ಬೈಕ್​ ಆಕ್ಸಿಡೆಂಟ್​ ನಲ್ಲಿ ಎನ್​ಎಸ್​ಜಿ ಕಮಾಂಡೋ ದುರಂತ ಅಂತ್ಯ! ಪತ್ನಿಯನ್ನು ನೋಡಲು ಹೋಗುತ್ತಿದ್ದ ವೇಳೆ ದುರ್ಘಟನೆ

NSG commando killed in bike accident The accident took place when he was on his way to see his wife.

ಬೈಕ್​ ಆಕ್ಸಿಡೆಂಟ್​ ನಲ್ಲಿ ಎನ್​ಎಸ್​ಜಿ ಕಮಾಂಡೋ ದುರಂತ ಅಂತ್ಯ!  ಪತ್ನಿಯನ್ನು ನೋಡಲು ಹೋಗುತ್ತಿದ್ದ ವೇಳೆ ದುರ್ಘಟನೆ

KARNATAKA NEWS/ ONLINE / Malenadu today/ May 25, 2023 SHIVAMOGGA NEWS

ಚಿಕ್ಕಮಗಳೂರು/ ಜಿಲ್ಲೆಯ ಎನ್​ಎಸ್​ಜಿ ಕಮಾಂಡೋ ಒಬ್ಬರು ಬೈಕ್​ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ್ಧಾರೆ. ನಿನ್ನೆ ಸಂಜೆ ಕುಣಿಗಲ್​ ತಾಲ್ಲೂಕಿನ ಎನ್​ಹೆಚ್​ ರಸ್ತೆಯಲ್ಲಿ  ಈ ಘಟನೆ ಸಂಭವಿಸಿದೆ.  

ನಡೆದಿದ್ದೇನು?

ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ದೀಪಕ್ (31) ಮೃತ  ಯೋಧ. ಇವರು ಮಹಾರಾಷ್ಟ್ರದ ಮುಂಬೈನಲ್ಲಿ ಐಟಿಬಿಪಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. 

ಇವರ ಸುಳಿವು ಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ!

ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದ ದೀಪಕ್​  ಬೆಂಗಳೂರಿನಲ್ಲಿ ಇರುವ ತನ್ನ ಪತ್ನಿಯನ್ನು ನೊಡಲೆಂದು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಕುಣಿಗಲ್ ಹೇಮಾವತಿ ಸರ್ಕಲ್​ ಬಳಿ ಆಕ್ಸಿಡೆಂಟ್ ಆಗಿದೆ.   

ತೀರ್ಥಹಳ್ಳಿಯಲ್ಲಿ ಭೀಕರ ದುರಂತ! ತುಂಗಾನದಿಯಲ್ಲಿ ಮುಳುಗಿದ ಬಾಲಕ! ಫೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ!

ತೀರ್ಥಹಳ್ಳಿ/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 16 ವರ್ಷದ ಅಶ್ವಥ್​  ಮೃತ ಬಾಲಕ

ನಡೆದ ಘಟನೆ

ತೀರ್ಥಹಳ್ಳಿಯ ಛತ್ರಕೇರಿಯ ಬಳಿ ಇರುವ ಜಯಲಕ್ಷ್ಮೀ ಸಾಮಿಲ್ ಬಳಿಯಲ್ಲಿ ಅಶ್ವಥ್​ ನಿನ್ನೆ ಸಂಜೆ ನೀರಿಗೆ ಇಳಿದಿದ್ದ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್​, ನಿಯಂತ್ರಿಸಲಾಗದೇ ನೀರಿನಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಳೀಯ ಈಜುಗಾರ ಪ್ರಮೋದ್​ ಪೂಜಾರಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಶ್ವಥ್​ನ ಮೃತದೇಹವನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ.