ಬೆಂಗಳೂರಿಗೆ ಹೋಗಿ ಎನ್ಐಎ ವಿಚಾರಣೆ ಎದುರಿಸಿ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ಯುವಕ ನಾಪತ್ತೆ!?
Man who had gone to Bengaluru and returned to Shivamogga after facing NIA interrogation has gone missing.
KARNATAKA NEWS/ ONLINE / Malenadu today/ May 29, 2023 SHIVAMOGGA NEWS
ಶಿವಮೊಗ್ಗ/ ಎನ್ಐಎ ವಿಚಾರಣೆಗೆ ಹೋಗಿ ಬಂದಿದ್ದ ಯುವಕನೊಬ್ಬ ದಿಢೀರ್ ನಾಪತ್ತೆಯಾದ ಬಗ್ಗೆ ಶಿವಮೊಗ್ಗದ ಪೊಲೀಸ್ ಸ್ಟೇಷನ್ ಒಂದರಲ್ಲಿ ಕೇಸ್ ದಾಖಲಾಗಿದೆ. ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನನ್ವಯ ಕೇಸ್ ದಾಖಲಾಗಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೂ ಈ ಬಗ್ಗೆ ವಿಷಯ ತಿಳಿಸಲಾಗಿದೆ.
ನಡೆದಿದ್ದೇನು?
ಈ ಸಂಬಂಧ ನಾಪತ್ತೆ ಪ್ರಕರಣದ ಅಡಿಯಲ್ಲಿ ತಾಯಿಯೊಬ್ಬರು ದೂರು ಕೊಟ್ಟಿದ್ಧಾರೆ. ಅದರಂತೆ ದಾಖಲಾಗಿರುವ ಎಫ್ಐಆರ್ ಪ್ರಕಾರ, ದೂರುಕೊಟ್ಟ ತಾಯಿಯವರ ಮಗನಿಗೆ ಕೆಲದಿನಗಳ ಹಿಂದೆ ಎನ್ಐಎ(NIA) ನಿಂದ ಯಾವುದೋ ಕೇಸ್ ವಿಚಾರವಾಗಿ ವಿಚಾರಣೆಗೆ ಬರುವಂತೆ ಸೂಚನೆ ಬಂದಿತ್ತಂತೆ. ಅದರ ಅನ್ವಯ ಕಳೆದ 23 ನೇ ತಾರೀಖು, ಆತ ಬೆಂಗಳೂರಿನಲ್ಲಿರುವ ಎನ್ಐಎ ಕಚೇರಿಗೆ ಹೋಗಿ ವಿಚಾರಣೆ ಮುಗಿಸಿಕೊಂಡು ಶಿವಮೊಗ್ಗ ವಾಪಸ್ ಬಂದಿದ್ಧಾನೆ.
ಶಿವಮೊಗ್ಗದಲ್ಲಿ ತನ್ನ ಅಕ್ಕನ ಮನೆಗೆ ಬಂದಿದ್ದ ಯುವಕ ಬಳಿಕ ಬೈಕ್ ತೆಗೆದುಕೊಂಡು ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ಧಾನೆ. ಆದರೆ ಆತ ಮನೆಯಲ್ಲಿ ಕಂಡುಬಂದಿಲ್ಲ. ಬೈಕ್ ಹಾಗೂ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಯುವಕ ಕಾಣೆಯಾಗಿದ್ದ. ಈ ಬಗ್ಗೆ ಗಾಬರಿಗೊಂಡ ಕುಟುಂಬಸ್ಥರು, ಪೊಲೀಸರಿಗೆ ದೂರು ನೀಡಿದ್ಧಾರೆ. ಆತನನ್ನ ಹುಡುಕಿಕೊಡುವಂತೆ ತಿಳಿಸಿದ್ಧಾರೆ.
ಊಟಕ್ಕೆ ಅಂತಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗಿ ಬರುವಷ್ಟರಲ್ಲಿ , ಹೊರಗಡೆ ಕಾದಿತ್ತು ಶಾಕ್!
ಊಟಕ್ಕೆಂದು ಬಾರ್ & ಎಂಡ್ ರೆಸ್ಟೋರೆಂಟ್ ಎದುರು ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಘಟನೆಯೊಂದು ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್ನಲ್ಲಿ ನಡೆದಿದೆ. ‘
ಈ ಸಂಬಂಧ ದೂರು ದಾಖಲಾಗಿದ್ದು ಎಫ್ಐಆರ್ ಸಹ ದರ್ಜ್ ಆಗಿದೆ. ಅದರ ಪ್ರಕಾರ, ರವಿ ಎಂಬವರು , ಸಾಗರ ಮೇನ್ ರೋಡ್ ಗಾಡಿಕೊಪ್ಪದ ಬಳಿ ಇರುವ ಗಂದರ್ವ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಮಧ್ಯಾಹ್ನ, ಊಟಕ್ಕೆ ಎಂದು ತೆರಳಿದ್ದಾರೆ. ಈ ವೇಳೆ ಅವರ ಸ್ಪ್ಲೆಂಡರ್ ಬೈಕ್ನ್ನ ಅವರು ರೆಸ್ಟೋರೆಂಟ್ ಎದುರಿನ ಪಾರ್ಕಿಂಗ್ನಲ್ಲಿ ನಿಲ್ಲಿಸಿ ತೆರಳಿದ್ದಾರೆ. ಊಟ ಮುಗಿಸಿಕೊಂಡು ವಾಪಸ್ ಬಂದು ನೋಡಿದರೆ, ಬೈಕ್ ಕಾಣೆಯಾಗಿತ್ತು. ಅಲ್ಲಿದ್ದವರನ್ನ ವಿಚಾರಿಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ರವಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್ ಬಂಕ್ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!