ತಂದೆ ಕೈಯಲ್ಲಿ ಮಗುವಿನ ಸಾವು ತಂದಿಟ್ಟ ವಿಧಿ! ಸಣ್ಣ ಅಸಡ್ಡೆಗೆ ಜೀವವೇ ಹೋಯಿತೆ? ಪೋಷಕರೇ ಪ್ಲೀಸ್ ಎಚ್ಚರ ವಹಿಸಿ!
Child dies after being hit while removing tractor reverse Parents beware
MALENADUTODAY.COM/ SHIVAMOGGA / KARNATAKA WEB NEWS
ವಿದಿಯು ಒಮ್ಮೊಮ್ಮೆ ಎಂತಹ ಸನ್ನಿವೇಶ ತಂದಿಡುತ್ತದೆ ಎಂದರೆ, ಎದುರಿಸಲು ಆಗದೆ, ನಿಭಾಯಿಸಲು ಆಗದೆ ಕೊನೆಗೆ ಸಹಿಸಲು ಆಗದೆ, ದೇವರ ಮೇಲೂ ಹರಿಹಾಯುವಂತಹ ಮನಸ್ಥಿತಿಗೆ ಬರಬೇಕಾಗುತ್ತದೆ.ಅಂತಹದ್ದೊಂದು ಸನ್ನಿವೇಶ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಂಭವಿಸಿದೆ. ಅಲ್ಲಿ ನಡೆದ ಘಠನೆಯನ್ನು ಕೇವಲ ಮುನ್ನೆಚ್ಚರಿಕೆಯ ಜಾಗೃತಿಗಾಗಿ ಹೇಳುತ್ತಿದ್ದೇವೆ..
ಏನಾಯ್ತು?
ಮೊನ್ನೆ ಸಂಜೆ ಮಧ್ಯಾಹ್ನ ೩ ಗಂಟೆಯಾಗಿಬರಹುದು, ತೀರ್ಥಹಳ್ಳಿ ತಾಲ್ಲೂಕಿನ ಆ ಪುಟ್ಟ ಊರಿನಲ್ಲಿ ಮಗುವೊಂದು ಹಾಲುಹಲ್ಲಿನ ನಗು ಚೆಲ್ಲುತಿತ್ತು. ಮಗನ ನಗು ಕಂಡು ಅಪ್ಪ ನಕ್ಕು ಮುದ್ದು ಮಾಡುತ್ತಿದ್ದ. ದೇವರೇ ತಾನಾದಂತಿದ್ದ ಆ ಮಗುವು, ಇಡೀ ಮನೆಯನ್ನ ದೇವಲೋಕ ಮಾಡಿತ್ತು. ಆದರೆ ಕೆಲವೇ ಕ್ಷಣದಲ್ಲಿ ಎಲ್ಲಿಂದ ಬಂದು ಬಡಿಯಿತೋ ಗೃಹಚಾರ ಗೊತ್ತಿಲ್ಲ. ಪುಟಾಣಿ ದೇವರು ಸಾವನ್ನಪ್ಪಿತ್ತು.
ಹೇಗೆ?
ಹೌದು, ಪುಟ್ಟ ಕಂದ, ತನ್ನ ಮನೆಯ ಅಂಗಳದಲ್ಲಿಯೇ ಸಾವನ್ನಪ್ಪಿತ್ತು. ದುರಂತಕ್ಕೆ ಕಾರಣವಾಗಿದ್ದು ಟ್ರ್ಯಾಕ್ಟರ್. ಮಗುವಿನ ಜೊತೆ ಆಡುತ್ತಿದ್ದ ತಂದೆ, ಯಾವುದೋ ಕೆಲಸ ನೆನಪಾಗಿ ಅಲ್ಲಿಂದ ಹೊರಟಿದ್ದಾರೆ. ಮಗಾ ಇಲ್ಲೆ ಇರು, ನಾ ಹೋಗಿ ಬತ್ತೀನಿ ಎನ್ನುತ್ತಾ ಒಂದುವರೆ ವರ್ಷದ ಕಂದಮ್ಮನನ್ನ ಚಾವಡಿಯಲ್ಲಿ ಅಜ್ಜಿಯ ಹತ್ರ ಬಿಟ್ಟು ಅಂಗಳಕ್ಕೆ ಬಂದಿದ್ದಾರೆ. ಅಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ನ್ನ ಸ್ಟಾರ್ಟ್ ರಿವರ್ಸ್ ತೆಗೆದಿದ್ದಾರೆ. ನಡೆದಿದ್ದು ಇಷ್ಟೆ, ಹಿಂದೆ ನೋಡಿದರೇ ಮಗು ಪೆಟ್ಟು ತಿಂದು ಬಿದ್ದಿತ್ತು. ಅಂಗಳಕ್ಕೆ ಬಂದ ತಂದೆಗೆ ಮಗನನ್ನ ಒಳಗೆ ಬಿಟ್ಟು ಬಂದಿದ್ದಷ್ಟೆ ಗೊತ್ತಿತ್ತು. ಆದರೆ ಮಗು, ಅಪ್ಪ ಹೊರಕ್ಕೆ ನಡೆಯುತ್ತಲೇ, ಆತನ ಹಿಂದೆಯೇ ಬಂದಿತ್ತು, ಇದನ್ನ ತಂದೆ ಗಮನಿಸಿರಲಿಲ್ಲ. ಮಗು ಅಪ್ಪ ಹತ್ತಿದ್ದ ಟ್ರ್ಯಾಕ್ಟರ್ ಹತ್ತಿರ ಬರುವುದುಕ್ಕೂ, ತಂದೆ ಟ್ರ್ಯಾಕ್ಟರ್ ರಿವರ್ಸ್ ತೆಗೆಯುವುದಕ್ಕೂ ಸಮವಾಗಿದೆ. ಟ್ರ್ಯಾಕ್ಟರ್ನ ಹಿಂಬದಿ ರಾಡ್ ತಲೆಗೆ ಬಡಿದು ಮಗು ಸಾವನ್ನಪ್ಪಿದೆ.
