SAGARA

ಶುಭಸುದ್ದಿ : ಶರಾವತಿ ಹಿನ್ನೀರಿನಲ್ಲಿ ನಿಂತಿದ್ದ ಲಾಂಚ್ ಪುನರಾರಂಭ! ದುರ್ಗಾಂಬಾ ಬಸ್​ ಕೂಡ ಓಡಾಡುತ್ತೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Hasirumakki Launch Service /ಮಲೆನಾಡು ಟುಡೆ ಸುದ್ದಿ / ನಿಟ್ಟೂರು / ಶರಾವತಿ ನದಿಯ ಹಿನ್ನೀರಲ್ಲಿ ನೀರು ಕಡಿಮೆಯಾಗಿದ್ದ ಕಾರಣಕ್ಕೆ ಸ್ಥಗಿತಗೊಂಡಿದ್ದ ಲಾಂಚ್ ಸೇವೆ ನಾಳೆಯಿಂದ ಮತ್ತೆ ಆರಂಭವಾಗಲಿದೆ. ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದ ಕಾರಣಕ್ಕೆ ಕಳೆದ 20 ದಿನಗಳಿಂದ ಹಸಿರುಮಕ್ಕಿ ಲಾಂಚ್ ಸೇವೆಯನ್ನ ನಿಲ್ಲಿಸಲಾಗಿತ್ತು.

ಇದೀಗ ಮಳೆಯಾಗುತ್ತಿದ್ದು, ಹಿನ್ನೀರು ಮೇಲೆ ಬಂದಿರುವುದರಿಂದ ಲಾಂಚ್ ಸೇವೆಯು ಮತ್ತೆ ಆರಂಭವಾಗುತ್ತಿದೆ. ನಾಳೆಯಿಂದ ಅಂದರೆ ಜುಲೈ 8 ರಿಂದ ಹಸಿರು ಮಕ್ಕಿ ಲಾಂಚ್ ಸೇವೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಿ ಪುನಾರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

condolence

ಕಳೆದ 4 ರಿಂದ 5 ದಿನಗಳ ಅವಧಿಯಲ್ಲಿ ಶರಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ . ಪರಿಣಾಮವಾಗಿ ಶರಾವತಿ ನದಿಗೆ ಸಾಕಷ್ಟು ಪ್ರಮಾಣದಲ್ಲಿ ಹೊಸ ನೀರು ಹರಿದುಬರುತ್ತಿದೆ. ಇದರಿಂದಾಗಿ ಹಿನ್ನೀರಿನಲ್ಲಿ ಲಾಂಚ್ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್​ ಸೇವೆಯನ್ನು ಮತ್ತೆ ಶುರು ಮಾಡಲು ಅನುಕೂಲವಾಗಿದ್ದು ನಾಳೆಯಿಂದ ಲಾಂಚ್ ಓಡಾಟ ನಡೆಸಲಿದೆ. ಇನ್ನೂ ಈ ಭಾಗದಲ್ಲಿ ಓಡಾಡುತ್ತಿದ್ದ ದುರ್ಗಾಂಬಾ ಬಸ್​ ಸೇವೆಯು ನಾಳೆಯಿಂದ ಆರಂಭವಾಗಲಿದೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