ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲ್ಲ: ಕೆ.ಎಸ್​.ಈಶ್ವರಪ್ಪ

Won't be another problem for govt: KS Eshwarappa

ಪ್ರತಿಷ್ಟೆಗಾದರೂ ಸಚಿವರಾಗಬೇಕು ಎನ್ನುತ್ತಿದ್ದ ಕೆ.ಎಸ್​.ಈಶ್ವರಪ್ಪ, ಇದೀಗ ನಾನು ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ಸಿದ್ಧನಿಲ್ಲ ಎನ್ನುತ್ತಿದ್ಧಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ಧಾರೆ. ನ್ಯಾಯಬದ್ಧ ತಂತ್ರಗಾರಿಕೆಯಿಂದಲೇ ಎಲ್ಲೆಡೆ ಬಿಜೆಪಿ ಗೆಲ್ಲುತ್ತಿದೆ, ಅನೇಕ ಕಡೆ ಹೊಸ ಹೊಸ ಮುಖಗಳಿಗೆ ಟಿಕೆಟ್ ನೀಡಿದರು. ಹಲವೆಡೆ ಹಿಂದಿನ ಎಂಎಲ್​ಎಗಳಿಗೆ ಟಿಕೆಟ್ ನೀಡಿಲ್ಲ. ಅಲ್ಲಿಯು ಸರ್ಕಾರಗಳು ಬಂದಿವೆ.ಹಾಗಾಗಿ ದೆಹಲಿ ನಾಯಕರು ತಂತ್ರಗಾರಿಕೆ ಮಾಡಿದ ಮೇಲಷ್ಟೆ ಗೊತ್ತಾಗುತ್ತದೆ.

ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಬಗ್ಗೆ ಕೊನೆಯ ಅಭಿಪ್ರಾಯ ತಿಳಿಸಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ

ನನಗಿಂತ ಉತ್ತಮರು ಸಿಗಬಹುದು

ನನ್ನಕ್ಕಿಂತ ಹೆಚ್ಚು ಪ್ರಭಾವವಂತರು, ಬುದ್ದಿವಂತರು, ಕೆಲಸ ಮಾಡುವವರು ಇನ್ನೂ ಇರಬಹುದು. ಸರ್ವೆಯಲ್ಲಿ ಕೇಂದ್ರದ ನಾಯಕರು ತೆಗೆಯುತ್ತಾರೆ. ಈ 224 ಸೀಟಿಗೆ ಅಭ್ಯರ್ಥಿಗಳನ್ನು ಹಾಕುವಾಗ ಪಕ್ಷಕ್ಕೆ, ದೇಶಕ್ಕೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನಿಸಿ ಅಭ್ಯರ್ಥಿಗಳನ್ನು ಹಾಕುತ್ತಾರೆ. ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ. ಎಲ್ಲಾ ಚುನಾವಣೆಗಳು ಇದೇ ರೀತಿಯಲ್ಲಿ ನಡೆಯುತ್ತೇವೆ. ಚುನಾವಣೆ ಬಂದಾಗ ಚುನಾವಣೇಗೆ ತಯಾರಿ, ಉಳಿದಂತಹ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಸಮಾಜಸೇವೆಯನ್ನು ಸಹ ಮಾಡುತ್ತಿರುತ್ತೇವೆ ಎಂದು ತಿಳಿಸಿದರು. 

bhadravathi : ಭದ್ರಾವತಿ ಕ್ಷೇತ್ರ ಗೆಲ್ಲೋಕೆ ದೆಹಲಿ ಬಿಜೆಪಿ ಪ್ಲಾನ್​! ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್​ರವರಾ? ಟಿಕೆಟ್ ಕೇಳಲು ಬಂದವರಿಗೆ ಬಿಎಸ್​​ವೈ ಹೇಳಿದ್ದೇನು?

ಸಮಸ್ಯೆಯಾಗೋದಕ್ಕೆ ಇಷ್ಟ ಪಡುವುದಿಲ್ಲ

ಆಡಳಿತ ನಡೆಸುವ ವ್ಯವಸ್ಥೆ ಸುಲಭವಾಗಿ ನಡೆಯುವುದಿಲ್ಲ. ಅವರಿಗೆ ಏನೇನು ಪರಿಸ್ಥಿತಿಗಳಿವೆಯೋ ನನಗೆ ಗೊತ್ತಿಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಮಾಡಲು ನಾನು ಸಿದ್ಧನಿಲ್ಲ. ಸಚಿವನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ ಎಂದು ತಿಳಿಸಿದ್ಧಾರೆ. ನಾನೇ ಮಂತ್ರಿಯಾಗಬೇಕು ಎನ್ನುವ ಮೂಲಕ ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ನಾನು ಇಷ್ಟಪಡಲ್ಲ ಎಂದ ಈಶ್ವರಪ್ಪನವರು ಈ ನಿಟ್ಟಿನಲ್ಲಿ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ ಎಂದರು.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com