ಶಿವಮೊಗ್ಗ | ಜಿಲ್ಲೆಯ ಸೊರಬ ತಾಲ್ಲೂಕು ಆನವಟ್ಟಿ (Anavatti) ವ್ಯಾಪ್ತಿಯಲ್ಲಿ ಮನೆಯ ಬೀಗ ಒಡೆದು, ಮನೆಯಲ್ಲಿದ್ದ ಬಂಗಾರ, ಹಣ ಕಳ್ಳತನ ಮಾಡಲಾಗಿದೆ. ಇಲ್ಲಿನ ದಾನಮ್ಮ ಬಡಾವಣೆಯ ನಿವಾಸಿ ಪ್ರಶಾಂತ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ತಮ್ಮ ಹೆಂಡತಿ ಯಲ್ಲಮ್ಮರವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದರು. ಅವರನ್ನ ನೋಡಿಕೊಂಡು ಶಿವಮೊಗ್ಗದಲ್ಲಿಯೇ ಉಳಿದಿದ್ದರು. ಈ ನಡುವೆ ಇತ್ತ ಮನೆಯಲ್ಲಿ ಯಾರೂ ಇಲ್ಲದೆ ಇರುವುದನ್ನು ಗಮನಿಸಿರುವ ಕಳ್ಳರು ಜ.6ರ ರಾತ್ರಿ ಮನೆಯ ಬೀಗ ಒಡೆದು ಒಳನುಗ್ಗಿ ಎರಡು ಗಾಡ್ರೆಜ್ ಗಳ ಬೀಗ ಒಡೆದು 15 ಗ್ರಾಂ ಬಂಗಾರದ ಆಭರಣ 40 ಗ್ರಾಂ ಬೆಳ್ಳಿ ಹಾಗೂ 50 ಸಾವಿರ ರು. ಹಣ ಕಳ್ಳತನ ಮಾಡಿದ್ದಾರೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಸಿಮ್ಸ್ ಹಾಸ್ಟೆಲ್ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ ವೈದ್ಯ ಆತ್ಮಹತ್ಯೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
