಲ್ಲಿ ಏನೇನು ವರದಿ ವಿಭಾಗದಲ್ಲಿ ನಿಮ್ಮ ಮುಂದೆ
ಸುದ್ದಿ 1 | ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು – ಡಾ.ಭೀಮೇಶ್ವರ ಜೋಷಿ
ಜೀವನದಲ್ಲಿ ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು. ಅದು ಸಹ ಜೇಸಿಯಲ್ಲಿ ತರಬೇತಿ ಪಡೆದು 40 ವರ್ಷ ದಾಟಿದ ಜೆಸಿ ಮಿತ್ರರು ಸೀನಿಯರ್ ಛೇಂಬರ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ತೀರ್ಥಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ ಹಾಗೂ ಇದು ಅಗಾಧವಾಗಿ ಬೆಳೆಯಲು ಬುನಾದಿಯನ್ನು ಹಾಕಿದ್ದಾರೆ ಎಂದು ಹೊರನಾಡು ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಷಿ ಹೇಳಿದರು. ಶನಿವಾರ ತೀರ್ಥಹಳ್ಳಿ ಪಟ್ಟಣದ ಎಲೆಮನೆ ರಿಟ್ರೇಟ್ ಅನುಗೊಡಿಗೆ ಮೃಗವಧೆಯಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ತೀರ್ಥಹಳ್ಳಿ ಘಟಕದ ವತಿಯಿಂದ ಆಯೋಜಿಸಿದ್ದ ಸಾಧಕರೊಂದಿಗೆ ಕೆಲಹೊತ್ತು ಕಾರ್ಯಕ್ರಮಚನ್ನು ಉದ್ಘಾಟಿಸಿ ಮಾತನಾಡಿದರು.

ಸುದ್ದಿ 2 | ಫೆ 9 ರಂದು ಬೆಳ್ಳಿಮೋಡದಂಚಿನ ಬಂಗಾರದ ಹಾಡು ಕಾರ್ಯಕ್ರಮ
ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಫೆಬ್ರವರಿ 9 ರ ಸಂಜೆ 5:30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ, ಆಯ್ದ 5 ಜನ ಪ್ರಸಿದ್ಧ ಸಂಗೀತ ನಿರ್ದೇಶಕರ ಬೆಳ್ಳಿಮೋಡದಂಚಿನ ಬಂಗಾರದ ಹಾಡು ಎಂಬ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಭಿರುಚಿ ಕಾರ್ಯದರ್ಶಿ ಕುಮಾರ್ ಶಾಸ್ತ್ರಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗದ ಸುರೇಖಾ ಹೆಗ್ಡೆ, ಶೃತಿ ರಾಘವೇಂದ್ರ, ಪಾರ್ಥ ಚಿರಂತನ್ ಹಾಗೂ ಹಿನ್ನೆಲೆ ಗಾಯಕರಾದ ಮನೋಜವಂ ಆತ್ರೇಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಡಾ.ಎ.ಶಿವರಾಮಕೃಷ್ಣ ಅವರ ಅದ್ಯಕ್ಷತೆಯಲ್ಲಿ ಸಂಗೀತಮಯ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ 3 | ಮಂಗಳ ಶಿವಣ್ಣಗೌಡರ ನಿಧನಕ್ಕೆ ಸಂತಾಪ
ಹಿರಿಯ ನಾಟಿ ವೈದ್ಯರಾದ ಮಂಗಳಶಿವಣ್ಣಗೌಡರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ ಸಂತಾಪ ಸೂಚಿಸಿದೆ ಶ್ರೀಯುತರ ಆಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ನೀಡಲಿ ಎಂದು ಸಂಘದ ಕಾರ್ಯದರ್ಶಿ ಪ್ರಾರ್ಥಿಸಿದ್ದಾರೆ.
ಸುದ್ದಿ 4 | ನಾಳೆಯಿಂದ ನಾಲಕ್ಕು ದಿನಗಳ ಕಾಲ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ, ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥಕವಾಗಿ ಎಪಿಜೆ ಅಬ್ದುಲ್ ಕಲಾಂ ಕಪ್” ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದಂತಹ ಅಬ್ದುಲ್ ಮುಜೀಬಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿನಾಂಕ 6,7,8,9 ರ ಫೆಬ್ರವರಿ ಎಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಒಟ್ಟು 16 ತಂಡಗಳು ಭಾಗ ವಹಿಸಲಿದ್ದು ಉದ್ಘಾಟನೆ ಪಂದ್ಯವಾಗಿ ಶಿವಮೊಗ್ಗ ತುಂಗಾ ನಗರ ಪೊಲೀಸ್ ತಂಡ ಹಾಗೂ ಆಯೋಜಕರ ತಂಡದ ನಡುವೆ ಸ್ನೇಹ ಮಿಲನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿ 5 | ದೂರದರ್ಶನದಲ್ಲಿ ಕನಕ ಕಿಂಕಿಣಿ
ಇದೇ ಫೆಬ್ರವರಿ 9 ರ ಭಾನುವಾರ ಸಂಜೆ 5 ಗಂಟೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀವಿಜಯ ಕಲಾನಿಕೇತನದ ಕಿರಿಯ ವಿದ್ಯಾರ್ಥಿಗಳಿಂದ ಡಾ|| ಕೆ.ಎಸ್. ಪವಿತ್ರಾರ ನಿರ್ದೇಶನದಲ್ಲಿ “ಕನಕ ಕಿಂಕಿಣಿ” ಎಂಬ ನೃತ್ಯ ಪ್ರಸ್ತುತಿ ಪ್ರದರ್ಶನಗೊಳ್ಳಲಿದೆ. ಸಂತ ಕವಿ ಕನಕದಾಸರ ಕಾವ್ಯಾಧಾರಿತ ನೃತ್ಯ ಪ್ರಸ್ತುತಿ ಇದಾಗಿದ್ದು ಆಸಕ್ತರು ವೀಕ್ಷಿಸುವಂತೆ ಕೋರಲಾಗಿದೆ.
SUMMARY | shivamogga event news
KEY WORDS | shivamogga event news