SHIVAMOGGA NEWS TODAY

ಶಿವಮೊಗ್ಗ ಭಾರಿ ಮಳೆ : ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ | Shivamogga Rain Disaster

[email protected] ನವೀಕರಣ: 27 ಏಪ್ರಿಲ್ 2026, 11:01 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ ಭಾರಿ ಮಳೆ : ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ | Shivamogga Rain Disaster

ಶಿವಮೊಗ್ಗ ನಗರದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಮಳೆಯ ಜೊತೆಗೆ ಭಾರಿ ಸಿಡಿಲಿನ ಭೀತಿ ಎದುರಾಗಿದೆ. ಇಂದು ಸಂಜೆ ನಗರದಲ್ಲಿ ದಿಢೀರನೆ ಶುರುವಾದ ಭಾರಿ ಬಿರುಗಾಳಿ ಹಾಗೂ ಮಳೆಯ ನಡುವೆ ವಿದ್ಯಾನಗರ ಬಡಾವಣೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ಮಳೆಯ ಅಬ್ಬರದ ನಡುವೆ ಅಪ್ಪಳಿಸಿದ ಭಾರಿ ಸಿಡಿಲಿಗೆ ಬಡಾವಣೆಯಲ್ಲಿದ್ದ ಬೃಹತ್ ತೆಂಗಿನ ಮರವೊಂದು ಕ್ಷಣಾರ್ಧದಲ್ಲಿ ಬೆಂಕಿಗಾಹುತಿಯಾಗಿದೆ. ಸಿಡಿಲಿನ ತೀವ್ರತೆಗೆ ಮರ ಹೊತ್ತಿ ಉರಿಯಲಾರಂಭಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ, ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿ ತೆಂಗಿನ ಮರಕ್ಕೆ ಹೊತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸುತ್ತಮುತ್ತಲಿನ ಮನೆಗಳಿಗೆ ಬೆಂಕಿ ಆವರಿಸುವುದು ತಪ್ಪಿದಂತಾಗಿದೆ.

👇 ನಿಮ್ಮ ಊರಿನಲ್ಲಿ ಮಳೆಯ ವಾತಾವರಣ ಹೇಗಿದೆ? ಮಳೆ ವಿಡಿಯೋಗಳನ್ನು ನೀವು ಸಹ ಕಳಿಸಬಹುದು! ನಮ್ಮ ಮಲೆನಾಡು ಟುಡೆ ವಾಟ್ಸಾಪ್ ನಂಬರ್​ಗೆ ಕಳುಹಿಸಿ 9353314090

ಶಿವಮೊಗ್ಗ ಮಳೆ, ಸಿಡಿಲು ಬಡಿತ, ವಿದ್ಯಾನಗರ, ಅಗ್ನಿಶಾಮಕ ದಳ, ತೆಂಗಿನ ಮರಕ್ಕೆ ಬೆಂಕಿ, ಶಿವಮೊಗ್ಗ ಬ್ರೇಕಿಂಗ್ ನ್ಯೂಸ್, Malenadu Today, Shivamogga Rain, Lightning Strike, Vidyanagar Shivamogga, Fire Brigade Karnataka. #RainAlert, #WeatherUpdate, #Monsoon2026, #Thunderstorm, #ViralNewsKarnataka, #BreakingNewsShivamogga, #TrendingKarnataka, #ReelsIndia, #ExplorePage, #KarnatakaNewsLive

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು: