chatpat news : ದುಷ್ಕರ್ಮಿಗಳ ಓಡಾಟ, ಕಚೇರಿ ಕಡತಗಳಿಗೆ ಬೆಂಕಿ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

ಹಂಚಿಕೊಳ್ಳಿ
WhatsApp Facebook X Telegram
Shivamogga finance harassment Road accident
Shivamogga finance harassment Road accident

chatpat news : ಶಿವಮೊಗ್ಗ ಲೇಔಟ್‌ನಲ್ಲಿ ಶಸ್ತ್ರಾಸ್ತ್ರಧಾರಿಗಳ ಓಡಾಟ: ಸಿಸಿಟಿವಿಯಲ್ಲಿ ಸೆರೆ, ನಿವಾಸಿಗಳಲ್ಲಿ ಆತಂಕ

ಶಿವಮೊಗ್ಗದ ಒಡ್ಡಿನಕೊಪ್ಪದ ಪುಟ್ಟಪ್ಪ ಕ್ಯಾಂಪ್ ಬಡಾವಣೆಯಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಆರು ಮಂದಿ ದುಷ್ಕರ್ಮಿಗಳು ಶಸ್ತ್ರಾಸ್ತ್ರಗಳೊಂದಿಗೆ ಓಡಾಡಿದ್ದಾರೆ. ಜೀನ್ಸ್ ಪ್ಯಾಂಟ್ ಮತ್ತು ಬನಿಯನ್ ಧರಿಸಿದ್ದ ಅವರು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದರು. ಅವರ ಚಲನವಲನಗಳು ಎರಡೂವರೆ ನಿಮಿಷದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ. ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮುಸುಕುಧಾರಿಗಳ ಓಡಾಟ
ಮುಸುಕುಧಾರಿಗಳ ಓಡಾಟ

chatpat news ಕಾರ್ಮಿಕ ಇಲಾಖೆ ಕಚೇರಿ ಕಡತಗಳಿಗೆ ಬೆಂಕಿ ಆರೋಪ: ಶಿವಮೊಗ್ಗದಲ್ಲಿ ಸಾರ್ವಜನಿಕರ ಆಕ್ರೋಶ

ಶಿವಮೊಗ್ಗದ ವಿನೋಬನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿ ಕಡತಗಳಿಗೆ ಬೆಂಕಿ ಹಚ್ಚಿ ನಾಶಪಡಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಜಾ ದಿನವಾದ ಭಾನುವಾರ ಅಧಿಕಾರಿಗಳು ನಗರದ ಹೊರವಲಯದಲ್ಲಿ ಕಡತಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯಾವುದೇ ಆದೇಶವಿಲ್ಲದೆ ಕಡತ ನಾಶಪಡಿಸಿರುವ ಬಗ್ಗೆ ದಾಖಲೆಗಳನ್ನು ನೀಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕಡತಗಳ ನಾಶ
ಕಡತಗಳ ನಾಶ

ಹೆಚ್ಚುವರಿ ಎಸ್‌ಪಿ ಅನಿಲ್‌ ಕುಮಾರ್‌ ಭೂಮರೆಡ್ಡಿ ವರ್ಗಾವಣೆ: ಶಿವಮೊಗ್ಗಕ್ಕೆ ಒಂದು ಹುದ್ದೆ ಖಾಲಿ

ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ ಕುಮಾರ್‌ ಭೂಮರೆಡ್ಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಖಾಲಿ ಇರುವ ಹೆಚ್ಚುವರಿ ಎಸ್‌ಪಿ ಹುದ್ದೆಗೆ ವರ್ಗಾಯಿಸಿ ಒಳಾಡಳಿತ ಇಲಾಖೆ ಆದೇಶ ಹೊರಡಿಸಿದೆ. ಅನಿಲ್ ಕುಮಾರ್ ಅವರು 1994ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಇಲಾಖೆ ಸೇರಿ, 30 ವರ್ಷಗಳ ಸೇವೆ ಸಲ್ಲಿಸಿದ್ದಾರೆ. 2024ರಲ್ಲಿ ರಾಷ್ಟ್ರಪತಿ ಪದಕ ಪಡೆದಿದ್ದರು. ಅವರ ವರ್ಗಾವಣೆಯಿಂದ ಶಿವಮೊಗ್ಗದಲ್ಲಿ ಒಂದು ಹೆಚ್ಚುವರಿ ಎಸ್‌ಪಿ ಹುದ್ದೆ ತೆರವಾಗಿರುವ ಬಗ್ಗೆ ಸರ್ಕಾರ ಇನ್ನೂ ಯಾರನ್ನೂ ನೇಮಿಸಿಲ್ಲ.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor