ರೈತರೇ ಗಮನಿಸಿ: ದಾರಿ ಸಮಸ್ಯೆ ದೂರು ಎಲ್ಲಿ ನೀಡಬೇಕು? ಸರ್ಕಾರಿ ಸುತ್ತೋಲೆ ಏನು ಹೇಳುತ್ತದೆ, ಇಲ್ಲಿದೆ ಮಾಹಿತಿ!

ajjimane ganesh

Do you know ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:   ರೈತರು ತಮ್ಮ ಹೊಲಕ್ಕೆ ಹೋಗುವುದೇ ಮಲೆನಾಡಲ್ಲಿ ಒಂದು ದೊಡ್ಡ ಸಮಸ್ಯೆ! ಏಕೆಂದರೆ, ಜಾಗದ ವಿಚಾರದಲ್ಲಿ ಸೃಷ್ಟಿಯಾಗುವ ವಿವಾದಗಳಿಂದಾಗಿ, ಕಾಲು ಹಾದಿ, ಬಂಡಿ ಹಾದಿಗಳನ್ನು ಬಂದ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಲೇ ಇದೆ. ಮೇಲಾಗಿ ಇದೇ ವಿಚಾರದಲ್ಲಿ ಹೊಡೆದಾಟಗಳೇ ನಡೆಯುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಎಫ್​ಐಆರ್ ಸಹ ನಿರಂತರವಾಗಿ ದಾಖಲಾಗುತ್ತಿದೆ. ಈ ನಡುವೆ ಕಳೆದ 2023 ರಲ್ಲಿ ಸರ್ಕಾರ ಬಂಡಿ ಹಾದಿಯನ್ನು ಬಂದ್ ಮಾಡುವುದು ತಪ್ಪು ಎಂದು ಸ್ಪಷ್ಟಪಡಿಸಿತ್ತಲ್ಲದೆ ಈ ಸಂಬಂಧ ಆದೇಶವೊಂದನ್ನ ಹೊರಡಿಸಿತ್ತು. 

ಕೃಷಿ ಚಟುವಟಿಕೆಗಳಿಗಾಗಿ ರೈತರು ತಮ್ಮ ಜಮೀನುಗಳಿಗೆ ಓಡಾಡುವ ಹಾದಿಯನ್ನು ಬಂದ್​ ಮಾಡಿ ನೆರೆಹೊರೆಯ ಭೂಮಾಲೀಕರು  ರೈತರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವುದ್ದಕ್ಕೆ ಈ ಸಮಸ್ಯೆಗೆ ಕಾನೂನಿನ ಪರಿಹಾರವನ್ನು ಸರ್ಕಾರ ತನ್ನ ಆದೇಶದಲ್ಲಿ ನೀಡಿತ್ತು.  ಈಗಾಗಲೇ ಜಾರಿಯಲ್ಲಿರವು ಆದೇಶದ ಬಗ್ಗೆ ನಿಮಗೆ ತಿಳಿಸುವುದು ಈ ವರದಿಯ ಉದ್ದೇಶ Do you know

ಸರ್ಕಾರಿ ನಿಯಮ ಏನು ಹೇಳುತ್ತದೆ?

ಕರ್ನಾಟಕ ಸರ್ಕಾರವು ರೈತರ ಈ ದಾರಿ ಸಮಸ್ಯೆ ನಿವಾರಿಸಲು 2023ರ ಅಕ್ಟೋಬರ್ 20 ರಂದು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಸ್ಪಷ್ಟ ಸುತ್ತೋಲೆಯನ್ನು ರವಾನಿಸಿದೆ.

ರೈತರು ತಮ್ಮ ಕೃಷಿ ಸಲಕರಣೆಗಳನ್ನು, ಟ್ರ್ಯಾಕ್ಟರ್‌ಗಳನ್ನು ಸಾಗಿಸಲು ಮತ್ತು ಬೆಳೆದ ಫಸಲನ್ನು ಹೊರತರಲು ಅಕ್ಕಪಕ್ಕದ ಖಾಸಗಿ ಜಮೀನುಗಳಲ್ಲಿನ ಕಾಲುದಾರಿ ಅಥವಾ ಬಂಡಿದಾರಿಗಳನ್ನು ಬಳಸಬೇಕಾಗುತ್ತದೆ. ಈ ದಾರಿಗಳನ್ನು ಕೆಲವು ಭೂಮಾಲೀಕರು ವೈಯಕ್ತಿಕ ದ್ವೇಷ ಅಥವಾ ಅಸೂಯೆಯಿಂದ ಮುಚ್ಚಿ ತೊಂದರೆ ಕೊಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಹೀಗಾಗಿ ಸರ್ಕಾರ ತನ್ನ ಸುತ್ತೋಲೆಯಲ್ಲಿ ಹೊಲದ ಹಾದಿಗೆ ಖಾಸಗಿ ನಿರ್ಬಂಧವನ್ನು ತಪ್ಪಿಸುವ ಸಲುವಾಗಿ ಸುತ್ತೋಲೆಯನ್ನು ಹೊರಡಿಸಿತ್ತು. 

Do you know about the Tehsildars action? shivamogga news , information news 
Do you know about the Tehsildars action? shivamogga news , information news

ಎಲ್‌ಎಲ್‌ಆರ್‌ ಹೊಸ ನಿಯಮ:‌  ಅರ್ಜಿ ಸಲ್ಲಿಸಿದ ಬಳಿಕ ಈ ನಿಯಮ ಪಾಲಿಸದಿದ್ರೆ ನಿಮ್ಮ ಅರ್ಜಿ ಆಟೋಮ್ಯಾಟಿಕ್ ರದ್ದು!

ಸರ್ಕಾರ ತನ್ನ ಸುತ್ತೋಲೆಯಲ್ಲಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 59 ರ ಪ್ರಕಾರ, ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ಅವಕಾಶವಿದೆ. ಮುಖ್ಯವಾಗಿ, ದಿ ಇಂಡಿಯನ್ ಈಸ್‌ಮೆಂಟ್‌ ಆಕ್ಟ್, 1882′ (The Indian Easement Act, 1882)ರ ಅಡಿಯಲ್ಲಿ, ಪ್ರತಿ ಜಮೀನು ಮಾಲೀಕರು ತಮ್ಮ ಭೂಮಿಯನ್ನು ಪ್ರವೇಶಿಸುವ ಹಕ್ಕು (Easement) ಹೊಂದಿರುತ್ತಾರೆ. ಇದನ್ನು ಯಾರೂ ತಡೆಯುವಂತಿಲ್ಲ. ರೈತರಿಗೆ ದಾರಿ ಸಮಸ್ಯೆಯು, ಸ್ಥಳೀಯವಾಗಿ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಈ ಸಮಸ್ಯೆ ನಿವಾರಣೆಗೆ ಸರ್ಕಾರವು ತಹಶೀಲ್ದಾರ್‌ಗಳಿಗೆ ವಿಶೇಷ ಅಧಿಕಾರ ನೀಡಿದೆ.ತಹಶೀಲ್ದಾರ್‌ಗಳು ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್, 1973ರ ಸೆಕ್ಷನ್ 147ರ ಅನ್ವಯ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸುತ್ತಾರೆ. 

Do you know about the Tehsildars action? shivamogga news , information news

ಶಿವಮೊಗ್ಗಕ್ಕೆ ಬರ್ತಿದ್ದಾರೆ  ಮಳೆ ಹುಡುಗಿ ಪೂಜಾ ಗಾಂಧಿ, ಯಾವಾಗ, ಏಕೆ ಗೊತ್ತಾ

ಗ್ರಾಮ ನಕಾಶೆಯಲ್ಲಿರುವಂತಹ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ರೈತರು ಸಂಚರಿಸಲು ಅಡ್ಡಿಪಡಿಸಿದರೆ ಅಥವಾ ದಾರಿ ಮುಚ್ಚಿದ್ದರೆ, ತಹಶೀಲ್ದಾರ್‌ಗಳು ಕೂಡಲೇ ಆ ದಾರಿಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಕ್ರಮವಹಿಸಬೇಕು ಎಂದು ಸುತ್ತೋಲೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದ್ದರಿಂದ, ನಿಮ್ಮ ಕೃಷಿ ಜಮೀನಿಗೆ ಹೋಗುವ ದಾರಿಯನ್ನು ಯಾರಾದರೂ ತಡೆದರೆ, ತಕ್ಷಣವೇ ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಕಚೇರಿಗೆ ದೂರು ನೀಡಿ, ಕಾನೂನು ಅಡಿಯಲ್ಲಿ ಸಹಾಯ ಪಡೆಯಬಹುದಾಗಿದೆ. 

Farmers right of way, land path issue, Tehsildar power, path clearance, Karnataka government order, Easement Act, agriculture road
Farmers right of way, land path issue, Tehsildar power, path clearance, Karnataka government order, Easement Act, agriculture road
Farmers right of way, land path issue, Tehsildar power, path clearance, Karnataka government order, Easement Act, agriculture road
Farmers right of way, land path issue, Tehsildar power, path clearance, Karnataka government order, Easement Act, agriculture road
Do you know about the Tehsildars action? shivamogga news , information news 
Do you know about the Tehsildars action? shivamogga news , information news

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆಗೆ ಡಿಮ್ಯಾಂಡ್ ಜಾಸ್ತಿ! ಚಿತ್ರದುರ್ಗ, ಹೊನ್ನಾಳಿ, ಶಿರಸಿ, ಭದ್ರಾವತಿ, ತೀರ್ಥಹಳ್ಳಿ ಎಷ್ಟಿದೆ ಅಡಿಕೆ ದರ?

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Do you know about land path issue ಕೃಷಿ ಜಮೀನು ದಾರಿ ತಡೆದರೆ ಏನು ಮಾಡಬೇಕು? ತಹಶೀಲ್ದಾರ್ ಕ್ರಮದ ಮಾಹಿತಿ ಗೊತ್ತೇ? What to do if the path to agricultural land is obstructed? Do you know about the Tehsildars action? shivamogga news , information news 
Share This Article