ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

Listen, lovers, there can be a tragedy in love and romance! JP writes the real story of Sanju and Geeta who lost their lives to a mobile deformity

ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ  ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು  ಗೀತಾಳ  ರಿಯಲ್ ಕಥೆ  JP  ಬರೆಯುತ್ತಾರೆ ಓದಿ
ಕೇಳಿ ಪ್ರೇಮಿಗಳೇ, ಪ್ರೀತಿ ಪ್ರೇಮ ಪ್ರಣಯದಲ್ಲಿ ಮೈಮೆರತರೇ ದುರಂತವೇ ನಡೆಯಬಹುದು! ಮೊಬೈಲ್ ವಿಕೃತಿಗೆ ಜೀವ ಕಳೆದುಕೊಂಡ ಸಂಜು ಮತ್ತು ಗೀತಾಳ ರಿಯಲ್ ಕಥೆ JP ಬರೆಯುತ್ತಾರೆ ಓದಿ

ಅವರಿಬ್ಬರು ಪ್ರೀತಿಸಿ ಮದುವೆಯಾಗಬೇಕೆಂದಿದ್ದ ಪ್ರೇಮಿಗಳು. ಖಾಸಗಿಯಾಗಿ ಹರಟೆ ಹೊಡೆಯಲು ಬಂದಿದ್ದ ಪ್ರೇಮಿಗಳ ಬದುಕಿಗೆ ಬೆಂಕಿ ಇಟ್ಟರು ದುರುಳರು. ಏಕಾಂತದಲ್ಲಿದ್ದ ಪ್ರೇಮಿಗಳಿಬ್ಬರ ವೀಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿದ್ರು ಕಿರಾತಕರು..ಮನನೊಂದ ಪ್ರೇಮಿಗಳು ವಿಷ ಸೇವಿಸಿ ಆಸ್ಪತ್ರೆಯಲ್ಲಿ ಪ್ರಾಣಬಿಟ್ಟರು..

ಸಾಯುವ ಮುನ್ನ ಪ್ರೇಯಸಿ ನೀಡಿದ ಹೇಳಿಕೆ...ಪ್ರೇಮಿಯನ್ನೇ ವಿಲನ್ ಮಾಡಿತ್ತು..ಪ್ರೇಮಿಯ ತಾಯಿ ನೀಡಿದ ಹೇಳಿಕೆ ಸಾವಿನ ಸತ್ಯಾಸತ್ಯತೆಯನ್ನು ಬಯಲು ಮಾಡಿತ್ತು..ನಿಜಕ್ಕೂ ಪ್ರೇಮಿಗಳ ಪಾಲಿಗೆ ವಿಲನ್ ಗಳಾದವರು ಯಾರು...ಲವ್ ಸ್ಟೋರಿಯಲ್ಲೇ ತುಂಬಾ ಡಿಫರೆಂಟಾಗಿರೋ ಈ ಸ್ಟೋರಿಯನ್ನು ಓದಲೇ ಬೇಕು...ಇವು ದುರಂತ ಕಥೆಗಳು ಆದ್ರೆ ಪ್ರೇಮಿಗಳು  ಕಲಿಗಾಲದ ಪ್ರೇಮಲೋಕದಲ್ಲಿ ಕಲಿತುಕೊಳ್ಳಲೇಬೇಕಾದ ಪಾಠಗಳು ಈ ಸ್ಟೋರಿಗಳಲ್ಲಿದೆ... 

EWS ಕೊಟ್ಟಿರುವುದು ತಪ್ಪು ,ಸುಪ್ರೀಂಕೋರ್ಟ್​ನ ಜಡ್ಜ್​ಮೆಂಟ್​ನನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ- ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ

ಏಕಾಂತದಲ್ಲಿದ್ದ ಪ್ರೇಮಿಗಳ ವಿಡಿಯೋ ಮಾಡಿ ಬ್ಲಾಕ್ ಮಾಡುತ್ತಿದ್ದ ದುರುಳರು (22-11-2018ರಲ್ಲಿ ನಡೆದ ಸತ್ಯಕಥೆ) 

ಪ್ರಿಯ ಓದುಗರೇ ..ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ಸೃಷ್ಟಿಸಿದ ತಲ್ಲಣಕ್ಕೆ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಇದು. ಆ ಸ್ಟೋರಿಯ ದುರಂತ ನಾಯಕ ನಾಯಕಿ ಸಂಜು ಮತ್ತು ಗೀತಾ.. (ಹೆಸರನ್ನ ಬದಲಾಯಿಸಲಾಗಿದೆ)

ಜಗತ್ತು ಸಣ್ಣದಾಗಬೇಕು..ಜಗತ್ತಿನ ಮಾಹಿತಿಗಳೆಲ್ಲಾ ಅಂಗೈ ಬೆರಳಿನಲ್ಲಿ ಸಿಗಬೇಕು ಎಂಬ ತಂತ್ರಜ್ಞಾನದಲ್ಲಿ ಹೊರಬಿದ್ದ ಮೊಬೈಲ್​, ಈಗ ಪರಪಂಚದ ಎಲ್ಲಾ ಮೂಲೆಯನ್ನು ತಲುಪುತ್ತಿದೆ. ಹಳ್ಳಿಯೊಂದರ ಸುಂದರ ಪರಿಸರದಲ್ಲಿ ಅರಳಿದ್ದ ಪ್ರೀತಿಯನ್ನು ಕಮರಿಸಿದ್ದು ಮೊಬೈಲ್ ಎಂಬ  ಬ್ಲ್ಯಾಕ್​ಮೇಲ್ ಅಸ್ತ್ರ.  ಈ ಕಾಲದಲ್ಲಿ  ಹಳ್ಳಿ ಮನೆಗಳಲ್ಲಿ ಹೆಂಗಸರಿಂದ ಹಿಡಿದು..ಕಾಲೇಜಿಗೆ ಹೋಗುವ ಯುವತಿಯರು ಹೆದರುವುದೇ ಮೊಬೈಲ್​ಗೆ ಎಂಬಂತಾಗಿದೆ. ಇದಕ್ಕೆ ಕಾರಣ ವಿಕೃತರು. ಬಹಿರ್ದೆಸೆಗೆ ಅಂತಾ ಹೋಗುತ್ತಿದ್ದವರ ವಿಡಿಯೋ ಮಾಡಿ ಅಂತಹ ಹೆಣ್ಣುಮಕ್ಕಳನ್ನ ಬ್ಲ್ಯಾಕ್ ಮೇಲ್​ ಮಾಡಿದ್ದ ಉದಾಹರಣೆಗಳು ಪೊಲೀಸ್ ಫೈಲ್​ಗಳಲ್ಲಿವೆ. ಈಗಂತೂ, ದಾರಿಯಲ್ಲಿ ಹೋಗುವವರೇ ವಿಡಿಯೋವನ್ನು ಅವರುಗಳ ಅನುಮತಿಯೇ ಇಲ್ಲದೆ ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡು, ಅದನ್ನು ವಿಕೃತವಾಗಿ ಬಳಸಿಕೊಳ್ಳುವ ಕಾಮುಕ ಪುಂಡರ ಸಂಖ್ಯೆ ಹಳ್ಳಿ ಪರಿಸರದಲ್ಲಿ ಹೆಚ್ಚುತ್ತಿದೆ.  ಅಂತಹ ವಿಕೃತರ,  ಪೊಲೀಸ್ ಬೀಟ್​ ವ್ಯವಸ್ಥೆಗಳೇ ಕಂಟ್ರೋಲ್​ ಮಾಡಬೇಕಿದೆ. 

ವಿಡಿಯೋ ಕ್ರಿಮಿಗಳಿಂದಾಗಿ ಮೊಬೈಲ್ ತಲ್ಲಣ

ಇನ್ನು ಹದಿಹರೆಯದ ಪ್ರೇಮಿಗಳು..ಕಾಡಿನ ಪರಿಸರದಲ್ಲಿ ಏಕಾಂಗಿಯಾಗಿ ಸಿಕ್ಕಿಬಿಟ್ಟರೇ, ಅಲ್ಲೊಂದು ವಿಕೃತರ ಕುಕೃತ್ಯದ ನೀಚತನದ ಲೋಕ ಅನಾವರಣಗೊಳ್ಳುತ್ತಿದೆ..ಮೊಬೈಲ್ ಕಣ್ಣಿಂದ ಸುಂದರ ಲೋಕ ನೋಡಬಹುದಾದ ಅವಕಾಶ ಇರುವ ಸಂದರ್ಭದಲ್ಲಿ ನಮ್ಮ ಯುವಜನಾಂಗ ಅದರ ಒಳಗಣ್ಣಿನಿಂದ ಬೇರೆಯದ್ದನ್ನೇ ನೋಡಲು ಬಯಸುತ್ತಿರೋದು ನಿಜಕ್ಕೂ ಆತಂಕಕಾರಿ ಘಟನೆಯಾಗಿದೆ. ಮೊಬೈಲ್ ಸೃಷ್ಟಿಸುತ್ತಿರುವ ತಲ್ಲಣದಿಂದಾಗಿ ಕ್ರೈಂ ಲೋಕದಲ್ಲಿ ದಿನಕ್ಕೊಂದು ಡಿಫರೆಂಟ್ ಸ್ಟೋರಿಗಳು ಕ್ರೈಂಫೈಲ್​ ಸೇರ್ತಾನೆ ಇದೆ. ಅದೇ ರೀತಿಯಲ್ಲಿ ಅಂದು  ಮಲೆನಾಡಿನ ಆ ಕುಗ್ರಾಮದಲ್ಲಿ ನಡೆದ ಲವ್ ಸೂಸೈಡ್ ಕೂಡ ಕ್ರೈಂ ಫೈಲ್ ಸೇರಿದೆ.

ಶಿವಮೊಗ್ಗ ತಾಲೂಕಿನ ಒಂದು  ಗ್ರಾಮದ ವಾಸಿ ಸಂಜಯ್ (ಹೆಸರು ಬದಲಾಯಿಸಲಾಗಿದೆ). ವಯಸ್ಸು 21..ನೋಡಲು ಚೆನ್ನಾಗಿರೋ ಹುಡುಗ. ಅಪ್ಪ ಇಲ್ಲ..ಕುಟುಂಬದ ಜವಾಬ್ದಾರಿಯ ಹೊಣೆಯನ್ನು ಸಂಜಯ್ ನಿರ್ವಹಿಸುತ್ತಿದ್ದ.ಸ್ಥಳೀಯ ರೈಸ್ ಮಿಲ್ ನಲ್ಲಿ ಕೂಲಿ ಕೆಲಸ ಮಾಡ್ಕೊಂಡು ಜೀವನ ನಿರ್ವಹಣೆ ಮಾಡ್ತಿದ್ದ ಆತನ ಹೃದಯ ಕದ್ದವಳು ಗೀತಾ(ಹೆಸರು ಬದಲಿಸಿದೆ).

ಇದು ರಿಯಲ್​ ಸಂಜು ಮತ್ತು ಗೀತಾ ಸ್ಟೋರಿ

ಆತನೂರಿಗೆ ಹತ್ತಿರದಲ್ಲಿಯೇ ಇದ್ದ ಊರಿನ ವಾಸಿ ಗೀತಾ. ಗೀತಾ ಅಣ್ಣ ಮತ್ತು ಸಂಜಯ್ ಸ್ನೇಹಿತರು, ಈ ಗೆಳತನದಲ್ಲಿ ಗೀತಾಳ ಮನೆಗೆ ಬರುತ್ತಿದ್ದ ಸಂಜಯ್​, ಸ್ನೇಹಿತನ ತಂಗಿಯ ಜೊತೆ ಪ್ರೇಮದಲ್ಲಿ ಬಿದ್ದಿದ್ದ. ಎರಡು ವರ್ಷ ಇಬ್ಬರು ಪ್ರೀತಿಸಿದ್ದರು. ಆದರೆ ಊರಿನವರಿಗೂ, ಮನೆಯವರಿಗೂ ವಿಷಯಗೊತ್ತಿರಲಿಲ್ಲ. ಅಷ್ಟು ಗುಟ್ಟಾಗಿ ಪ್ರೀತಿಸುತ್ತಿದ್ದ ಜೋಡಿಹಕ್ಕಿಗಳು ಬೇಟಿಯಾಗುತ್ತಿದ್ದ ಸ್ಥಳವೇ ನಿರ್ಜನ ಪ್ರದೇಶವಾಗಿತ್ತು. ಸಂಜಯ್ ತನ್ನ ಬೈಕ್ ನಲ್ಲಿಯೇ ಹೊರಗಡೆ ಗೀತಾಳನ್ನು ಸುತ್ತಾಡಿಸ್ತಿದ್ದ. ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಜೋಡಿಗಳು ಭೇಟಿಯಾಗಿ ಗಂಟೆಗಟ್ಟಲೇ ಮಾತಾಡಿ..ತಮ್ಮ ಮನೆಗೆ ವಾಪಸ್ಸಾಗ್ತಿತ್ತು. ಆದ್ರೆ ಇಂತಹ ಜೋಡಿಗೆ ಮುಳುವಾಗಿದ್ದು ಕೂಡ ಜಾತಿ.  ಹೌದು ಸಂಜಯ್ ಲಿಂಗಾಯಿತ ಸಮುದಾಯಕ್ಕೆ ಸೇರಿದವನಾದ್ರೆ, ಗೀತಾ ಮಡಿವಾಳ ಸಮುದಾಯಕ್ಕೆ ಸೇರಿದವಳು. ಇವರಿಬ್ಬರ ಪ್ರೀತಿಗೆ ಜಾತಿಯೇ ಮುಳುವಾಗಿತ್ತು. ಎರಡು ಕುಟುಂಬಗಳು ಆರ್ಥಿಕವಾಗಿ ಸದೃಢರಲ್ಲದಿದ್ದರೂ, ನೇಮನಿಷ್ಠಾವಂತರಾಗಿದ್ರು..ಇವರಿಬ್ಬರ ಪ್ರೀತಿಯ ವಿಚಾರ ಎರಡು ಕುಟುಂಬಗಳಿಗೆ ಗೊತ್ತಾಗಿದ್ರೂ. ಮದುವೆ ಎಂಬುದು ಕನಸಿನ ಮಾತೇ ಎಂದು ಸಂಜು​ ಮತ್ತು ಗೀತಾ ಭಾವಿಸಿದ್ರು .ಹೀಗಾಗಿ ಚೆನ್ನಾಗಿ ಓದ್ತಿದ್ದ ಗೀತಾ ಪ್ರೀತಿಯ ಸೆಲೆಯಲ್ಲಿ ಸಿಕ್ಕಿ,,,ಎಸ್.ಎಸ್.ಎಲ್.ಸಿಯಲ್ಲಿ ಫೇಲ್​ ಕೂಡ ಆಗಿದ್ಲು.. 

ಮೀನು ಹಿಡಿಯಲು ಬಂದವರ ಮೇಲೆ ಜೇನುನೊಣಗಳ ದಾಳಿ! 6 ಜನರಿಗೆ ಗಂಭೀರ ಪೆಟ್ಟು!

ನೀಲಿಗಿರಿ ತೋಪಿನಲ್ಲಿ

ಇದೆಲ್ಲದರ ನಡುವೆಯು ಇವರು ಕದ್ದುಮುಚ್ಚಿ ಗ್ರಾಮದ ಹೊರಗಡೆ ಯಾರು ಇಲ್ಲದ ಸ್ಥಳಗಳಿಗೆ ಹೋಗಿ ಭೇಟಿ ಆಗ್ತಿದ್ರು. ತಮ್ಮ ಪ್ರೀತಿಗೆ ಯಾರು ಅಡ್ಡಿ ಬರಬಾರದೆಂದು ನಿರ್ಜನ ಹಸಿರು ಪ್ರದೇಶದಲ್ಲಿ ವಿಹರಿಸುತ್ತಿದ್ದ ಪ್ರೇಮಿಗಳಿಗೆ ಅದೇ ಏಕಾಂತತೆ ಮುಂದೆ ದೊಡ್ಡ ದುರಂತಕ್ಕೆ ತಳ್ಳುತ್ತೆ ಅನ್ನೋದು ಅವರಿಗೆ ಗೊತ್ತಾಗಲಿಲ್ಲ.  ಯಾವ ಏಕಾಂತವನ್ನು ಬಯಸಿ ಗುಟ್ಟಾಗಿ ಭೇಟಿಯಾಗ್ತಿದ್ರೋ...ಅದೇ ಏಕಾಂತ ಸಂಜು ಮತ್ತು ಗೀತಾಳ ಬದುಕನ್ನೇ ಕಿತ್ತುಕೊಂಡು ಬಿಡ್ತು...ಯಾರ ಕಣ್ಣಿಗೆ ಕಾಣಬಾರದು ಅಂತಾ ಹೋದ ನಿರ್ಜನ ಪ್ರದೇಶದಲ್ಲಿ ಅವರಿಗೆ ಗೊತ್ತಿಲ್ಲದಂತೆ ನೆರಳೊಂದು ಪಾಲೋ ಮಾಡ್ತಾ ಇತ್ತು.ಅಂದು ಆ ನಿರ್ಜನ ಪ್ರದೇಶದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಯ್ತು.

ಅದೊಂದು ದಿನ ಸಂಜು ಎಂದಿನಂತೆ ಗೀತಾಳನ್ನು ಪಿಕ್ ಅಪ್ ಮಾಡಿಕೊಂಡು ಬೈಕ್ ನಲ್ಲಿ ,ಸೀದಾ ನೀಲಗಿರಿ ಪ್ಲಾಂಟೇಷನ್ ಗೆ ಬಂದುಬಿಡ್ತಾನೆ.ಅಲ್ಲಿ ಗಂಟೆಗಟ್ಟಲೆ ಮೌನದಲ್ಲೇ ಮಾತಾಡ್ತಿದ್ದ ಸಂಜುಗೀತಾಗೆ ನಮ್ಮನ್ನು ಪಾಲೋ ಮಾಡ್ತಿರೋ...ಶತ್ರುವಿನ ಬಗ್ಗೆ ಗೊತ್ತಾಗೋದೇ ಇಲ್ಲ. ಸಂಜು ತೊಡೆಯ ಮೇಲೆ ಗೀತಾ ಕತ್ತು ಹಾಕಿ ಮಲ್ಕೊಂಡು ಪರಸ್ಪರ ಮಾತಾಡ್ತಿದ ಸರಸ ಸಲ್ಲಾಪಗೆ ತಿರುಗಿದ್ದಾರೆ..ಅಷ್ಟೆ...ಆಗ ಮೂವರು ಯುವಕರು ದಿಡೀರ್ ಸ್ಥಳಕ್ಕೆ ಎಂಟ್ರಿಕೊಟ್ಟು ಬಿಡ್ತಾರೆ.

ಅವರಲ್ಲಿ ಪ್ರಮುಖ ಸೂತ್ರದಾರನೇ ಚಿಕನ್ ಅಂಗಡಿ ನಡೆಸ್ತಿದ್ದ ರಫಿ(ಹೆಸರು ಬದಲಿಸಿದೆ)  ಈತ ಸಂಜು ಮತ್ತು ಗೀತಾ ಬೈಕ್ ನಲ್ಲಿ ಪದೇ ಪದೇ ಮಂಡಘಟ್ಟದ ಆ ನೀಲಗಿರಿ ತೋಪಿನ ಬಳಿ ಬಂದು ಹೋಗೋದನ್ನು ನೋಡಿದ್ದ. ಇವರಿಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬೇಕು ಅಂತಾ..ತನ್ನ ಸ್ನೇಹಿತರ ತಂಡವನ್ನು ರೆಡಿ ಮಾಡಿದ್ದ. ಅಂದು ಸಂಜು ಮತ್ತು ಗೀತಾ ನೀಲಗಿರಿ ತೋಪಿನಲ್ಲಿ ನಡೆಸಿದ್ದ ಶೃಂಗಾರವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ ರಫಿ ತಂಡ ಇವರಿಬ್ಬರನ್ನು ಮುಕ್ಕಿತಿನ್ನೋದೊಂದೇ ಬಾಕಿ ಇತ್ತು ಆದ್ರೆ..ಸಂಜು ಪರಿಪರಿಯಾಗಿ ಕಾಲಿಗೆ ಬಿದ್ದು ಕೇಳ್ಕೊಂಡಿದ್ರಿಂದ ಇವರಿಬ್ಬರನ್ನು ಆ ಖದೀಮ ಗ್ಯಾಂಗ್ ಅಂದು ಬಿಟ್ಟು ಕಳುಹಿಸಿತ್ತು.

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ಹಣಕ್ಕೆ ಬೇಡಿಕೆ ಇಟ್ರು..ಪದೇ ಪದೇ ಹಣ ಕಿತ್ರೂ.

ಸಂಜು ಮತ್ತು ಗೀತಾಳ ವಿಡಿಯೋ ಚಿತ್ರೀಕರಣ ಮೋಡೋ,,ರಫಿ  ಅವರಿಗೆ ಬುದ್ದಿಹೇಳಿ ಕಳಿಸಿರ್ತಾನೆ.ಆದರೆ ಇವನ ಸಹಚರರು ಮಾತ್ರ ಕ್ರಿಮಿನಲ್ ಬ್ರೈನ್ ಯೂಸ್ ಮಾಡ್ತಾರೆ .ಹೇಗಿದ್ರೂ,,,ವಿಡಿಯೋ ಇದೆ..ಯಾಕೆ ಹಣ ಕೀಳ್ ಬಾರ್ದು ಅಂತಾ..ನೇರವಾಗಿ ಸಂಜಯ್ ಗೆ ಪೋನ್ ಮಾಡಿ ನೀವಿಬ್ರು ಪ್ರೀತಿ ಮಾಡ್ತಿರೋ ವಿಡಿಯೋ ನಮ್ ಬಳಿ ಇದೆ..ನೀನ್ನು ನಾಲ್ಕೈದು ಹಡುಗೀರಯರನ್ನ ಮೆಂಟೇನ್ ಮಾಡ್ತಿದಿಯಂತೆ..ಈ ಹುಡ್ಗಿಗೂ ಕೈಕೊಡೋ ಚಾನ್ಸ್ ಇದೆ..ಇಬ್ರರನ್ನ ಸೇರಿಸಿ ಮದುವೆ ಮಾಡಿಸ್ತೀವಿ ಅಂತಾ ಪೋನ್ ನಲ್ಲಿ ಹೇಳ್ತಾನೆ..ಮೊದಲೇ ಅಂತರ್ ಜಾತಿ,ಮನೆಯಲ್ಲಿ ಯಾರಿಗೂ ವಿಷಯ ಗೊತ್ತಿಲ್ಲದ್ದರಿಂದ ಇದು ರಂಪ ಆಗೋದು ಬೇಡ ಅಂತಾ ಸಂಜು,,ರಫಿಗೆ, ಹಾಗೆಲ್ಲಾ ವಿಡಿಯೋ ಹರಿಬಿಟ್ಟು..ಮಾನ ಹರಾಜು ಹಾಕಬೇಡ..ನಿನಗೇನು ಆಗಬೇಕು ಹೇಳು ಅಂತಾ ವಿನಯದಿಂದ್ಲೇ ಕೇಳಿಕೊಳ್ತಾನೆ...ಆಗ ಹಣಕ್ಕೆ  ಸೆಟಲ್ ಮಾಡ್ಕೋತೀಯ ಅಂತಾ ರಫಿ ಹೇಳ್ತಾನೆ.. ಸಂಜು ಹತ್ರ  ರಫಿ ಸ್ನೇಹಿತರ ಐದು ಸಾವಿರ ರೂಪಾಯಿ ಕೊಡು ಸಾಕು ಅಂತಾ ಮೊದಲು ಡಿಮ್ಯಾಂಡ್ ಇಡ್ತಾರೆ..ಅಲ್ಲಿಗೆ ಅಂದುಕೊಂಡಂತೆ ರಫಿ  ಗ್ಯಾಂಗ್ ಗೆ ಸಂಜು ಐದು ಸಾವಿರ ರೂಪಾಯಿ ತಲುಪಿಸ್ತಾನೆ. ಇಷ್ಟಕ್ಕೆ ತೃಪ್ತರಾಗದ ರಫಿ ಗ್ಯಾಂಗ್  ಪದೇ ಪದೇ ಹಣಕ್ಕೆ ಪೀಡಿಸುತ್ತೆ..ಆಗ ಸಂಜು ತಾನು ಪ್ರತಿದಿನ ದುಡಿದ ಹಣವನ್ನೆಲ್ಲಾ ರಫಿ  ಗ್ಯಾಂಗ್ ಗೆ ಕೊಡ್ತಾ ಬರ್ತಾನೆ, ಕೊನೆಗೆ ತನ್ನ ಕೈಲಿದ್ದ ಬಂಗಾರದ ಚೈನು,ಬೈಕ್ ನ್ನು ಸಹ ಅಡ ಇಟ್ಟು ಹಣ ಹೊಂದಿಸಿ ಕೊಡ್ತಾನೆ.ಆ ಆತಂಕದ ದಿನಗಳಲ್ಲಿ  ಸಂಜು ಮನೆಯಲ್ಲಿ ಸರಿಯಾಗಿ ಊಟ ಮಾಡ್ತಿರಲಿಲ್ಲ.ದುಡಿದ ಹಣದಲ್ಲಿ ಒಂದು ಬಿಡಿಗಾಸನ್ನು ಕೂಡ ತಾಯಿಗೆ ಕೊಡ್ತಿರಲಿಲ್ಲ.ತಾಯಿ ಯಾವಾಗ ಹಣ ಕೇಳಿದ್ರೂ...ತೊಂದರೆಯಲ್ಲಿದ್ದೀನಿ..ಸಾಲ ಕೊಡಬೇಕು...ಅವರಿವರಿಗೆ ದುಡ್ಡುಕೊಡಬೇಕು ಅಂತಾ ಹೇಳ್ತಿದ್ದ.

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

ಮಗನ ಸ್ಥಿತಿ ನೋಡಲಾಗದೇ ತಾಯಿಯೇ ಕೇಳಿದಳು

ಮಗನ ವರ್ತನೆ ದಿನದಿನಕ್ಕೂ ಬದಲಾಗುತ್ತಾ ಹೋದಂತೆ, ತಾಯಿಗೆ  ಅನುಮಾನ ಶುರುವಾಗುತ್ತೆ.ಆಗ ಮಗನಿಗೆ ..,ಏನಾಗಿದೆಯೋ ನಿನಗೆ..ಯಾಕೆ ಹಿಂಗೆಲ್ಲಾ ನನ್ ಹೊಟ್ಟೆ ಉರುಸ್ತಿಯಾ..ನಿನಗೇನಾಗಿದೆ.., ನನಗೇಳೋ..,  ಅಂತಾ ಕೇಳಿದ್ದಾರೆ.ಆಗ ಸಂಜು..ನನಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡ್ತಿದರಮ್ಮ..ನಾನು ಹಣ,ಒಡವೆ ಬೈಕ್ ಎಲ್ಲವನ್ನು ಅವರಿಗೆ ಕೊಟ್ಟು ಬರಿಗೈ ಆಗಿದ್ದೇನೆ..ಇನ್ನೇನು ಕೊಡೋದಕ್ಕೆ ಸಾದ್ಯ..ತುಂಬಾ ಟೆನ್ಷನ್ ನಲ್ಲಿದ್ದೇನೆ ಅಂತಾ ಅಳ್ತಾನೇ. ಪ್ರೀತಿಯ ವಿಚಾರ ಬಿಟ್ಟು ಉಳಿದ ಎಲ್ಲಾ ವಿಚಾರವನ್ನು ಆತ ತಾಯಿ ಬಳಿ ಹೇಳಿಕೊಂಡಿದ್ದ.

ಈ ಮಧ್ಯೆ ಹಣ ಕೇಳ್ತಾ ಇದ್ದವರು ದಿಡೀರನೇ ಐದು ಲಕ್ಷ ರೂಪಾಯಿ ಹಣಕೊಡು.ಒನ್ ಟೈಂ ಸೆಟೆಲ್ ಮೆಂಟ್ ಮಾಡ್ಕೊಳೋಣ..ನಿನ್ ಎದುರಿಗೆ ವಿಡಿಯೋ ಡಿಲೀಟ್ ಮಾಡ್ತಿವಿ ಅಂತಾ ಮತ್ತೆ ಬರೋಬ್ಬರಿ ಐದು ಲಕ್ಷಕ್ಕೆ ಹಣಕ್ಕೆ ಬೇಡಿಕೆ ಇಡ್ತಾರೆ.ಆಗ ಸಂಜುಗೆ ಏನ್ ಮಾಡ್ಬೇಕು ಅಂತಾ ಗೊತ್ತಾಗೋದಿಲ್ಲ..ತಮ್ಮ ನಿಗೆ ವಿಷಯ ಹೇಳ್ತಾನೆ.ಅಣ್ಣನ ಕಷ್ಟ ನೋಡಲಾಗದ ತಮ್ಮ  ತಾನೇ ಖುದ್ದು ರಫಿಗೆ  ಪೋನ್ ಮಾಡಿ ಹಣದ ವಿಚಾರದಲ್ಲಿ ರಿಕ್ವೆಸ್ಟ್ ಮಾಡ್ತಾನೆ. ರಫಿ ತಂಡ ಈ ಬಾರಿ ದೊಡ್ಡ ಮೊತ್ತದ ಹಣ ಪೀಕುವ ಹುನ್ನಾರ ನಡೆಸಿದ್ರು..ಇತ್ತ ಸಂಜು ತಮ್ಮ ಕೂಡ ರಫಿ ಗ್ಯಾಂಗ್ ಗೆ ಖೆಡ್ಡಾ ತೋಡಲು ನಿರ್ಧರಿಸಿದ್ದ. ರಫಿ ಗೆ ಪೋನ್ ಮಾಡಿ ಕರೆಸಿಕೊಂಡು,,ನಂತ್ರ ಪೊಲೀಸರಿಗೆ ಒಪ್ಪಿಸುವ ಪ್ಲಾನ್ ನ್ನು ಸಹೋದರ  ಮತ್ತು ಸ್ನೇಹಿತರು ರೂಪಿಸಿದ್ರು. ಸಂಜು ಸಹೋದರ ರಫಿಗೆ ಪೋನ್ ಮಾಡಿ ಅಲ್ಲಿ ಬಾ ಇಲ್ಲಿ ಬಾ ಸಿಗೋಣ ಅಂತಾ ಹೇಳ್ತಿದ್ದ ಮಾತಿನ ಪರಿ.,..ಆ ನಟೋರಿಯಸ್ ಗ್ಯಾಂಗ್ ಗೆ ಏನೋ ಟ್ರಾಪ್ ಮಾಡ್ತಿರೋ ಸುಳಿವು ಸಿಗುತ್ತೆ.ಈ ಕಡೆ ಸಂಜು ಸಹೋದರ ಹಣ ಕೊಡ್ತಿವಿ ಬರ್ರಿ ಅಂತಾ ಕರೆದ್ರೂ..ಹೈ ಅಲರ್ಟ್ ಆಗೋ ರಫಿ  ಗ್ಯಾಂಗ್ ಇವರು ಕರೆದ ಸ್ಥಳಕ್ಕೆ ಬರೋದೇ ಇಲ್ಲ..ಆಗ ಅಲ್ಲಿ ವಿದಿಯಾಟವೇ ಬದಲಾಗುತ್ತೆ ನೋಡಿ.

ಪ್ರೇಮಿಗಳಿಬ್ಬರೂ ಒಟ್ಟಿಗೆ ವಿಷ ಸೇವಿಸಿದ್ರು..

ಬ್ಲಾಕ್ ಮೇಲ್ ಗೆ ತುತ್ತಾಗಿದ್ದ ಸಂಜಯ್ ತನ್ನೆಲ್ಲ ಕಷ್ಟವನ್ನು ಗೀತಾಳಿಗೆ ಹೇಳಿದ್ದ. ರಫಿ  ಗ್ಯಾಂಗ್ ಹಣ ಕೊಡ್ತಿವಿ ಇಂತಕಡೆ ಬನ್ನಿ ..ಇಲ್ಲಾ ನೀವು ಹೇಳಿದ ಸ್ಥಳಕ್ಕೆ ನಾವೇ ಬರ್ತಿವಿ ಅಂದ್ರೂ..ಯಾಕೋ ಸ್ಪಂದಿಸುತ್ತಿಲ್ಲ...ನನಗೆ ಭಯ ಕಾಡ್ತಿದೆ..ಎಲ್ಲಾದ್ರೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ರಾ..ಅಂತಾ ಆತಂಕ ವ್ಯಕ್ತಪಡಿಸ್ತಾನೆ ಸಂಜು..ಆದ್ರೆ ಬ್ಲಾಕ್ ಮೇಲರ್ ಗಳು ಇಷ್ಟು ದಿನ ಹಣಕಿತ್ತ ನಾವೆಲ್ಲಿ ಟ್ರಾಪ್ ಆಗಿಬಿಡ್ತಿವೋ ಅನ್ನೋ ಭಯದಲ್ಲಿ ಅವರು ಸುಮ್ ನಾಗಿದ್ರು..ಆದ್ರೆ ಬ್ಲಾಕ್ ಮೇಲರ್ ಗಳ ಮೌನವೇ..ಪ್ರೇಮಿಗಳ ಸಾವಿಗೆ ಕಾರಣವಾಗಿಬಿಡುತ್ತೆ...ನಮ್ ಹತ್ರ ಹಣ ತಗೊಳಕ್ಕೆ ಬಂದಿಲ್ಲ ಅಂದ್ರೆ...ಅವರು ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಭಾವಿಸುವ ಸಂಜು ಮತ್ತು ಗೀತಾ...ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರಕ್ಕೆ ಬಂದು ಬಿಡ್ತಾರೆ.

ಸಂಜು ಗೀತಾ ಅಂದು ಎಂದಿನಂತೆ ತಮ್ಮ  ಜಾಗದಲ್ಲಿ ಸೇರ್ತಾರೆ. ಸಂಜು ಕೈಯಲ್ಲಿ ವಿಷದ ಬಾಟಲಿಯನ್ನು ಹಿಡ್ಕೊಂಡು ಬಂದಿರ್ತಾನೆ.  ಬದುಕಿದ್ದಾಗ ಒಂದಾಗದ ನಾವು ಸಾವಿನಲ್ಲಾದ್ರೂ ಒಂದಾಗೋಣ ಅಂತಾ ಒಟ್ಟಿಗೆ ಕಳೆನಾಶಕ ವಿಷ ಕುಡಿದು ಬಿಡ್ತಾರೆ.ವಿಷ ಏರುವ ಮುನ್ನ ಸಂಜು ತನ್ನ ಸ್ನೇಹಿತರಿಗೆ ಪೋನ್ ಮಾಡಿ. ಅಂತಿಮ ವಿದಾಯ ಹೇಳ್ತಿದಿನಿ ಪ್ರೆಂಡ್...ನಾನು ಬದುಕೋದಿಲ್ಲ..ವಿಷ ಕುಡಿದಿದೀನಿ ಅಂತಾ ಪೋನ್ ಇಡ್ತಾನೆ.

ಇವರಿಬ್ಬರು ಭೇಟಿಯಾಗ್ತಿದ್ದ ಸ್ಥಳಗೊತ್ತಿದ್ದ ಸ್ನೇಹಿತರು ಸೀದಾ ಅದೇ ಸ್ಥಳಕ್ಕೆ ಬಂದಾಗ ಇಬ್ಬರು ಒದ್ದಾಡೋದನ್ನ ನೋಡಿ ದಂಗಾಗಿದ್ದಾರೆ. ತಕ್ಷಣ ಸ್ಥಳೀಯರ ನೆರವು ಪಡೆದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಅದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ್ದರಿಂದ ದುಬಾರಿ ಅಂತಾ ಕುಟುಂಬಸ್ಥರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವಿಳಂಬವಾಗಿದ್ದರಿಂದ ವಿಷ ರಕ್ತವನ್ನು ಸೇರಿಕೊಂಡು ಬಿಡ್ತು.

ಅಷ್ಟರಲ್ಲಾಗಲೇ ಸಂಜು ಮತ್ತು ಗೀತಾ ವಿಷ ಕುಡಿದ ವಿಚಾರ ಗೊತ್ತಾಗ್ತಿದ್ದ ಹಾಗೆ ಎರಡು ಕುಟುಂಬಗಳ ದುಃಖ ಕೋಡಿ ಒಡೆದಿದೆ. ಸಂಜು ಗೀತಾ ಪ್ರೀತಿಯ ಬಗ್ಗೆ ಗೊತ್ತಿಲ್ಲದ ಗೀತಾ ಪೋಷಕರು ಮೊದಲು ಯುವಕನ ವಿರುದ್ಧವೇ ಆರೋಪ ಮಾಡ್ತಾರೆ. ಆದ್ರೆ ಆರೋಪ ಪ್ರತ್ಯಾರೋಪ ಮಾಡೋದ್ರಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಆಘಾತ ಸುದ್ದಿಯೊಂದು ಕಾದಿತ್ತು.ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೊದಲು ಸಂಜು ಪ್ರಾಣಬಿಟ್ಟಿದ್ದ. ಇತ್ತ ಗೀತಾ ಎಮರ್ಜೆನ್ಸಿ ವಾರ್ಡ್ ನಲ್ಲಿ ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ಲು.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಗೀತಾ ಕುಟುಂಬಸ್ಥರು ನೀಡಿದ ಹೇಳಿಕೆ ಪ್ರಕರಣದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು.ಮರಣ ಪೂರ್ವ ಹೇಳಿಕೆ ನೀಡಿದ ಗೀತಾ ಅಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು.

ಹೈವೆ ರಸ್ತೆಯಲ್ಲಿ ಕಾರಿಗೆ ಬೆಂಕಿ! ಆತಂಕ ಮೂಡಿಸಿದ ಹೊಗೆ!

ಮರಣಪೂರ್ವ ಹೇಳಿಕೆಯಲ್ಲಿ ಪ್ರೇಯಸಿಯ ಡಿಫರೆಂಟ್ ಹೇಳಿಕೆ.

ಈ ಪ್ರಕರಣದಲ್ಲಿ ಗಮನಾರ್ಹ ವಿಚಾರವೆಂದರೆ ಪ್ರೇಯಸಿ ಗೀತಾ ನೀಡಿರುವ ಮರಣಪೂರ್ವ ಹೇಳಿಕೆ. ಸಂಜಯ್ ನನ್ನನ್ನು ಯಾವಾಗಲೂ ಪ್ರೀತಿಸುವಂತೆ ಪೀಡಿಸುತ್ತಿದ್ದ. ನಾನು ಪ್ರೀತಿ ನಿರಾಕರಣೆ ಮಾಡಿದ್ದೆ. ಆದರೆ ಆತ ವಿಷದ ಬಾಟಲಿಯನ್ನು ತಂದು ಪ್ರೀತಿಸುವಂತೆ ಪೀಡೀಸುತ್ತಿದ್ದ. ನಾನು ನಿರಾಕರಿಸಿದಾಗ ಆತ ವಿಷ ಕುಡಿದ..ಗಾಬರಿಗೊಂಡ ನಾನು ಕೂಡ ವಿಷ ಕುಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ಲು..ಇದು ಕುಟುಂಬಸ್ಥರ ಒತ್ತಾಯದ ಮೇರೆಗೆ ಗೀತಾ ನೀಡಿರುವ ಸ್ಚೇಟ್ ಮೆಂಟ್ ಎಂದು ಗೊತ್ತಾದರೂ ಪೊಲೀಸರು ಗೀತಾ ಹೇಳಿಕೆಯನ್ನು ದಾಖಲಿಸಿಕೊಂಡಿದ್ರು..ಇತ್ತ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂಜಯ್ ಹೇಳಿಕೆ ಪಡೆಯಲು ಪೊಲೀಸರಿಗೆ ಕೊನೆವರೆಗೂ ಸಾಧ್ಯವಾಗಲೇ ಇಲ್ಲ. ಆಗ ಸಂಜಯ್ ತಾಯಿ, ಮಗ ಮೂರು ತಿಂಗಳು ಕಾಲ ಅನುಭವಿಸಿದ ಯಾತನೆಯ ಸತ್ಯವನ್ನು ಪೊಲೀಸರೆದುರು ಬಾಯಿಬಿಟ್ಟಿದ್ದಳು.ತಾಯಿ ಹೇಳಿಕೆಯಂತೆ ದೂರು ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ,ಜೈಲಿಗೆ ಕಳುಹಿಸಿದ್ರು.

ಸ್ನೆಹಿತರೇ ಪ್ರೇಮಿಗಳ ದಿನ, ಪ್ರೀತಿಸುವ ದಿನ. ಆದರೆ ಪ್ರೀತಿಸುವ ಭರದಲ್ಲಿ ಲೋಕಜ್ಞಾನವನ್ನು ಮೆರೆಯದಿರಿ, ಏಕೆಂದರೆ, ನಾವೆಷ್ಟೆ ಒಳ್ಳೇಯವರಾದರೂ, ಜಗತ್ತಿನೆಲ್ಲರೂ ಒಳ್ಳೆಯವರಿರುವುದಿಲ್ಲ.  ವಿಷಯವೇ ಗೊತ್ತಾಗದಂತೆ, ಹಿಂದಿನಿಂದ ಬರುವ ವಾಹನವೊಂದು ಗುದ್ದಿ ಆಕ್ಸಿಡೆಂಟ್ ಆಗಬಹುದೋ? ಹಾಗೆಯೇ ಮೈಮರೆಯುವ ಕ್ಷಣದಲ್ಲಿ, ಬದುಕಿಗೂ ಆಕ್ಸಿಡೆಂಟ್ ಆಗಬಹುದು. ಹಾಗಾಗಿ ಪ್ರೀತಿ..ಪ್ರೇಮ..ಪ್ರಣಯದ ಜೊತೆಗೆ ಎಚ್ಚರವೂ ಜೊತೆಗಿರಲಿ!... 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com