BREAKING NEWS/ ಸಿಕ್ಕಿಬಿದ್ದ ಕಾಡಾನೆ/ ಆಪರೇಷನ್ ದಾವಣಗೆರೆ ಎಲಿಫೆಂಟ್ ಸಕ್ಸಸ್/ ಸೆರೆಯಾಗಿದ್ದೇಗೆ ವೈಲ್ಡ್ ಟಸ್ಕರ್!?
BREAKING NEWS/ Wild elephant was captured near Jenalli in Honnali taluk of Davanagere.
MALENADUTODAY.COM/ SHIVAMOGGA / KARNATAKA WEB NEWS
ದಾವಣೆಗೆರೆಯಲ್ಲಿ ನಡೆಯುತ್ತಿರುವ ಆಪರೇಷನ್ ಕಾಡಾನೆ ಯಶಸ್ವಿಯಾಗಿದೆ. ಹೊನ್ನಾಳಿ ತಾಲ್ಲೂಕು ಜೇನಳ್ಳಿಯ ಬಳಿಯಲ್ಲಿ ಕಾಡಾನೆಯನ್ನು ಸೆರೆಹಿಡಿಯಲಾಗಿದೆ. ಹಾಸನದ ಆಲೂರು ಕಡೆಯಿಂದ ಬಂದಿದ್ದ ಆನೆಯು ಸೂಳೆಕೆರೆಯ ಸುತ್ತಮುತ್ತ ತನ್ನ ರೌದ್ರಾವತಾರವನ್ನು ತೋರಿತ್ತು. ಅಲ್ಲಿಂದ ಹೊನ್ನಾಳಿ ಕಡೆಗೆ ಹೋದ ಆನೆಯು ನ್ಯಾಮತಿಯ ಮೂಲಕ ಶಿಕಾರಿಪುರದತ್ತ ಹೋಗುವ ಸಾಧ್ಯತೆ ಇತ್ತು.
ಸಿಕ್ಕಬಿದ್ದ ನರಹಂತಕ
ಆನೆಗಾಗಿ ಹುಡುಕಾಟ ನಡೆಸಿದ್ದ ಅರಣ್ಯ ಸಿಬ್ಬಂದಿ ಹಾಗೂ ಡಾರ್ಟ್ ತಜ್ಞರು ಇವತ್ತು ಆನೆಯ ಇರುವಿಕೆಯನ್ನು ಪತ್ತೆಮಾಡಿದ್ದರು. ಅಲ್ಲದೆ ಡ್ರೋನ್ ಮೂಲಕ ಆನೆಯನ್ನು ಸೈಟ್ ಮಾಡಿ, ಅದರನ್ನ ಅರವಳಿಕೆ ಚುಚ್ಚುಮದ್ದು ಕೊಟ್ಟು ಡಾರ್ಟ್ ಮಾಡಲು ಮುಂದಾಗಿದ್ದರು.
ಡಾ.ವಿನಯ್ ಮೇಲೆ ಅಟ್ಯಾಕ್
ಈ ಮಧ್ಯೆ ಕಾಡಾನೆ ಆಪರೇಷನ್ನಲ್ಲಿ ಮುಂಚೂಣಿಯಲ್ಲಿದ್ದ ಡಾ.ವಿನಯ್ರ ಮೇಲೆ ಕಾಡಾನೆಯು ದಾಳಿ ನಡೆಸಿತ್ತು. ಅರವಳಿಕೆ ಚುಚ್ಚುಮದ್ದು ಕೊಟ್ಟ ಬೆನ್ನಲ್ಲೆ ಆನೆಯು ಏಕಾಯೇಕಿ ದಾಳಿ ನಡೆಸಿ ವಿನಯ್ರ ಮೇಲೆ ಕಾಲಿಟ್ಟಿತ್ತು. ಈ ಘಟನೆಯಲ್ಲಿ ವಿನಯ್ರವರು ಗಂಭೀರವಾಗಿ ಗಾಯಗೊಂಡಿದ್ದರು.
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
ಮುಂದುವರಿದ ಕಾರ್ಯಾಚರಣೆ
ಈ ಘಟನೆಯ ನಂತರವೂ ಕಾರ್ಯಾಚರಣೆ ಮುಂದುವರಿದಿದೆ. ನಾಗರಹೊಳೆ, ಮೈಸೂರಿನಿಂದ ಬಂದಿದ್ದ ಡಾರ್ಟ್ ತಜ್ಞರು, ಆನೆಗೆ ಅರವಳಿಕೆ ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ಧಾರೆ. ಇನ್ನೂ ಸಕ್ರೆಬೈಲ್ ಬಿಡಾರದಿಂದ ತೆರಳಿದ್ದ ಭಾನುಮತಿ, ಬಹದ್ದೂರ್, ಸಾಗರ್, ಸೋಮಣ್ಣ ಬಾಲಣ್ಣ ಆನೆಗಳ ಸಹಾಯದಿಂದ ಮಾವುತರು ಕಾಡಾನೆಯನ್ನ ರೋಪ್ಗಳಿಂದ ಬಿಗಿದು ಕಟ್ಟಿ ಸೆರೆ ಹಿಡಿದಿದ್ದಾರೆ
ಖುಷಿಯಾದರು ಜನ
ಆನೆಗೆ ಪ್ರಜ್ಞೆ ಬರುವ ಹೊತ್ತಿಗೆ ಕಾಡಾನೆಯು ಸಕ್ರೆಬೈಲ್ ಆನೆಗಳ ನಡುವೆ ಬಂಧನಕ್ಕೊಳಗಾಗಿತ್ತು. ಇನ್ನೂ ಆನೆಯನ್ನು ಕಾಡಿಗೆ ಬಿಡಲಾಗುತ್ತದೆಯೋ ಅಥವಾ ಬಿಡಾರದಲ್ಲಿ ಟ್ರೈನ್ ಮಾಡಲಾಗುತ್ತದೆಯೋ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 200 ಕ್ಕೂ ಹೆಚ್ಚು ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಈ ಆನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಈ ಭಾಗದ ಜನರು ಕೂಡ ಆನೆಯನ್ನ ಸೆರೆಹಿಡಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಸಹ ಓದಿ
Read /ಶಿವಮೊಗ್ಗ ಸಿಟಿಯಲ್ಲಿ Made in Bangalore ಗನ್ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?
Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ ಟೀಂ/ ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?
Read / ಶಿವಮೊಗ್ಗದ ಚೆಕ್ಪೋಸ್ಟ್ಗಳಲ್ಲಿ ಕಾಂಚಾಣ ಸಂಚಾರ/ ಒಂದೇ ದಿನ ಪೊಲೀಸರಿಗೆ ಸಿಕ್ಕ ಕ್ಯಾಶ್ ಎಷ್ಟು ಗೊತ್ತಾ?
Read / ಆರ್ಎಂ ಮಂಜುನಾಥ್ ಗೌಡರ ‘ಕೈ’ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?
Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ
Read / CASE OF HANDI ANNI / ಚೀಲೂರು ಡಬ್ಬಲ್ ಅಟ್ಯಾಕ್, ದಾವಣಗೆರೆ ಎಸ್ಪಿ ಹೇಳಿದರು ನಡೆದ ಸತ್ಯ ಘಟನೆ!
Read / Shivamogga airport ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು
Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು?
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News