Sunday, 10 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಸಕ್ರೆಬೈಲಿನಲ್ಲಿ ಹೆಣ್ಣಾನೆಗಳ ಕೊರತೆ ನಡುವೆ ಹೇಮಾವತಿ ದುಬಾರಿಗೆ ಶಿಫ್ಟ್ ? ಬಿಡಾರದಲ್ಲಿ ಹೆಣ್ಣಾನೆಗಳು ಅನಿವಾರ್ಯವೇಕೆ ?  ಜೆಪಿ ಬರೆಯತ್ತಾರೆ.

131
Last updated: April 4, 2025 10:37 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 4, 2025

ರಾಜ್ಯದ ಪ್ರತಿಷ್ಠಿತ ಸಕ್ರೆಬೈಲು ಆನೆ ಬಿಡಾರದಲ್ಲಿ ಹೆಣ್ಣಾನೆಗಿಂತಲೂ ಗಂಡಾನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ನಾಲ್ಕರಿಂದ ಐದು ಗಂಡಾನೆಗೆ ಒಂದು ಹೆಣ್ಣಾನೆಯಾದ್ರೂ ಸಂಗಾತಿಯಾಗಿರಬೇಕಾದ ಅನಿವಾರ್ಯತೆ ಇದೆ. ಆದರೆ ಈಗಿರುವ ಇಪ್ಪತ್ತು ಗಂಡಾನೆಗಳಿಗೆ ಕೇವಲ ನಾಲ್ಕು ಹೆಣ್ಣಾನೆಗಳಿವೆ. ಹೆಣ್ಣಾನೆಗಳು ಬಿಡಾರದ ಗಂಡಾನೆಗಳಿಗೂ ಹಾಗು ಶೆಟ್ಟಿಹಳ್ಳಿ ಕಾಡಾನೆಗಳಿಗೂ ಸಂಗಾತಿಯಾಗಿ ಗುರುತಿಸಿಕೊಂಡಿವೆ. ಹೆಣ್ಣಾನೆಗಳನ್ನು ಬೇರೆಡೆ ವರ್ಗಾಯಿಸುವುದರಿಂದ ಬಿಡಾರದ ಗಂಡಾನೆಗಳನ್ನ ನಿಯಂತ್ರಿಸುವುದು ಕಷ್ಟಸಾಧ್ಯವಾಗುತ್ತದೆ. ಎನಿಮಲ್ ಎಕ್ಸ್ ಚೆಂಜ್ ಪ್ರೋಗ್ರಾಮ್ ಅಡಿ ಈಗಾಗಲೇ 2011 ರಲ್ಲಿ ಪ್ರಕೃತಿ ಹೆಣ್ಣಾನೆಯನ್ನು ಪಾಂಡಿಚೇರಿಗೆ ಸ್ಥಳಾಂತರಿಸಲಾಗಿತ್ತು. 2017 ರಲ್ಲಿ ಸಕ್ರೆಬೈಲು ಆನೆ ಬಿಡಾರದಿಂದ ನಾಲ್ಕು ಸಾಕಾನೆಗಳನ್ನು  ಜಾರ್ಖಂಡ್ ನ ದುದ್ವಾ ಸಫಾರಿಗೆ ಕಳುಹಿಸಲಾಗಿತ್ತು.  ಅಮೃತ(12) ,ಅದರ ಮರಿ ಪಾರ್ವತಿ‌ (2), ಕಿರಣ(4), ಹಾಗು ಭಾಸ್ಕರ (5) ಸಣ್ಣ ಆನೆಗಳೇ ಆಗ ಜಾರ್ಖಂಡ್ ಗೆ ಸಾಗಿಸಲಾಗಿತ್ತು. ಅಂದು ರಾಜ್ಯದಿಂದ ಎಂಟು ಆನೆಗಳು ಉತ್ತರ ಪ್ರದೇಶದ ದೂದ್ವಾ ನ್ಯಾಷನಲ್ ಪಾರ್ಕ್‌ಗೆ ಸ್ಥಳಾಂತರಗೊಂಡಿದ್ದು,ಅಲ್ಲಿ ಘೆಂಡಾಮೃಗಗಳ ಸಫಾರಿಗೆ ಹಾಗು ಪೆಟ್ರೋಲಿಂಗ್‌ಗೆ ಬಳಸಲಾಗಿತ್ತು. ಈಗ ಮತ್ತೆ ಹೇಮಾವತಿ ಮರಿಯಾನೆಯನ್ನು ದುಬಾರಿಗೆ ಸ್ಥಳಾಂತರಿಸಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಆದೇಶ ಪಾಲನೆ ಮಾಡಬೇಕಾಗಿರುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ ಅರಣ್ಯ ಮಂತ್ರಿಗಳು ಈ ಅವೈಜ್ಞಾನಿಕ ಪ್ರಕ್ರೀಯೆಯನ್ನು ಕೈಬಿಡಬೇಕಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ಥಳಾಂತರಗೊಂಡ ಆನೆಗಳ ಪೈಕಿ ಹೆಣ್ಣಾನೆಗಳ ಸಂಖ್ಯೆ ದೊಡ್ಡದಿದೆ .ಹೇಮಾವತಿಗೆ ಇನ್ನು ಒಂಬತ್ತುವರೆ ವರ್ಷ. ಈಗಾಗಲೇ ಅದು ಕಾಡಾನೆಯ ಸಂಪರ್ಕದಲ್ಲಿದ್ದು. ಒಂದು ಮರಿಗೂ ಜನ್ಮ ನೀಡಿತ್ತು. ಆದರೆ ಅನಾರೋಗ್ಯದಿಂದ ಮರಿ ಸಾವನ್ನಪ್ಪಿತು. ಹೇಮಾವತಿಯನ್ನು ದುಬಾರಿಗೆ ಸ್ಥಳಾಂತರಗೊಳಿಸಿದರೆ  ಸಕ್ರೆಬೈಲು ಬಿಡಾರದ ಪಾಲಿಗೆ ಅದು ದೊಡ್ದ ಸೆಟ್ ಬ್ಯಾಕ್ ಆಗಲಿದೆ. ಇದು ಅರಣ್ಯಾಧಿಕಾರಿಗಳಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಹಾಸನ ಜಿಲ್ಲೆಯಿಂದ ಬಿಡಾರಕ್ಕೆ ಕರೆತಂದ ವಿಕ್ರಾಂತ್ ಹಾಗು ಮಕ್ನಾ ಗಂಡಾನೇ ಸೇರಿದಂತೆ ಒಟ್ಟು ಇಪ್ಪತ್ತು ಗಂಡಾನೆಗಳು ಕ್ಯಾಂಪ್‌ನಲ್ಲಿವೆ. ಇಷ್ಟು ದೊಡ್ಡ ಪ್ರಮಾಣದ ಗಂಡಾನೆಗಳಿಗೆ ಏನಿಲ್ಲವೆಂದರೂ ಆರರಿಂದ ಎಂಟು ಸಾಕಾನೆಗಳಾದ್ರೂ ಇರಬೇಕಾಗುತ್ತದೆ. ಈಗಿರುವ ನಾಲ್ಕು ಹೆಣ್ಣಾನೆಗಳಲ್ಲಿ ಒಂದು ಸಂಖ್ಯೆ ಕಡಿಮೆಯಾದ್ರೂ,ಮಾವುತರಿಗೆ ಗಂಡಾನೆಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.

ಬಿಡಾರದಲ್ಲಿ ಏಕೆ ಹೆಣ್ಣಾನೆಗಳು ಇರಬೇಕು?

ಪ್ರಕೃತಿ ಸಹಜವಾಗಿ ಗಂಡು ಹೆಣ್ಣಿಗೆ ಆಕರ್ಷಣೆಯಾಗಿರುತ್ತಾನೆ. ಅದೇ ರೀತಿ ಪ್ರಾಣಿಗಳಲ್ಲೂ ಈ ನಿಯಮವಿದೆ. ಹೆಣ್ಣಾನೆಯೊಂದಿಗೆ ಗಂಡಾನೆ ಇದ್ದಾಗ ಅದು ಸೌಮ್ಯ ಸ್ವಭಾವವನ್ನು ಹೊಂದಿರುತ್ತದೆ. ಬಿಡಾರದಲ್ಲಿ ಹೆಣ್ಣಾನೆಯೊಂದು ಮರಿಗೆ ಜನ್ಮ ನೀಡಿದಾಗ ಅದರ ಆರೈಕೆಗೆ ಮತ್ತೊಂದು ಹೆಣ್ಣಾನೆ ಬೇಕು. ಇಲ್ಲಿ ಹಿರಿಯ ಹೆಣ್ಣಾನೆಯೇ ಬಾಣಂತನದ ಜವಬ್ದಾರಿ ಹೊತ್ತಿರುತ್ತದೆ. 

ಕಾಡಾನೆಗಳ ಕಾರ್ಯಾಚರಣೆಗೆ ಹೋದಾಗ ಅಲ್ಲಿ ಕೂಡ ಹೆಣ್ಣಾನೆ ಬೇಕಾಗುತ್ತದೆ. ಕೇವಲ ಗಂಡಾನೆಗಳನ್ನು ಇಟ್ಟುಕೊಂಡು ಕಾಡಾನೆ ಸೆರೆ ಹಿಡಿಯಲು ಸಾಧ್ಯವಾಗುವುದಿಲ್ಲ ಐದು ಕುಮ್ಕಿ ಆನೆಗಳಿದ್ದರೆ ಅದರಲ್ಲಿ ಒಂದಾದ್ರೂ ಹೆಣ್ಣಾನೆಯನ್ನು ಬಳಸಲಾಗುತ್ತದೆ. 

ಇನ್ನು ದಸರಾ ಉತ್ಸವದಂತೆ ಮೆರವಣಿಗೆಯಲ್ಲಿ ಸಹ ಹೆಣ್ಣಾನೆಯನ್ನ ಬಳಸಲಾಗುತ್ತದೆ. 

ಬಿಡಾರದಲ್ಲಿ ಗಂಡಾನೆಗೆ ಚಿಕಿತ್ಸೆ ನೀಡುವಾಗ ಪಕ್ಕದಲ್ಲಿ ಒಂದು ಹೆಣ್ಣಾನೆಯನ್ನು ಬಳಸಿಕೊಳ್ಳಲಾಗುತ್ತದೆ.

ಹೇಮಾವತಿ ಸ್ಥಳಾಂತರ ನಿಕ್ಕಿ

ಹೇಮಾವತಿ ಆನೆಯನ್ನು ದುಬಾರಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿರವುದು ನಿಜ.ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು,ಇನ್ನೆರೆಡು ದಿನಗಳಲ್ಲಿ ಹೇಮಾವತಿ ದುಬಾರಿಗೆ ಸ್ಥಳಾಂತರಗೊಳ್ಳಲಿದೆ. ಹೇಮಾವತಿ ತೆರವಿನಿಂದ ಬಿಡಾರದಲ್ಲಿ ಕೇವಲ ಮೂರು ಹೆಣ್ಣಾನೆಗಳು ಉಳಿದಂತಾಗುತ್ತದೆ.

SUMMARY | The state’s prestigious Sakrebailu elephant camp has more males than females

KEYWORDS | Sakrebailu,  elephant camp, female elephant, hemavathi shift,   

Share This Article
Facebook Whatsapp Whatsapp Telegram Threads Copy Link
Previous Article ಆಪ್ರಾಪ್ತ ಬಾಲಕನನ್ನು ರಕ್ಷಿಸಿದ RPF ಅಧಿಕಾರಿಗಳು
Next Article ದಿನ ಭವಿಷ್ಯ | ಹೊಸ ದಿನ ಹೊಸತು ಏನಿದೆ ರಾಶಿಫಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

Rashtrabhakta Balaga
SHIVAMOGGA NEWS TODAY

Rashtrabhakta Balaga ಡಿಸಿ ಕಚೇರಿ ಮುಂಭಾಗದ ಆಟದ ಮೈದಾನ ವಕ್ಫ್ ಆಸ್ತಿಯಲ್ಲ, ಕೂಡಲೇ ಖಾತೆ ರದ್ದುಪಡಿಸಿ, ಕೆಎಸ್​ ಈಶ್ವರಪ್ಪ

By Prathapa thirthahalli
shiralakoppa police raid and sp statement  bommanakatte murder case sp mithun kumar
SHIVAMOGGA NEWS TODAY

Bommanakatte Murder case july 11 : ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯ : ಎಸ್ ​ಪಿ ಹೇಳಿದ್ದೇನು

By Prathapa thirthahalli
Online frauds
SHIVAMOGGA NEWS TODAY

Chatpat news today : ನಿಷೇಧಿತ PFI ಜಿಲ್ಲಾಧ್ಯಕ್ಷ ಶಾಹೀದ್ ಖಾನ್‌ಗೆ ಶಿವಮೊಗ್ಗಕ್ಕೆ, ಮೆಗ್ಗಾನ್‌ನಲ್ಲಿ ನೀರಿನ ಕೊರತೆ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​

By Prathapa thirthahalli
SHIVAMOGGA NEWS TODAY

ಸ್ನೇಹಿತನ ಮಗನ ಸಾವಿನ ಸಂಕಷ್ಟದಲ್ಲೂ ಜಾಗೃತಿ ಮೂಡಿಸಿದ ಗೆಳೆಯರು | ಗೆಳೆಯರ ಮನವಿ ಏನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up