ಹುಷಾರು!
ಪುಟ್ಟ ಮಗುವಿನ ಜೊತೆಗೆ ನಡೆದ ಘಟನೆಯ ವಿವರ ಕೊಟ್ಟು ವಾಟ್ಸ್ಯಾಪ್ ನಲ್ಲಿ ಪೋಷಕರಿಗೆ ಎಚ್ಚರದಿಂದ ಇರುವಂತೆ ಸಲಹೆ ನೀಡಲಾಗುತ್ತಿದೆ. ದಯಮಾಡಿ ಪೋಷಕರು ಮಕ್ಕಳ ಬಗ್ಗೆ ಒಂದು ಕ್ಷಣವೂ ಅಸಡ್ಡೆ ತೋರದಿರಿ.. ಯಾವಾಗಲೂ ಕಾರು ಮತ್ತು ಇನ್ನಿತರೆ ವಾಹನವನ್ನು ಹೊರಗೆ ತೆಗೆಯುವಾಗ ಚಿಕ್ಕ ಮಕ್ಕಳು ಇದ್ದಾಗ ತುಂಬಾ ಎಚ್ಚರವಹಿಸಿ... ಮತ್ತೆ ಹುಟ್ಟಿ ಬಾ ಕಂದ. ಆ ದೇವರು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಈ ರೀತಿ ನೋವುಗಳು ಯಾವ ಶತ್ರುವಿಗೂ ಆಗದಿರಲಿ ಎನ್ನುತ್ತಿರುವ ವಾಟ್ಸ್ಯಾಪ್ ಸಂದೇಶದಲ್ಲಿ ಸತ್ಯ ದುಃಖದ ಮಡುವಲ್ಲಿದೆ…
ಇದನ್ನು ಸಹ ಓದಿ
Read /ಅಪ್ಪನ ನಿವೃತ್ತಿ ಬಗ್ಗೆ ಪುತ್ರ ಕೆ.ಇ.ಕಾಂತೇಶ್ ಹೇಳಿದ್ದೇನು?
Read /KS Eshwarappa/ ನಿವೃತ್ತಿ ನಿರ್ಧಾರದ ಹಿಂದೇ ಬಿಎಸ್ ಯಡಿಯೂರಪ್ಪ & ಬಸವರಾಜ ಬೊಮ್ಮಾಯಿಯವರ ಆಟ ಕಾರಣವಾ? ಹೀಗಂದಿದ್ದು ಯಾರು?
Read / BREAKING NEWS/ ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್ ದಾವಣಗೆರೆ ಎಲಿಫೆಂಟ್ ಸಕ್ಸಸ್/ ಸೆರೆಯಾಗಿದ್ದೇಗೆ ವೈಲ್ಡ್ ಟಸ್ಕರ್!
Read / Election code of conduct/ ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ 9.5 KG ಚಿನ್ನ ಜಪ್ತಿ! ಯಾರದ್ದು ಇಷ್ಟೊಂದು ಬಂಗಾರ?
Read / BREAKING NEWS/ ಚನ್ನಗಿರಿಯಲ್ಲಿ ಸಕ್ರೆಬೈಲ್ ಆನೆ ಬಿಡಾರದ ವೈದ್ಯ ಡಾ.ವಿನಯ್ ಮೇಲೆ ದಾಳಿ
Read / ಶಿವಮೊಗ್ಗದ ಹೋಟೆಲ್ ವಿರುದ್ಧ ಕೇಸ್ ಗೆದ್ದ ಬೆಂಗಳೂರು ಗಾಂಧಿ ಬಜಾರ್ನ ವಿದ್ಯಾರ್ಥಿ ಭವನ
Read / ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ, ಭದ್ರಾವತಿಗೆ ಮಂಗೋಟೆ ರುದ್ರೇಶ್ !ಶಿವಮೊಗ್ಗ ನಗರ ಮಾತ್ರವೇ ಸಸ್ಪೆನ್ಸ್? ಬಿಜೆಪಿ ಲಿಸ್ಟ್ನಲ್ಲಿ ಶಿವಮೊಗ್ಗ ಜಿಲ್ಲೆ ವಿವರ ಇಲ್ಲಿದೆ
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News