handi anni case judgement today ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಖುಲಾಸೆಗೊಂಡಿದ್ದಾರೆ. ಪ್ರಕರಣದ ತೀರ್ಪು ಇವತ್ತು ಹೊರಬಿದ್ದಿದ್ದು, ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 14 Jul 2022 ರಂದು ವಿನೋಬನಗರ ಪೊಲೀಸ್ ಠಾಣೆಯ ಸಮೀಪ ನಡೆದಿದ್ದ ಹಂದಿ ಅಣ್ಣಿ ಕೊಲೆ ನಡಿದತ್ತು. ಈ ಸಂಬಂಧ ಪ್ರಕರಣ ದಾಖಲಿಸಿದ್ದ 1) ಕಾರ್ತಿಕ್ @ ಕಾಡ ಕಾರ್ತಿಕ್ ಎ-1, 2) ನಿತಿನ್ @ ಭಜರಂಗಿ ಎ-2 , 3) ಮದನ್ ರಾಜ್ @ ಮದನ್ ರೇ ಎ-3, 4) ಚಂದನ್ @ ಚಾರ್ಲಿ ಎ-4, 5) ಫಾರೂಕ್ @ ಉಮ್ಮರ್ ಎ-5, 6) ಮಧುಸೂದಹನ್ @ ಕರಿಯಾ ಎ-6, 7) ಮಧು ಎ-7, 8) ಆಂಜನೇಯ ಕೆ ಎಸ್ ಎ-8 ಆರೋಪಿಗಳು ಎಂದು ಗುರುತಿಸಿದ್ದರು. ಈ ನಡುವೆ ಆರೋಪಿಗಳು ಚಿಕ್ಕಮಗಳೂರು ಪೊಲೀಸರ ಮುಂದೆ ಶರಣಾಗಿ, ಆನಂತರ ಶಿವಮೊಗ್ಗ ಪೊಲೀಸರ ಕಸ್ಟಡಿಗೆ ಬಂದಿದ್ದರು. ತದನಂತರ ವಿಚಾರಣೆ ನಡೆದು ಪೊಲೀಸರು ಆರೋಪಿಗಳ ವಿರುದ್ಧ PRL. DISTRICT AND SESSIONS COURT SHIVAMOGGA ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು.
handi anni case judgement today
ಕೋರ್ಟ್ನಲ್ಲಿ ಕೋರ್ಟ್ನಲ್ಲಿ 2022 ರ ಡಿಸೆಂಬರ್ 13 ರಂದು ಆರಂಭವಾಗಿತ್ತು. ಕಳೆದ ಮಾರ್ಚ್ 17 ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದು, ಮಾರ್ಚ್ 22 ಕ್ಕೆ ಆರೋಪಿಗಳ ಹೇಳಿಕೆ ದಾಖಲಿಸಲಾಗಿತ್ತು. ಅಂತಿಮವಾಗಿ ಏಪ್ರಿಲ್ ಒಂದರಂದು ವಾದ ವಿವಾದ ಆಲಿಸಿದ್ದ ಕೋರ್ಟ್ ಜಡ್ಜ್ಮೆಂಟ್ ದಿನಾಂಕವನ್ನು ಘೋಷಿಸಿತ್ತು. ಇವತ್ತು ಅಂತಿಮವಾಗಿ ತೀರ್ಪು ಹೊರಬಿದ್ದಿದೆ. ಪ್ರಕರಣದಲ್ಲಿನ ಆರೋಪಿಗಳ ಪೈಕಿ, ಓರ್ವ ಆರೋಪಿ ಸಾವನ್ನಪ್ಪಿದ್ದು, ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.