ಬೆಂಗಳೂರಿಗೆ ಹೋಗಿ ಎನ್​ಐಎ ವಿಚಾರಣೆ ಎದುರಿಸಿ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ಯುವಕ ನಾಪತ್ತೆ!?

Man who had gone to Bengaluru and returned to Shivamogga after facing NIA interrogation has gone missing.

ಬೆಂಗಳೂರಿಗೆ ಹೋಗಿ ಎನ್​ಐಎ ವಿಚಾರಣೆ ಎದುರಿಸಿ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದ ಯುವಕ ನಾಪತ್ತೆ!?

KARNATAKA NEWS/ ONLINE / Malenadu today/ May 29, 2023 SHIVAMOGGA NEWS

ಶಿವಮೊಗ್ಗ/ ಎನ್​ಐಎ ವಿಚಾರಣೆಗೆ ಹೋಗಿ ಬಂದಿದ್ದ ಯುವಕನೊಬ್ಬ ದಿಢೀರ್​ ನಾಪತ್ತೆಯಾದ ಬಗ್ಗೆ ಶಿವಮೊಗ್ಗದ ಪೊಲೀಸ್ ಸ್ಟೇಷನ್​ ಒಂದರಲ್ಲಿ ಕೇಸ್ ದಾಖಲಾಗಿದೆ. ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನನ್ವಯ ಕೇಸ್ ದಾಖಲಾಗಿದ್ದು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೂ ಈ ಬಗ್ಗೆ ವಿಷಯ ತಿಳಿಸಲಾಗಿದೆ. 

ನಡೆದಿದ್ದೇನು?

ಈ ಸಂಬಂಧ ನಾಪತ್ತೆ ಪ್ರಕರಣದ ಅಡಿಯಲ್ಲಿ ತಾಯಿಯೊಬ್ಬರು ದೂರು ಕೊಟ್ಟಿದ್ಧಾರೆ. ಅದರಂತೆ ದಾಖಲಾಗಿರುವ ಎಫ್​ಐಆರ್ ಪ್ರಕಾರ,  ದೂರುಕೊಟ್ಟ ತಾಯಿಯವರ ಮಗನಿಗೆ ಕೆಲದಿನಗಳ ಹಿಂದೆ ಎನ್​ಐಎ(NIA) ನಿಂದ ಯಾವುದೋ ಕೇಸ್​ ವಿಚಾರವಾಗಿ ವಿಚಾರಣೆಗೆ ಬರುವಂತೆ ಸೂಚನೆ ಬಂದಿತ್ತಂತೆ. ಅದರ ಅನ್ವಯ ಕಳೆದ 23 ನೇ ತಾರೀಖು, ಆತ ಬೆಂಗಳೂರಿನಲ್ಲಿರುವ ಎನ್​ಐಎ ಕಚೇರಿಗೆ ಹೋಗಿ ವಿಚಾರಣೆ ಮುಗಿಸಿಕೊಂಡು ಶಿವಮೊಗ್ಗ ವಾಪಸ್ ಬಂದಿದ್ಧಾನೆ. 

ಶಿವಮೊಗ್ಗದಲ್ಲಿ ತನ್ನ ಅಕ್ಕನ ಮನೆಗೆ ಬಂದಿದ್ದ ಯುವಕ ಬಳಿಕ ಬೈಕ್​ ತೆಗೆದುಕೊಂಡು ಮನೆಗೆ ಹೋಗುವುದಾಗಿ ಹೇಳಿ ಹೋಗಿದ್ಧಾನೆ. ಆದರೆ ಆತ ಮನೆಯಲ್ಲಿ ಕಂಡುಬಂದಿಲ್ಲ. ಬೈಕ್ ಹಾಗೂ ಮೊಬೈಲ್​ ಮನೆಯಲ್ಲಿಯೇ  ಬಿಟ್ಟು ಯುವಕ ಕಾಣೆಯಾಗಿದ್ದ. ಈ ಬಗ್ಗೆ ಗಾಬರಿಗೊಂಡ ಕುಟುಂಬಸ್ಥರು, ಪೊಲೀಸರಿಗೆ ದೂರು ನೀಡಿದ್ಧಾರೆ. ಆತನನ್ನ ಹುಡುಕಿಕೊಡುವಂತೆ ತಿಳಿಸಿದ್ಧಾರೆ. 

ಊಟಕ್ಕೆ ಅಂತಾ ಬಾರ್​ ಆ್ಯಂಡ್ ರೆಸ್ಟೋರೆಂಟ್​ಗೆ ಹೋಗಿ ಬರುವಷ್ಟರಲ್ಲಿ , ಹೊರಗಡೆ ಕಾದಿತ್ತು ಶಾಕ್​!

ಊಟಕ್ಕೆಂದು ಬಾರ್​ & ಎಂಡ್ ರೆಸ್ಟೋರೆಂಟ್​ ಎದುರು ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಬೈಕ್​ ಕಳ್ಳತನವಾದ ಘಟನೆಯೊಂದು ವಿನೋಬನಗರ ಪೊಲೀಸ್ ಸ್ಟೇಷನ್​ ಲಿಮಿಟ್ನಲ್ಲಿ ನಡೆದಿದೆ. ‘

ಈ ಸಂಬಂಧ ದೂರು ದಾಖಲಾಗಿದ್ದು ಎಫ್ಐಆರ್ ಸಹ ದರ್ಜ್ ಆಗಿದೆ. ಅದರ ಪ್ರಕಾರ, ರವಿ ಎಂಬವರು , ಸಾಗರ ಮೇನ್​ ರೋಡ್ ಗಾಡಿಕೊಪ್ಪದ ಬಳಿ ಇರುವ ಗಂದರ್ವ ಬಾರ್ ಆ್ಯಂಡ್ ರೆಸ್ಟೋರೆಂಟ್​ಗೆ ಮಧ್ಯಾಹ್ನ,  ಊಟಕ್ಕೆ ಎಂದು ತೆರಳಿದ್ದಾರೆ. ಈ ವೇಳೆ ಅವರ ಸ್ಪ್ಲೆಂಡರ್ ಬೈಕ್​ನ್ನ ಅವರು ರೆಸ್ಟೋರೆಂಟ್ ಎದುರಿನ ಪಾರ್ಕಿಂಗ್​ನಲ್ಲಿ ನಿಲ್ಲಿಸಿ ತೆರಳಿದ್ದಾರೆ. ಊಟ ಮುಗಿಸಿಕೊಂಡು ವಾಪಸ್ ಬಂದು ನೋಡಿದರೆ, ಬೈಕ್ ಕಾಣೆಯಾಗಿತ್ತು. ಅಲ್ಲಿದ್ದವರನ್ನ ವಿಚಾರಿಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ರವಿ, ಪೊಲೀಸರಿಗೆ ದೂರು ನೀಡಿದ್ದಾರೆ. 

ಪೂರ್ತಿ ಸುದ್ದಿ: ಸುಡುತ್ತಿದೆ ಬೇಸಿಗೆ , ವಾಹನಗಳ ಬಗ್ಗೆ ಇರಲಿ ಎಚ್ಚರ! ಪೆಟ್ರೋಲ್​ ಬಂಕ್​ನಲ್ಲಿ ಕಾರಿನ ಬ್ಯಾಟರಿ ಸ್ಫೋಟ! ಸ್ವಲ್ಪದರಲ್ಲಿ ತಪ್ಪಿತು ಬೆಂಕಿ ಅನಾಹುತ!