ಹಣಗೆರೆ ಕಟ್ಟೆ ದರ್ಗಾದ ಪ್ರಧಾನ ಅರ್ಚಕ ಸೈಯ್ಯದ್ ನೂರ್ ಸಾಹೇಬ್​ ಇನ್ನಿಲ್ಲ!

Sayyed Noor Saheb, the chief priest of Hangere Katte Dargah, is no more!ಹಣಗೆರೆ ಕಟ್ಟೆ ದರ್ಗಾದ ಪ್ರಧಾನ ಅರ್ಚಕ ಸೈಯ್ಯದ್ ನೂರ್ ಸಾಹೇಬ್​ ಇನ್ನಿಲ್ಲ!

ಹಣಗೆರೆ ಕಟ್ಟೆ ದರ್ಗಾದ ಪ್ರಧಾನ ಅರ್ಚಕ ಸೈಯ್ಯದ್ ನೂರ್ ಸಾಹೇಬ್​ ಇನ್ನಿಲ್ಲ!

KARNATAKA NEWS/ ONLINE / Malenadu today/ Sep 27, 2023 SHIVAMOGGA NEWS’ 

ಪ್ರಸಿದ್ದ ಹಣಗೆರೆಕಟ್ಟೆ  ಹಜರತ್ ಸೈಯದ್ ಸಾದತ್ ದರ್ಗಾದ ಪ್ರಧಾನ ಅರ್ಚಕರಾಗಿದ್ದ ಸೈಯ್ಯದ್ ನೂರ್ ಸಾಹೇಬ್​ರು ಹೃದಯಾಘಾತದಿಂದ ನಿಧನರಾಗಿದ್ದಾರೆ. 

ತಲೆಮಾರುಗಳಿಂದ ಹಣಗೆರೆ ಕಟ್ಟೆಯಲ್ಲಿ ದರ್ಗಾದಲ್ಲಿ ಭಕ್ತಿ ಭಾವದಿಂದ ಸೇವೆಮಾಡಿಕೊಂಡು ಬಂದ ಕುಟುಂಬ ಸೈಯ್ಯದ್ ನೂರ್ ಸಾಹೇಬ್​ರದ್ದಾಗಿತ್ತು.  ನೂರ್ ಸಾಹೇಬ್​ರ ಅಜ್ಜ , ಆನಂತರ ತಂದೆ , ನಂತರ ನೂರ್ ಸಾಹೇಬ್​ರವರು ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. 

ಸುಮಾರು 35 ವರ್ಷಗಳಿಂದಲೂ ದರ್ಗಾದಲ್ಲಿ ಸೇವೆ ಮಾಡಿಕೊಂಡು ಬಂದಿರುವ ಇವರ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. 

ಹಣಗೆರೆ ಕಟ್ಟೆಯು ಭಾವೈಕ್ಯತೆಯ ಕೇಂದ್ರವಾಗಿದ್ದು, ಇಲ್ಲಿ ಹಜರತ್ ಸೈಯದ್ ಸಾದತ್ ದರ್ಗಾವಿದ್ದರೇ, ಅಲ್ಲಿಯೇ ಭೂತರಾಯ ಚೌಡೇಶ್ವರಿ ದೇವಾಲಯವೂ ಇದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಭಕ್ತರು ಬಂದು ಹರಕೆ ಸಲ್ಲಿಸುತ್ತಾರೆ, ದರ್ಗಾ ಹಾಗೂ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸುತ್ತಾರೆ.  


ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?