ಶಿವಮೊಗ್ಗ: ಬೈಕ್ ನೀಡಲು ನಿರಾಕರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಅಪರಿಚಿತ ಯುವಕರು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗದ ಕಾಶಿಪುರದಲ್ಲಿ ನಡೆದಿದೆ.
Man Assaulted ಘಟನೆಯ ವಿವರ
ಶಿವಮೊಗ್ಗದ ಕಾಶಿಪುರದ ನಿವಾಸಿ ಬೈಕ್ನಲ್ಲಿ ಹೋಗುತ್ತಿದ್ದಾಗ ಇಬ್ಬರು ಅಪರಿಚಿತ ಯುವಕರು ಅವರನ್ನು ಅಡ್ಡಗಟ್ಟಿದ್ದಾರೆ. ನಮಗೆ ನಿನ್ನ ಬೈಕ್ ಬೇಕು, ತಕ್ಷಣ ಕೊಡು ಎಂದು ದಬಾಯಿಸಿದ್ದಾರೆ. ನೀವು ಯಾರೆಂದೇ ತಿಳಿಯದಿದ್ದರೂ ನಿಮಗೆ ಬೈಕ್ ಏಕೆ ನೀಡಬೇಕು ಎಂದು ದೂರುದಾರರು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ವ್ಯಕ್ತಿಯ ಮೇಲೆ ಏಕಾಏಕಿ ಎರಗಿದ್ದಾರೆ.
ಆರೋಪಿಗಳು ದೂರುದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಸ್ಥಳದಲ್ಲೇ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದದು ಆರೋಪಿಸಲಾಗಿದೆ.
ಸದ್ಯ ಹಲ್ಲೆಗೊಳಗಾದ ವ್ಯಕ್ತಿ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Man Assaulted in Marnamibail Over Bike Dispute


