ತೀರ್ಥಹಳ್ಳಿ ರಸ್ತೆಯಲ್ಲಿ ಲಾರಿಗೆ ಮಂಗಳೂರು-ಚಳ್ಳಕೆರೆ ಬಸ್​ ಡಿಕ್ಕಿ! ಇಬ್ಬರ ಸಾವು! ಹಲವರಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
Mangaluru to Challakere bus
Mangaluru to Challakere bus

Mangaluru to Challakere bus incident Thirthahalli Road ಶಿವಮೊಗ್ಗ: ಗಾಜನೂರು ಅಗ್ರಹಾರ ಬಳಿ ಭೀಕರ ಅಪಘಾತ, ಇಬ್ಬರು ಸಾವು

ಇವತ್ತು ಬೆಳಗ್ಗೆ ಬೆಳಗ್ಗೆ ಅಪಘಾತ ಸಂಭವಿಸಿದೆ. ಬೆಳಗಿನ ಜಾವ ಶಿವಮೊಗ್ಗದ ಗಾಜನೂರು ಅಗ್ರಹಾರದ ಸಂಭವಿಸಿದ ಅಪಘಾತದಲ್ಲಿ  ಇಬ್ಬರು ಸಾವನ್ನಪ್ಪಿರುದ್ದಾರೆ ಎನ್ನಲಾಗಿದೆ. 

Mangaluru to Challakere bus incident Thirthahalli Road
Mangaluru to Challakere bus incident Thirthahalli Road
Mangaluru to Challakere bus incident Thirthahalli Road
Mangaluru to Challakere bus incident Thirthahalli Road

ಇಲ್ಲಿ ನಿಂತಿದ್ದ ಲಾರಿಗೆ ಖಾಸ್​ ಬಸ್ ಡಿಕ್ಕಿಯಾಗಿದೆ. ಪರಿಣಾಮ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ಇನ್ನಷ್ಟೆ ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀರ್ಥಹಳ್ಳಿ ರಸ್ತೆಯ ಗಾಜನೂರು ಅಗ್ರಹಾರದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ದುರ್ಗಾಂಬ ಬಸ್ ಡಿಕ್ಕಿ ಹೊಡೆದಿದೆ. ಮಂಗಳೂರಿನಿಂದ ಚಳ್ಳಕೆರೆಗೆ ಹೋಗುತ್ತಿದ್ದ  ಬಸ್ ಇದಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಮೃತಪಟ್ಟವರಲ್ಲಿ ಓರ್ವರನ್ನು ಅಣ್ಣಪ್ಪ (40) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ.

ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಮೇಶ್ (50) ,ಪ್ರಸಾದ್ (40) ವಿಷ್ಣು (21), ಮಂಜುನಾಥ್ (45)),ಸುಜಾತ (40)),ಆನಂದ್ ನಾಯ್ಕ್ (50)),ನೀಲಾಂಬಿಕಾ (45)),ಪ್ರಸಾದ್ (43)),ಬಿಂದು (20)),ಶಶಾಂಕ್ (20),ಲಕ್ಷ್ಮೀ (35), ಶ್ರೀರಾಮುಲು (42),ಕಾರ್ತಿಕ್ (32) 

Mangaluru to Challakere bus incident Thirthahalli Road

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor