ದೇಶದ ವಿವಿದೆಡೆ ವರದಿಯಾಗುತ್ತಿರುವ ರೀತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದಂತೆ ಮೃತದೇಹವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ವರದಿಯಾಗಿದೆ. ಮೇಲ್ನೋಟಕ್ಕೆ ಘಟನೆ ಬಗ್ಗೆ ಹಲವು ಸಂಶಯಗಳು ಮೂಡುತ್ತಿದ್ದು, ಪ್ರಕರಣವೂ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.

Kundadri Hills Incident : ತೀರ್ಥಹಳ್ಳಿಯಲ್ಲಿ ಬೆಳಗ್ಗೆ ಬೆಳಗ್ಗೆ?
ಇವತ್ತು ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಪರಿಚಿತ ಮೃತದೇಹದ ಪತ್ತೆಯಾದ ಬಗ್ಗೆ ವದಂತಿ ಹಬ್ಬಿತ್ತು. ಆನಂತರ ಈ ಬಗ್ಗೆ ಪೊಲೀಸ್ ಮೂಲಗಳು ಖಚಿತಪಡಿಸಿದವು. ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣ ಒಂದರಲ್ಲಿ ಮೃತದೇಹವೊಂದರ ಪಳಯುಳಿಕೆ ಪತ್ತೆಯಾಗಿದ್ದು, ಸ್ಥಳದಲ್ಲಿ ಯಾವುದೇ ರೀತಿಯ ಸುಳಿವಾಗಲಿ, ಕುರುಹು ಆಗಲಿ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಪೊಲೀಸರು ಮಹಜರ್ ನಡೆಸಿದ್ದು, ನಡೆದಿದ್ದೇನು ಎಂಬುದರ ಬಗ್ಗೆ ತನಿಖೆಯಿಂದಷ್ಟೆ ತಿಳಿಯಬೇಕಿದೆ.

Kundadri Hills Incident :ತೀರ್ಥಹಳ್ಳಿಯ ಪ್ರವಾಸಿ ತಾಣ ಕುಂದಾದ್ರಿ
ಅಂದಹಾಗೆ ತೀರ್ಥಹಳ್ಳಿಯ ಪ್ರಸಿದ್ದ ಪ್ರವಾಸಿ ತಾಣ ಕುಂದಾದ್ರಿ ಬೆಟ್ಟದ ಹಳವೊಂದರ ನಡುವೆ ಅಸ್ತಿಪಂಜರವೊಂದು ಪತ್ತೆಯಾಗಿದೆ. ಕುಂದಾದ್ರಿ ಬೆಟ್ಟದ ಮೇಲಿನ ಮೊದಲ ತಿರುವಿನಲ್ಲಿ, ಹರಡಿಕೊಂಡಿರುವ ಗಿಡಗಂಟಿಗಳಲ್ಲಿ ಕಲ್ಲುಗಳ ನಡುವೆ ಅಸ್ತಿಪಂಜರ ಸಿಕ್ಕಿದೆ. ಅಸ್ತಿಪಂಜರದ ರುಂಡ ಒಂದೆಡೆ ಬಿದ್ದಿದ್ದು, ಮುಂಡದ ಭಾಗಗಳು ಇನ್ನೊಂದು ಕಡೆಯಲ್ಲಿ ಬಿದ್ದಿದೆ. ತಲೆಬುರಡೆಯನ್ನು ಗಮನಿಸಿದರೆ, ಘಟನೆ ನಡೆದು ಬಹಳ ದಿನಗಳು ಕಳೆದಂತಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸ್ತಿದ್ದು ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

Kundadri Hills Incident : ಟ್ರಕ್ಕಿಂಗ್ ಬಂದವರಿಂದ ವಿಷಯ ಬೆಳಕಿಗೆ
ಕುಂದಾದ್ರಿ (Kundadri Hills Incident ) ಬೆಟ್ಟಕ್ಕೆ ಹಲವರು ಟ್ರಕ್ಕಿಂಗ್ಗೆ ಬರುತ್ತಾರೆ, ಹೀಗೆ ನಿನ್ನೆ ದಿನ ಸೋಮವಾರ ಟ್ರಕ್ಕಿಂಗ್ಗೆ ಬಂದವರಿಗೆ ಕೆಟ್ಟ ವಾಸನೆ ಬಡಿದಂತಾಗಿದೆ, ಅನುಮಾನಗೊಂಡು ಪರಿಶೀಲಿಸಿದಾಗ ಅಸ್ತಿಪಂಜರ ಕಾಣಿಸಿದೆ. ಪಳಯುಳಿಕೆಯನ್ನು ನೋಡಿದ ಪ್ರವಾಸಿಗರ ತಂಡ, ಆನಂತರ, ಅಲ್ಲಿನ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಆನಂತರ ವಿಷಯ ಪೊಲೀಸರಿಗೆ ಮುಟ್ಟಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗುಂಬೆ ಪೊಲೀಸರು ದೌಡಾಯಿಸಿದರು.
ಸಂಶಯಕ್ಕೆ ಕಾರಣವಾದ ಘಟನೆ
ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಕುಂದಾದ್ರಿ ಬೆಟ್ಟದಲ್ಲಿ ಸಾಕಷ್ಟು ಭಿನ್ನ ಚಟುವಟಿಕೆಗಳು ನಡೆಯುತ್ತಿದ್ದು, ಪೊಲೀಸರಿಗೆ ಈ ಬಗ್ಗೆ ಹಲವು ಸಲ ದೂರುಗಳು ಸಹ ಸಲ್ಲಿಕೆಯಾಗಿದ್ದವು. ಇದರ ನಡುವೆ ಮೃತದೇಹ ಪತ್ತೆಯಾಗಿರುವುದು ತೀವ್ರ ಕುತೂಹಲದ ಜೊತೆಗೆ ಸಂಶಯಕ್ಕೆ ಕಾರಣವಾಗಿದೆ.
ಆಗುಂಬೆ ಪೊಲೀಸ್ ಠಾಣೆ
ಅಸಲಿಗೆ ಮೃತದೇಹ ಪುರುಷನದ್ದೆ ಅಥವಾ ಮಹಿಳೆಯದ್ದೆ ಎಂಬುದು ಸಹ ಗೊತ್ತಾಗಿಲ್ಲ. ಮೃತದೇಹ ಕೊಳೆತ ಸ್ಥಿತಿಯಲ್ಲಿಲ್ಲ. ಬದಲಾಗಿ ಸುಟ್ಟ ಸ್ಥಿತಿಯಲ್ಲಿದೆ ಎಂದೆನಿಸುತ್ತಿದೆ. ಅಲ್ಲಲ್ಲಿ ಸುಟ್ಟ ಕಲೆಗಳಿದ್ದು, ಮೃತದೇಹದ ಬಟ್ಟೆಯ ಬಗ್ಗೆಯು ಸುಳಿವು ಕಂಡುಬಂದಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ, ಇಡೀ ಪ್ರಕರಣ ಇದೀಗ ಶಿವಮೊಗ್ಗ ಪೊಲೀಸ್ ಕ್ರೈಂ ವಿಭಾಗಕ್ಕೆ ಸವಾಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.