KARNATAKA NEWS/ ONLINE / Malenadu today/ May 28, 2023 SHIVAMOGGA NEWS
ಶಿವಮೊಗ್ಗ/ ಕೇಂದ್ರ ಕಾರಾಗೃಹ – Malenadu Today- Malnad news live/ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ದಿಢೀರ್ ರೇಡ್ ನಡೆಸಿದ್ಧಾರೆ.
ನೂತನ ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಈ ರೇಡ್ ನಡೆದಿದೆ ಎನ್ನಲಾಗುತ್ತಿದೆ. ಇನ್ನು ಪೊಲೀಸರ ದಿಢೀರ್ ದಾಳಿ ವೇಳೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂಬ ಮಾಹಿತಿಯಿದೆ.
ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹಾಗೂ ಡಿವೈಎಸ್ಪಿ ಬಾಲರಾಜ್ ಸೇರಿದಂತೆ 10 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು 50 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರಾಗೃಹ ಪರಿಶೀಲನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೈಲ್ ರೇಡ್ ಆರಂಭಿಸಿದ ಪೊಲೀಸರು, ಸುಮಾರು 2 ಗಂಟೆಗೂ ಅಧಿಕ ಕಾಲ ಪರಿಶೀಲನೆ ನಡೆಸಿದ್ದಾರೆ.
ಪೆಟ್ರೋಲ್ ಬಂಕ್ ಬಳಿಯಲ್ಲಿ ಸ್ಫೋಟಗೊಂಡ ಕಾರಿನ ಬ್ಯಾಟರಿ
ಬೀರೂರು/ ಪೆಟ್ರೋಲ್ ಹಾಕಿಸಲು ಬಂದ ವೇಳೆ ಕಾರೊಂದರ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಲ್ಲಿ ನಡೆದಿದೆ.
ನಡೆದಿದ್ದೇನು?
ಇಲ್ಲಿನ ಪೆಟ್ರೋಲ್ ಬಂಕ್ ಬಳಿಯಲ್ಲಿ ಇವತ್ತು ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಆಲ್ದೂರಿನಿಂದ ಬೀರೂರಿಗೆ ಕುಟುಂಬವೊಂದು ಕಾರಿನಲ್ಲಿ ಬಂದಿತ್ತು. ಪೆಟ್ರೋಲ್ ಹಾಕಿಸುವ ಸಲುವಾಗಿ, ಚಾಲಕ ಕಾರನ್ನು ಬಂಕ್ಗೆ ಕೊಂಡೊಯ್ದಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಬ್ಯಾಟರಿ ಬಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.
ಸ್ಥಳೀಯರ ದೈರ್ಯ ಸಾಹಸ!
ಇನ್ನೂ ಘಟನೆ ಬೆನ್ನಲ್ಲೆ ಪೆಟ್ರೋಲ್ ಬಂಕ್ನಲ್ಲಿದ್ದವರು ಹಾಗೂ ಸ್ಥಳೀಯರು ಸಹಾಯಕ್ಕೆ ನಿಂತಿದ್ದಾರೆ. ಬೆಂಕಿಯ ಅಪಾಯವನ್ನು ಲೆಕ್ಕಿಸಿದೇ ಕಾರಿನಲ್ಲಿದ್ದ ಮೂವರು ಮಹಿಳೆಯರು ಹಾಗೂ ಮಗುವನ್ನ ರಕ್ಷಿಸಿದ್ದಾರೆ. ಅಲ್ಲದೆ, ಕಾರನ್ನು ಹಿಂದಕ್ಕೆ ನೂಕಿ, ಫೈರ್ ಸೇಫ್ಟಿ ಕ್ಯಾನ್ ಬಳಸಿ ಬೆಂಕಿ ನಂದಿಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಕಾರನ್ನ ದೂರಕ್ಕೆ ಎಳೆದು ಬೆಂಕಿ ನಂದಿಸಿದ್ದರಿಂದ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ. ಇನ್ನೂ ಬಂಕ್ನಲ್ಲಿ ಸಂಭವಿಸಬಹುದಾಗಿದ್ದ ಅಪಾಯವೂ ಸಹ ತಪ್ಪಿದೆ.
ಘಟನೆ ಬೆನ್ನಲ್ಲೆ ಸ್ಥಳದಲ್ಲಿ ಹಲವು ಮಂದಿ ಜಮಾಯಿಸಿದ್ದರು. ಬಂಕ್ ನಲ್ಲಿದ್ದ ಫೈರ್ ಸೇಫ್ಟಿ ಸಾಮಗ್ರಿಗಳಿಂದ ಬೆಂಕಿ ನಂದಿಸಲು ಸಹಾಯವಾಗಿದೆ. ಇನ್ನೂ ಫೈರ್ ಸೇಫ್ಟಿ ಸ್ಪ್ರೇ ಹೊಡೆಯುತ್ತಲೇ, ಕಾರಿನ ಸುತ್ತಮುತ್ತ ಮಂಜು ಆವರಿಸಿದಂತಹ ದೃಶ್ಯ ಸೃಷ್ಟಿಯಾಗಿದೆ.
