ಕೆಇ ಕಾಂತೇಶ್​ಗೆ ಎಂಎಲ್​ಸಿ ಸ್ಥಾನ!? ಬಿಎಸ್​ ಯಡಿಯೂರಪ್ಪ ಹೇಳಿದ್ದೇನು? ಕೆಎಸ್​ ಈಶ್ವರಪ್ಪರವರು ನೀಡಿದ ಉತ್ತರವೇನು?

MLC seat for KE Kantesh!? What did BS Yediyurappa say? What is the answer given by KS Eshwarappa?

ಕೆಇ ಕಾಂತೇಶ್​ಗೆ ಎಂಎಲ್​ಸಿ ಸ್ಥಾನ!? ಬಿಎಸ್​ ಯಡಿಯೂರಪ್ಪ ಹೇಳಿದ್ದೇನು?  ಕೆಎಸ್​ ಈಶ್ವರಪ್ಪರವರು ನೀಡಿದ ಉತ್ತರವೇನು?
MLC seat for KE Kantesh

shivamogga Mar 15, 2024 :MLC seat for KE Kantesh  ಶಿವಮೊಗ್ಗ ಲೋಕಸಭಾ ಕ್ಷೇತ್ರ ಚುನಾವಣೆ  ಕದನ ಕುತೂಹಲ ಇನ್ನಷ್ಟು ಹೆಚ್ಚಾಗುತ್ತಿದೆ. ಒಂದು ಹಂತಕ್ಕೆ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರವಾಗಿ ಕಣಕ್ಕಿಳಿಯುವ ತೀರ್ಮಾನವಾಗಿ ಪರೋಕ್ಷವಾಗಿ ತಿಳಿಸಿದ್ದು, ಸಂಜೆ ಈ ಬಗ್ಗೆ ಅಂತಿಮವಾಗಲಿದೆ. 

ಇದರ ನಡುವೆ ಕೆ.ಎಸ್​.ಈಶ್ವರಪ್ಪನವರ ಪುತ್ರ ಕೆ.ಇ. ಕಾಂತೇಶ್​ರವರಿಗೆ ಎಂಎಲ್​ಸಿ ಮಾಡುವ ಆಫರ್ ನೀಡಲಾಗಿದೆ. ಈ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ಸದ್ಯ ಇದರ ಬಗ್ಗೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. 

ಬೆಂಗಳೂರಿನಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ವರದಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಈಶ್ವರಪ್ಪರವರ ಜತೆಗೆ ನಾನು ಮಾತನಾಡುತ್ತೇನೆ. ಅಲ್ಲದೆ, ಹೈಕಮಾಂಡ್ ನಾಯಕರು ಸಹ ಮಾತನಾಡಲಿದ್ದಾರೆ ಎಂದಿದ್ದಾರೆ. ಅಲ್ಲದೆ ಈಶ್ವರಪ್ಪನವರ ಮಗ ಕೆಇ ಕಾಂತೇಶ್​ರರವರನ್ನು ಎಂಎಲ್‌ಸಿ ಮಾಡಲಿದ್ದಾರೆ ಎಂದುತ ತಿಳಿಸಿದ್ದಾರೆ.

ಇನ್ನೂ ಇದೇ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಎಸ್​.ಈಶ್ವರಪ್ಪ ಈಗ ನಾನು ಯಾರ ಮಾತನ್ನು ಸಹ ನಂಬುವುದಿಲ್ಲ. ಎಂಎಲ್​ಎ ಮಾಡುತ್ತೇನೆ ಎಂದಿದ್ದರು, ಎಂಪಿ ಮಾಡುತ್ತೇನೆ ಎಂದಿದ್ದರು. ಯಡಿಯೂರಪ್ಪನವರು ಆಡಿದ ಮಾತಿನಂತೆ ನಡೆದುಕೊಂಡಿಲ್ಲ. ಅವರು ಮೋಸ ಮಾಡಿದ್ದಾರೆ. ಈಗ ಎಂಎಲ್​ಸಿ ಮಾಡುತ್ತೇನೆ ಎಂದಿದ್ದಾರೆ. ನಾನು ಈ ಮಾತನ್ನು ನಂಬುವುದಿಲ್ಲ ಎಂದಿದ್ದಾರೆ.