ತೀರ್ಥಹಳ್ಳಿಯಲ್ಲಿ ಭೀಕರ ದುರಂತ! ತುಂಗಾನದಿಯಲ್ಲಿ ಮುಳುಗಿದ ಬಾಲಕ! ಫೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ!

Tragedy in Thirthahalli! A boy drowned in the Tunga river!

ತೀರ್ಥಹಳ್ಳಿಯಲ್ಲಿ ಭೀಕರ ದುರಂತ!  ತುಂಗಾನದಿಯಲ್ಲಿ ಮುಳುಗಿದ  ಬಾಲಕ! ಫೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ!

KARNATAKA NEWS/ ONLINE / Malenadu today/ May 25, 2023 SHIVAMOGGA NEWS

ತೀರ್ಥಹಳ್ಳಿ/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 16 ವರ್ಷದ ಅಶ್ವಥ್​  ಮೃತ ಬಾಲಕ

ನಡೆದ ಘಟನೆ

ತೀರ್ಥಹಳ್ಳಿಯ ಛತ್ರಕೇರಿಯ ಬಳಿ ಇರುವ ಜಯಲಕ್ಷ್ಮೀ ಸಾಮಿಲ್ ಬಳಿಯಲ್ಲಿ ಅಶ್ವಥ್​ ನಿನ್ನೆ ಸಂಜೆ ನೀರಿಗೆ ಇಳಿದಿದ್ದ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್​, ನಿಯಂತ್ರಿಸಲಾಗದೇ ನೀರಿನಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಳೀಯ ಈಜುಗಾರ ಪ್ರಮೋದ್​ ಪೂಜಾರಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಶ್ವಥ್​ನ ಮೃತದೇಹವನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ.