ಗಾಂಧಿ ಬಜಾರ್​ನ ಮಹಾದ್ವಾರವನ್ನು ಏರಿ ಕುಳಿತ ಚಾಮುಂಡೇಶ್ವರಿ ! ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಮಂದಿ

This Article Written by / Malenadu Today / ಮಾರ್ಚ್ 11, 2024

ಗಾಂಧಿ ಬಜಾರ್​ನ ಮಹಾದ್ವಾರವನ್ನು ಏರಿ ಕುಳಿತ ಚಾಮುಂಡೇಶ್ವರಿ ! ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಮಂದಿ

Shivamogga Mar 11, 2024   mahadwara of Gandhi Bazaar ,Chamundeshwari   ಶಿವಮೊಗ್ಗದ ಗಾಂಧಿ ಬಜಾರ್​ನ ಮುಖ್ಯಧ್ವಾರದಲ್ಲಿ ಚಾಮುಂಡಿಯ ಪ್ರತಿಕೃತಿಯನ್ನ ನಿಲ್ಲಿಸಲಾಗಿದೆ. ಕೋಟೆ ಮಾರಿಕಾಂಬಾ ಜಾತ್ರೆಯ ಅಂಗನವಾಗಿ ವಿಶೇಷವಾದ ದ್ವಾರವನ್ನ ನಿರ್ಮಿಸಲಾಗಿದ್ದು, ಅದರ ಮೇಲೆ ಚಂಡಿ ಚಾಮುಂಡಿಯ ಪ್ರತಿಕೃತಿಯನ್ನ  ನಿಲ್ಲಿಸಲಾಗಿದೆ. ಸಿಂಹದ ಮೇಲೆ ಕುಳಿತಿರುವ ಚಾಮುಂಡೇಶ್ವರಿ ,ಮೂರ್ತಿ  ಚಲಿಸುವ ಸ್ಥಿತಿಯಲ್ಲಿದೆ. ನಿನ್ನೆ ಸಂಜೆ ಮೂರ್ತಿಯನ್ನು ನಿಲ್ಲಿಸಲಾಗಿದ್ದು, ಜನರು ದಂಡು ದಂಡಾಗಿ ಬಂದು ಮೂರ್ತಿ ಫೋಟೋಗಳನ್ನ ಸೆಲ್ಫಿಗಳನ್ನ ತೆಗೆದುಕೊಳ್ಳುತ್ತಿದ್ದರು. 

ಈ ಹಿಂದೆ ಗಣೇಶೋತ್ಸವದಲ್ಲಿ ಉಗ್ರ ನರಸಿಂಹನ ಮೂರ್ತಿಯನ್ನು ಪ್ರತಿಷ್ಟಾಪಿಸಿದ ಟೀಂ ಚಾಮುಂಡಿಯ ವಿಗ್ರಹವನ್ನ ನಿರ್ಮಿಸಿದೆ ಎನ್ನಲಾಗಿದೆ. ಇನ್ನೂ ಮಾರಿಕಾಂಬೆ ಜಾತ್ರೆಯ ಅಲಂಕಾರದ ಬಗ್ಗೆ ಹೇಳಲೇ ಬೇಕಿದೆ. ಅದರ ಬಗ್ಗೆ ವಿವರವಾಗಿ ಬರೆಯುತ್ತವೇ ಕೆಲವು ಹೊತ್ತಿನಲ್ಲಿ. ಇನ್ನೂ ನಾಳೆಯಿಂದಲೇ ಜಾತ್ರೆ ಆರಂಭವಾಗಲಿದ್ದು, ಜಾತ್ರೆಗಾಗಿ ಜನರು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. 

ಮುಂದಿನ ಸುದ್ದಿ ಒದಿ

Leave a Comment