ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಈ ವೇಳೆ ಅವರು ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ.

ಸಾದ್ವಿ ಪ್ರಗ್ಯಾ ವಿರುದ್ಧ ದೂರು/ ಕೋಟೆ ಪೊಲೀಸ್​ ಸ್ಟೇಷನ್​ಗೆ ಹಾಜರಾಗುವಂತೆ ಸೂಚನೆ/ ದಾಖಲಾಗಿತ್ತಾ ಇನ್ನೊಂದು ಕಂಪ್ಲೆಂಟ್

ಶಿವಮೊಗ್ಗ ಎನ್​ಇಎಸ್​ ಮೈದಾನದಲ್ಲಿ (NES) ನಡೆದಿದ್ದ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಸಾದ್ವಿ ಪ್ರಗ್ಯಾ ಸಿಂಗ್ (prgya singh thakur) ಮಾತನಾಡಿದ್ದರು.

ಅಗ್ನಿ ಆಕಸ್ಮಿಕ : ಅಂಗಡಿಗೆ ಬಿತ್ತು ಬೆಂಕಿ/ ಉಡುಗೊರೆ ತಯಾರಿಸುವ ಶಾಪ್​ನಲ್ಲಿ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ?

ಈ ವೇಳೆ ಅವರು  ಆಡಿರುವ ಚಾಕು ಚೂಪಾಗಿ ಇಟ್ಟುಕೊಳ್ಳಿ ಎಂಬ ವಾಕ್ಯ ಪ್ರಚೋದನಕಾರಿಯಾಗಿದೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತದೆ.

ಇವರ ವಿರುದ್ಧ ಕೇಸ್ ದಾಖಲಿಸಿ ಎಂದು, ತೆಹಸಿನ್ ಪೂನಾವಾಲಾ ಎಂಬವರು ಇಮೇಲ್ ಮೂಲಕ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಲೆನಾಡು ಟುಡೆ ನಿನ್ನೆಯೇ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ಓದಿ : ವಿಡಿಯೋ 2 ದಿನದಲ್ಲಿ ವೈರಲ್​ ಆಯ್ತು ಸಾದ್ವಿ ಮಾತು/ ಸೊಪ್ಪು ಕತ್ತರಿಸುವ ಚಾಕು ವಿಚಾರ-ವಿವಾದ/ ಎಫ್​ಐಆರ್​ ದಾಖಲಿಸುವಂತೆ ಶಿವಮೊಗ್ಗ ಎಸ್​ಪಿಗೆ ಕಂಪ್ಲೆಂಟ್​ / ಏನಿದು? ಇಲ್ಲಿದೆ ಓದಿ

ಸದ್ಯ ಈ ಸಂಬಂಧ ಶಿವಮೊಗ್ಗ ಪೊಲೀಸರು ಪ್ರತಿಕ್ರಿಯಿಸಿದ್ದು, ದೂರುದಾರ ತೆಹಸೀನ್​ ಪೂನಾವಾಲಾರಿಗೆ ಉತ್ತರ ನೀಡಿ, ಕೋಟೆ ಪೊಲೀಸ್ ಠಾಣೆಗೆ ಇವತ್ತು ಹಾಜರಾಗುವಂತೆ ತಿಳಿಸಿದ್ದಾರೆ. ಈ ಬಗ್ಗೆ ಸ್ವತಃ ತೆಹಸೀನ್ ಕೋಟೆ ಠಾಣೆ ಪೊಲೀಸರ ಲೆಟರ್​ನ್ನು ಬಹಿರಂಗ ಪಡಿಸಿದ್ದು, ಪೊಲೀಸರ ನಡೆಗೆ ಅಸಮಾಧಾನವೂ ಹೊರಹಾಕಿದ್ದಾರೆ. 

ಕೆಲಸದ ಸಮಾಚಾರ/ Job news/ ಕೆಲಸ ಹುಡುಕುತ್ತಿರೋರಿಗೆ ಇಲ್ಲಿದೆ ಗುಡ್​ ನ್ಯೂಸ್/ ಶಿವಮೊಗ್ಗದಲ್ಲಿಯೇ ನಡೆಯಲಿದೆ JOB ಮೇಳ/ ವಿವರ ಇಲ್ಲಿದೆ, ವಿಷಯ ಎಲ್ಲರಿಗೂ ತಿಳಿಸಿ

ಇನ್ನೂ ಈ ನಡುವೆ ಸಾದ್ವಿ ವಿರುದ್ಧ ಮೊದಲೇ ದೂರು ಕೊಟ್ಟಿದ್ದೆ ಎಂದು ಸಾಕೇತ್ ಗೋಕಲೆ ಎಂಬವರು, ತಾವು ನೀಡಿದ್ದ ಕಂಪ್ಲೆಂಟ್ ಹಾಗೂ ಅದಕ್ಕೆ ಪಡೆದುಕೊಂಡ ಅಕ್ನಾಲೆಡ್ಜ್​ ಮೆಂಟ್​ನ್ನ ಸಹ ಫೋಸ್ಟ್ ಮಾಡಿದ್ದಾರೆ.