ಮನೆ ಮನೆಗೆ ಕುಮಾರಣ್ಣ! ಮತ್ತೊಮ್ಮೆ ಶಾರದಮ್ಮ! ಗ್ರಾಮಾಂತರ ಕ್ಷೇತ್ರದ ಸ್ಲೋಗನ್​ ಖದರ್ ಹೆಚ್ಚಿಸಲಿದೆ ಪಂಚರತ್ನ ಯಾತ್ರೆ

MALENADUTODAY.COM| SHIVAMOGGA NEWS 

ಶಿವಮೊಗ್ಗದಲ್ಲಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ್​ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ತಾವು ಕಾಂಗ್ರೆಸ್​ ಸೇರುತ್ತಾರೆ ಎನ್ನುವ ವಿಚಾರ ಮುಗಿದ ಅದ್ಯಾಯ. ಅಂತಹ ಯಾವುದೇ ಇರಾದೆಯು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಬಗ್ಗೆ ಮಾಹಿತಿ ನೀಡಿದ ಅವರು, ಫೆಬ್ರವರಿ 22 ಮತ್ತು 23 ರಂದು ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಪಂಚರತ್ನ ಯಾತ್ರೆ ಆಗಮಿಸಲಿದೆ ಎಂದು ತಿಳಿಸಿದ್ಧಾರೆ. 

ಶಿವಮೊಗ್ಗ ಜೈಲಿನಲ್ಲಿ ಡಿಶುಂ-ಡಿಶುಂ! ಒಬ್ಬನಿಗೆ ಆರು ಜನರಿಂದ ಥಳಿತ!

ಎಲ್ಲೆಲ್ಲಿ ಯಾತ್ರೆ? 

ಫೆಬ್ರವರಿ 22 ರಂದು ಯಾತ್ರೆ ಅರೆಬಿಳಚಿಯಿಂದ ಕಲ್ಲಿಹಾಳ್, ಎಮ್ಮೆಟಿ, ಹೊಳೆಹೊನ್ನೂರು ಕೈಮರ ವೃತ್ತ, ಆನವೇರಿ, ಮಂಗೋಟೆ, ಹರಮಘಟ್ಟ ನುಗ್ಗೆಮಲ್ಲಾಪುರ, ಚೋರಡಿ, ಹಾರನಹಳ್ಳಿ ತಲುಪಲಿದೆ. ನಂತರ ಮಲವಗೊಪ್ಪ ತಲುಪಲಿದ್ದು ಅಲ್ಲಿ ಮಾಜಿ ಸಿಎಂ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 23 ರಂದು ಸೂಳೆಬೈಲು, ಹಸೂಡಿ, ಕಾಟಿಕೆರೆ ಹೊಳೆಬೆನವಳ್ಳಿ ಯಾತ್ರೆ ಸಾಗಲಿದೆ ಎಂದು ತಿಳಿಸಿದ ಶಾರದಾ ಪೂರ್ಯನಾಯ್ಕ್​ ಮನೆ ಮನೆಗೆ ಕುಮಾರಣ್ಣ ಮತ್ತೊಮ್ಮೆ ಶಾರದಮ್ಮ ಎಂಬ ಘೋಷಣೆ ಅಡಿ  ಬೂತ್ ಮಟ್ಟದ ಕಾರ್ಯಕರ್ತರು ಕಮಿಟಿಯವರು ಪ್ರಚಾರ ಆರಂಭಿಸಲಿದ್ದಾರೆ ಎಂದರು.

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

Leave a Comment