ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಎಸ್ಸೈಗೆ ಆತ್ನೀಯವಾಗಿ ಬೀಳ್ಕೊಟ್ಟ ಎಸ್ಪಿ ಮಿಥುನ್ ಕುಮಾರ್

ಹಂಚಿಕೊಳ್ಳಿ
WhatsApp Facebook X Telegram

ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಎಸ್ಸೈಗೆ ಆತ್ನೀಯವಾಗಿ ಬೀಳ್ಕೊಟ್ಟ ಎಸ್ಪಿ ಮಿಥುನ್ ಕುಮಾರ್

ಪೊಲೀಸ್ ಇಲಾಖೆಯಲ್ಲಿ ಇಂದು ನಿವೃತ್ತರಾದ ಎಸ್ಸೈ ಕೆ.ಎನ್ ಚಂದ್ರಶೇಖರ್ ರವರಿಗೆ ಎಸ್ಪಿ ಮಿಥುನು ಕುಮಾರ್ ಆತ್ಮೀಯವಾಗಿ ಬೀಳ್ಕೊಟ್ಟರು.  ಭದ್ರಾವತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಎಎಸ್ಸೈ ಆಗಿರುವ ಚಂದ್ರಶೇಖರ್ ವೃತ್ತಿ ಬದುಕಿನಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.  ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ  ಈ ದಿನ ದಿನಾಂಕ :28/02/2023 ರಂದು ವಯೋ ನಿವೃತ್ತಿ ಹೊಂದಿದ್ದಾರೆ. ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಎಸ್ಪಿ ಮಿಥುನ್ ಕುಮಾರ್ ಜಿ. ಕೆ. ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿದರು. ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ  ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ  ಉಪಸ್ಥಿತರಿದ್ದರು.

Malenadu Today Shivamogga

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor