sn channabasappa : ಶಿವಮೊಗ್ಗದಲ್ಲಿ ಭಾರತ ಧ್ವಜ ಹಿಡಿದು ಸೀತಾರಾಮಾಂಜನೆಯ ಸ್ವಾಮಿಗೆ ಪೂಜೆ
sn channabasappa : ಭಯೋತ್ಪಾದಕರನ್ನು ಹೊಡೆದುರುಳಿಸಿ ಪಾಕಿಸ್ತಾನದ ನಿದ್ದೆಗೆಡಿಸುತ್ತಿರುವ ಭಾರತ ದೇಶದ ಸೈನಿಕರ ಸುರಕ್ಷತೆಗಾಗಿ ಶಾಸಕ ಎಸ್ ಎನ್ ಚೆನ್ನಬಸಪ್ಪ ನೇತೃತ್ವದಲ್ಲಿ ನಗರದ ಕೋಟೆ ರಸ್ತೆಯಲ್ಲಿರುವ ಸೀತಾರಾಮಾಂಜನೆಯ ದೇವಾಲಯ ಪೂಜೆಯನ್ನು ಸಲ್ಲಿಸಲಾಗಿದೆ.

ಮುಜರಾಯಿ ಇಲಾಖೆ ವತಿಯಿಂದ ಬಂದ ಆದೇಶದ ಹಿನ್ನೆಲೆ ದೇವಾಲಯದಲ್ಲಿ ಶಾಸಕರು ಇಂದು ತ್ರಿವರ್ಣ ಧ್ವಜ ಹಿಡಿದು ಸೀತಾರಾಮಾಂಜನೆಯ ಹಾಗೂ ದುರ್ಗಾ ದೇವಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಕಾರ್ಯಕರ್ತರು ಜೈ ಜೈ ಮಾತಾ ಭಾರತ್ ಮಾತಾ ಭಜರಂಗಿ, ಭಜರಂಗಿ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್ ಕೆ, ನಗರಾಧ್ಯಕ್ಷರಾದ, ಮೋಹನ್ ರೆಡ್ಡಿ, ಜಿಲ್ಲಾ ಹಾಗೂ ನಗರದ ಪ್ರಮುಖರು, ಮೋರ್ಚಾಗಳ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
