ಶಿವಮೊಗ್ಗ : ರಾಜ್ಯದ ಗಮನ ಸೆಳೆದಿದ್ದ ಸಕ್ರೆಬೈಲು ಆನೆ ಬಿಡಾರದ ಅನಾರೋಗ್ಯದ ಸ್ಥಿತಿಯ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಬಾಲಣ್ಣ ಆನೆ ಬಲ ಭಾಗದ ಕಿವಿ ಗ್ಯಾಂಗ್ರಿನ್ ಸ್ಥಿತಿ ಗೆ ತಲುಪಿ. ಕಿವಿಯನ್ನೇ ಕತ್ತರಿಸುವಂತೆ ಮಾಡಿತು. ಕಿವಿ ಕತ್ತರಿಸಿದ ಬಗ್ಗೆ ಪರಿಸರ ಪ್ರೀಯರಿಂದ ಸಾಕಷ್ಟು ವಿರೋಧಗಳು ವ್ಯಕ್ತವಾದವು.ಕೇಂದ್ರ ವನ್ಯಜೀವಿ ಮಂಡಳಿ ಕೂಡ ಅಸಮಧಾನ ವ್ಯಕ್ತಪಡಿಸಿತು.
ಬಾಲಣ್ಣ ಆನೆಯ ಆರೋಗ್ಯ ಸ್ಥಿತಿ ಸುಧಾರಣೆಗೆ ತರುವುದು ಅರಣ್ಯಾಧಿಕಾರಿಗಳಿಗೆ ಬಿಗ್ ಟಾಸ್ಕ್ ಆಗಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಆನೆ ಆರೋಗ್ಯ ಸುಧಾರಣೆಗೆ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು. ಹೀಗಾಗಿ ತಜ್ಞ ವನ್ಯಜೀವಿ ವೈದ್ಯರ ತಂಡ ರಚಿಸಲಾಗಿತ್ತು. ವೈದ್ಯರ ಹಗಲು ರಾತ್ರಿಯ ಚಿಕಿತ್ಸೆ ಬಾಲಣ್ಣ ಆನೆಯ ಆರೋಗ್ಯದಲ್ಲಿ ಚೇತರಿಕೆ ಕಾಣುವಂತೆ ಮಾಡಿದೆ. ತಜ್ಞ ವೈದ್ಯರ ಶಿಫಾರಸ್ಸು ಮಾಡಿದರೆ ಬಾಲಣ್ಣ ಆನೆಯನ್ನ ಕಾಡಿಗೆ ಬಿಡಲು ಆಧಿಕಾರಿಗಳು ನಿರ್ಧರಿಸಿರುವುದು ಮೂಲಗಳಿಂದ ತಿಳಿದು ಬಂದಿದೆ.
Balanna Elephant Recovery Return to Wild


Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
