ರಿಪ್ಪನ್ ಪೇಟೆ /ಮಲೆನಾಡು ಟುಡೆ ಸುದ್ದಿ / ನಿನ್ನೆಯು ಶಿವಮೊಗ್ಗದಲ್ಲಿ ಸಂಜೆ ಹೊತ್ತು ಅಬ್ಬರದ ಮಳೆ ಬಂದಿತ್ತು. ಆಲಿಕಲ್ಲು ಹಾಗೂ ಗುಡುಗು ಸಹಿತ ಆರ್ಭಟಿಸಿದ ವರ್ಷಧಾರೆ ಕೆಲವೆಡೆ ಅನಾಹುತ ಸೃಷ್ಟಿಸಿದ್ದ. ಇನ್ನೂ ಹೊಸನಗರ ತಾಲ್ಲೂಕು ರಿಪ್ಪನ್ಪೇಟೆಯ ಸಮೀಪ ಮಳೆಯಿಂದಾಗಿ ಟಾಟಾ ಏಸ್ ಲಗೇಜ್ ವಾಹನದ ಮೇಲ್ಭಾಗಕ್ಕೆ ತೆಂಗಿನಮರವೊಂದು ಉರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ. ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ

ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ
ಶಬರೀಶನಗರ ಬಡಾವಣೆಯ ನಿವಾಸಿಯಾಗಿರುವ ಗುಂಡಣ್ಣ (ಗಂಗಾಧರ್) ಎಂಬುವವರಿಗೆ ಸೇರಿದ ಟಾಟಾ ಏಸ್ ವಾಹನ ಘಟನೆಯಲ್ಲಿ ಜಖಂಗೊಂಡಿದೆ.
ತಮ್ಮ ಮನೆಯ ಸಮೀಪ ಪಾರ್ಕ್ ಮಾಡಿದ್ದ ವಾಹನದ ಮೇಲೆ ತೆಂಗಿನಮರ ಬೇರು ಸಮೇತ ಉರುಳಿದೆ. ಮರ ಬಿದ್ದ ರಭಸಕ್ಕೆ ವಾಹನದ ಮೇಲ್ಭಾಗವು ಸಂಪೂರ್ಣವಾಗಿ ಜಖಂಗೊಂಡಿದ್ದೆ.
ಮರ ಉರುಳಿಬಿದ್ದಿರುವ ವಿಷಯದ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
heavy Rain in Ripponpet Coconut Tree Falls on Tata Ace Vehicle
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.