ಬೆಂಗಳೂರು : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ಚತುರ್ದಶಿ ತಿಥಿ ರಾತ್ರಿ 6.31 ರವರೆಗೆ ಇರಲಿದ್ದು, ನಂತರ ಪೌರ್ಣಮಿ ಆರಂಭವಾಗಲಿದೆ. ಮೃಗಶಿರ ನಕ್ಷತ್ರವು ರಾತ್ರಿ 8.17 ರವರೆಗೆ ಇರಲಿದ್ದು, ಬಳಿಕ ಆರಿದ್ರಾ ನಕ್ಷತ್ರವಿರುತ್ತದೆ. ಅಮೃತ ಘಳಿಗೆಯು ಮಧ್ಯಾಹ್ನ 12.04 ರಿಂದ 1.33 ರವರೆಗೆ ಇರಲಿದ್ದು, ರಾಹುಕಾಲವು ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದ್ದು, ಯಮಗಂಡ ಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಇವತ್ತಿನ ರಾಶಿಫಲ
ಮೇಷ : ಕೆಲಸ ಕಾರ್ಯಗಳಲ್ಲಿ ಅಲ್ಪ ಅಡೆತಡೆ ಎದುರಾಗಬಹುದು. ಅನಗತ್ಯ ವೆಚ್ಚ ಹೆಚ್ಚಾಗುವ ಸಾಧ್ಯತೆ, ಸ್ನೇಹಿತರೊಂದಿಗೆ ಮನಸ್ತಾಪ. ಅನಾರೋಗ್ಯ, ಉದ್ಯೋಗ ಮತ್ತು ವ್ಯವಹಾರದಲ್ಲಿಂದು ಹೆಚ್ಚಿನ ಪರಿಶ್ರಮ.
ವೃಷಭ : ಹೊಸ ಕೆಲಸಕ್ಕೆ ಚಾಲನೆ. ಸಕಾರಾತ್ಮಕ ಆಲೋಚನೆ ಯಶಸ್ಸು ತಂದುಕೊಡಲಿವೆ ಹಾಗೂ ಬಾಕಿ ಸಾಲ ಕೈ ಸೇರುವುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಉತ್ಸಾಹ
ಮಿಥುನ : ಇಂದಿನ ಪ್ರಯತ್ನ ಸ್ವಲ್ಪ ನಿಧಾನಗತಿಯಲ್ಲಿ ಸಾಗಲಿವೆ. ಅನಗತ್ಯ ಖರ್ಚು ಮತ್ತು ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ದೇವರದರ್ಶನದಿಂದ ಮನಸ್ಸಿಗೆ ನೆಮ್ಮದಿ, ಕೆಲಸದಲ್ಲಿ ಒತ್ತಡ, ವ್ಯವಹಾರದಲ್ಲಿ ಲಾಭ ಕಡಿಮೆ.

ಕರ್ಕಾಟಕ : ಕೈಗೆತ್ತಿಕೊಂಡ ಕಾರ್ಯಗಳಲ್ಲಿ ವಿಜಯ. ಬಂಧುಗಳಿಂದ ಮಹತ್ವದ ಮಾಹಿತಿ, ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಕಾಲ ಕಳೆಯುವಿರಿ. ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆಯಾಗಲಿದ್ದು, ಕಲಾವಿದರಿಗೆ ಹೊಸ ಅವಕಾಶ ಸಿಗಲಿದೆ. ವ್ಯವಹಾರದಲ್ಲಿ ಸಾಮಾನ್ಯ ದಿನ.
ಸಿಂಹ : ಉದ್ಯೋಗ ಪ್ರಯತ್ನಗಳಲ್ಲಿ ಯಶಸ್ಸು. ಆಕಸ್ಮಿಕವಾಗಿ ಬೆಲೆಬಾಳುವ ವಸ್ತು ಲಭ್ಯವಾಗಲಿದ್ದು, ಆಸ್ತಿ ಖರೀದಿ. ವೃತ್ತಿ ಜೀವನದಲ್ಲಿ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ದಿನ, ಉದ್ಯೋಗದಲ್ಲಿ ನಾಲ್ಕು ಜನರು ಮೆಚ್ಚಿಕೊಳ್ಳುವರು.
ಕನ್ಯಾ : ಧನಾಗಮನ ಕಷ್ಟ, ಹಣದ ಪೋಲಾಗದಂತೆ ಎಚ್ಚರಿಕೆ ವಹಿಸಿ , ಕುಟುಂಬದಲ್ಲಿ ವಾದ ವಿವಾದ. ದೈವಿಕ ಕಾರ್ಯಗಳಲ್ಲಿ ಆಸಕ್ತಿ, ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನಸರಳ
ತುಲಾ : ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ. ಸಂಬಂಧಿಕರೊಂದಿಗೆ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆ, ಶಾರೀರಿಕ ದಣಿವು. ಕೌಟುಂಬಿಕ ಸಮಸ್ಯೆ ,ಸಂಯಮದಿಂದ ವರ್ತಿಸಿ , ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಂದಗತಿಯಲ್ಲಿ ಸಾಗಲಿವೆ.
ಶಿವಮೊಗ್ಗ ಆಡಳಿತದಲ್ಲಿ ಮೇಜರ್ ಬದಲಾವಣೆ! ಜಿಲ್ಲೆಗೆ ಹೊಸ ಡಿಸಿ ಎಂಟ್ರಿ! ಗುರುದತ್ ಹೆಗೆಡೆ ವರ್ಗಾವಣೆ
ವೃಶ್ಚಿಕ : ಆರ್ಥಿಕ ಪರಿಸ್ಥಿತಿಯು ಇಂದು ಉತ್ತಮವಾಗಿರಲಿದೆ. ಹಳೆಯ ಸಾಲ ತೀರಿಸುವ ಮಾರ್ಗ ಕಂಡುಕೊಳ್ಳುವಿರಿ , ಗೌರವ ಪ್ರಾಪ್ತಿಯಾಗಲಿದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ವಾತಾವರಣವು ನಿಮಗೆ ಪೂರಕವಾಗಿರಲಿದೆ.
ಧನು : ಹೊಸ ವ್ಯಕ್ತಿಗಳ ಪರಿಚಯ. ಅನಿರೀಕ್ಷಿತವಾಗಿ ಹೆಚ್ಚಿನ ಆದಾಯ ಹರಿದುಬರಲಿದ್ದು, ಮನೆಯಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಧನಾಗಮನ

ಮಕರ : ಕುಟುಂಬದಲ್ಲಿ ಸಣ್ಣಪುಟ್ಟ ಕಿರಿಕಿರಿ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಸಂಬಂಧಿಕರೊಂದಿಗೆ ಅಸಮಾಧಾನ ಅನಗತ್ಯ ಖರ್ಚು, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ಕುಂಭ : ಆದಾಯದ ಕೊರತೆ ಮತ್ತು ವೆಚ್ಚದ ದಿನ. ಕುಟುಂಬದಲ್ಲಿ ಶಾಂತಿ ಹಾಗೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಿ ಬರಬಹುದು ಮತ್ತು ಕೆಲಸದಲ್ಲಿ ಗೊಂದಲವಿರಲಿದೆ.
ಸಾಲು ಸಾಲು ರಜೆಗೆ ಶಿವಮೊಗ್ಗ ಜಿಲ್ಲೆ ಹೌಸ್ಫುಲ್
ಮೀನ : ಉತ್ತಮ ಫಲಿತಾಂಶ ಸಿಗಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದ್ದು, ವೃತ್ತಿ ಜೀವನದಲ್ಲಿ ಪ್ರೋತ್ಸಾಹದಾಯಕ ಬೆಳವಣಿಗೆ ಕಂಡುಬರಲಿವೆ. ಹೊಸ ವಿಚಾರವೊಂದು ಗಮನಿಸುವಿರಿ, ದೂರ ಪ್ರಯಾಣ, ಉದ್ಯೊಗದಲ್ಲಿ ಈ ದಿನ ವಿಶೇಷ ಅನಿಸುವುದು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
